ಇಂದು ಎಪಿಜೆ ಅಬ್ದುಲ್ ಕಲಾಂ ಸ್ಮರಣಾರ್ಥ ದಿನ: ವೈಜ್ಞಾನಿಕ ಸಾಧನೆಗಳ ವಿವರ

ಎಪಿಜೆ ಅಬ್ದುಲ್ ಕಲಾಂ ಅವರು ಬಾಹ್ಯಾಕಾಶ ವಿಜ್ಞಾನಿ ಮತ್ತು ಶಿಕ್ಷಕರಾಗಿದ್ದರು, ಅವರು 2002 ರಿಂದ 2007 ರವರೆಗೆ ಭಾರತದ 11 ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿ 'ಜನರ ರಾಷ್ಟ್ರಪತಿ' ಎಂದು ಖ್ಯಾತಿ ಪಡೆದಿದ್ದರು. 

Last Updated : Jul 27, 2019, 12:47 PM IST
ಇಂದು ಎಪಿಜೆ ಅಬ್ದುಲ್ ಕಲಾಂ ಸ್ಮರಣಾರ್ಥ ದಿನ: ವೈಜ್ಞಾನಿಕ ಸಾಧನೆಗಳ ವಿವರ  title=

ನವದೆಹಲಿ: ಎಪಿಜೆ ಅಬ್ದುಲ್ ಕಲಾಂ ಅವರು ಬಾಹ್ಯಾಕಾಶ ವಿಜ್ಞಾನಿ ಮತ್ತು ಶಿಕ್ಷಕರಾಗಿದ್ದರು, ಅವರು 2002 ರಿಂದ 2007 ರವರೆಗೆ ಭಾರತದ 11 ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿ 'ಜನರ ರಾಷ್ಟ್ರಪತಿ' ಎಂದು ಖ್ಯಾತಿ ಪಡೆದಿದ್ದರು. 

ಜುಲೈ 27, 2015 ರಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) -ಶಿಲ್ಲಾಂಗ್‌ನಲ್ಲಿ ಉಪನ್ಯಾಸ ನೀಡುವಾಗ ಕಲಾಂ ಕುಸಿದುಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದರು. ಈಗ ಅವರು ನಮ್ಮನ್ನು ಆಗಲಿ ಐದು ವರ್ಷಗಳಾಗುತ್ತಾ ಬಂತು ಈ ಹಿನ್ನಲೆಯಲ್ಲಿ ಅವರ ವೈಜ್ಞಾನಿಕ ಕೊಡುಗೆಗಳನ್ನು ನಾವು ಇಲ್ಲಿ ಸ್ಮರಿಸಬೇಕಾಗಿದೆ. 

  • ಭಾರತವು ತನ್ನದೇ ಆದ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಎಸ್‌ಎಲ್‌ವಿ) ಹೊಂದಬೇಕೆಂಬ ಕನಸು ಡಾ. ಕಲಾಂ ಅವರ ಕಠಿಣ ಪರಿಶ್ರಮ ಮತ್ತು  ದಶಕಕ್ಕೂ ಹೆಚ್ಚು ಕಾಲದ ಪ್ರಯತ್ನದಿಂದಾಗಿ ದೇಶವು ತನ್ನ ಮೊದಲ ಸ್ಥಳೀಯ ಎಸ್‌ಎಲ್‌ವಿ ಹೊಂದಲು ಸಾಧ್ಯವಾಯಿತು. ಎಸ್‌ಎಲ್‌ವಿ III ಅನ್ನು ಕಲಾಂ ಅಭಿವೃದ್ಧಿಪಡಿಸಿದ್ದು, ಇದನ್ನು ರೋಹಿಣಿ ಉಪಗ್ರಹವನ್ನು ಭೂಮಿಯ ಕಕ್ಷೆಗೆ ಉಡಾಯಿಸಲು ಬಳಸಲಾಗುತ್ತಿತ್ತು. ಇದು ಬಾಹ್ಯಾಕಾಶ ಕ್ಲಬ್‌ಗೆ ಭಾರತದ ಪ್ರವೇಶವನ್ನು ಗುರುತಿಸಿದೆ.
  • ಎರಡು ದಶಕಗಳ ಕಾಲ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ದಲ್ಲಿ ಕೆಲಸ ಮಾಡಿದ ನಂತರ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಯಲ್ಲಿ ಸ್ಥಳೀಯ ಮಾರ್ಗದರ್ಶಿ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಕಲಾಂ ವಹಿಸಿದ್ದರು.
  • ಅಗ್ನಿ ಮತ್ತು ಪೃಥ್ವಿ ಕ್ಷಿಪಣಿಗಳ ಅಭಿವೃದ್ಧಿ ಮತ್ತು ಕಾರ್ಯಾಚರಣೆಯ ನೇತೃತ್ವವನ್ನು ಡಾ. ಕಲಾಂ ವಹಿಸಿದ್ದರು, ಆದ್ದರಿಂದ ಅವರನ್ನು  'ಭಾರತದ ಕ್ಷಿಪಣಿ ಮನುಷ್ಯ' ಎಂದು ಕರೆಯುತ್ತಾರೆ.
  • 1992 ಮತ್ತು 1999 ರ ನಡುವೆ ಪೋಖ್ರಾನ್‌ನಲ್ಲಿ ಪರಮಾಣು ಪರೀಕ್ಷೆ ಸಂದರ್ಭದಲ್ಲಿ ಡಾ. ಕಲಾಂ ಅವರು ಭಾರತದ ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರರಾಗಿದ್ದರು.
  • ಅವರು ಪೋಖ್ರಾನ್- II ಪರಮಾಣು ಪರೀಕ್ಷೆಗಳನ್ನು ಸಹ ವಿನ್ಯಾಸಗೊಳಿಸಿದರು, ಅದು ಭಾರತವನ್ನು ಪರಮಾಣು ಶಕ್ತಿಗಳ ಕ್ಲಬ್‌ಗೆ ತಳ್ಳಿತು. ಅಲ್ಲಿಯವರೆಗೆ ಯುಎಸ್ಎ, ಚೀನಾ, ಯುಕೆ, ಫ್ರಾನ್ಸ್ ಮತ್ತು ರಷ್ಯಾ ದೇಶಗಳು ಮಾತ್ರ  ಮಾತ್ರ ಈ ಕ್ಲಬ್ ನಲ್ಲಿದ್ದವು .
  • ಭಾರತದ ಮೊದಲ ಪರಿಧಮನಿಯ ಸ್ಟೆಂಟ್‌ನ ಅಭಿವೃದ್ಧಿಗಾಗಿ ಡಾ. ಕಲಾಂ ಅವರು ಹೃದ್ರೋಗ ತಜ್ಞ ಡಾ.ಬಿ.ಸೋಮ ರಾಜು ಅವರೊಂದಿಗೆ ಸಹಕರಿಸಿದರು. ಸ್ಟೆಂಟ್‌ಗೆ ಕಲಾಂ-ರಾಜು-ಸ್ಟೆಂಟ್ ಎಂದು ಹೆಸರಿಸಲಾಯಿತು ಮತ್ತು ಇದನ್ನು 1994 ರಲ್ಲಿ ಅಭಿವೃದ್ಧಿಪಡಿಸಲಾಯಿತು. ಇದು ಭಾರತದಲ್ಲಿ ಆಮದು ಮಾಡಿದ ಪರಿಧಮನಿಯ ಸ್ಟೆಂಟ್‌ಗಳ ಬೆಲೆಯನ್ನು ಶೇಕಡಾ 50 ಕ್ಕಿಂತಲೂ ಕಡಿಮೆ ಮಾಡಲು ಕಾರಣವಾಯಿತು. ಈ ಸ್ಟೆಂಟ್‌ನ ನವೀಕರಿಸಿದ ಆವೃತ್ತಿಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ.
  • ಏರೋನಾಟಿಕಲ್ ಎಂಜಿನಿಯರಿಂಗ್‌ನಲ್ಲಿ ಪರಿಣತಿ ಹೊಂದಿದ್ದ ಅವರು ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಕಲಾಂ ಅವರು ಹೊರಬಂದಾಗಿನಿಂದಲೂ ಅವರು ಏವಿಯಾನಿಕ್ಸ್‌ನೊಂದಿಗೆ ಸಂಬಂಧ ಹೊಂದಿದ್ದರು. ಅವರು ದೇಶದ ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್‌ನೊಂದಿಗೆ ಆಳವಾಗಿ ತೊಡಗಿಸಿಕೊಂಡಿದ್ದರು ಮತ್ತು ಯುದ್ಧ ವಿಮಾನವನ್ನು ಹಾರಿಸಿದ ಮೊದಲ ಭಾರತೀಯ ರಾಷ್ಟ್ರಪತಿಯಾಗಿದ್ದರು.
  • ಕಲಾಂ-ರಾಜು-ಸ್ಟೆಂಟ್ ಯಶಸ್ಸಿನ ನಂತರ, ಡಾ. ಕಲಾಂ ಮತ್ತು ಡಾ.ಸೋಮ ರಾಜು ಅವರು 2012 ರಲ್ಲಿ ಟ್ಯಾಬ್ಲೆಟ್ ಕಂಪ್ಯೂಟರ್ ಅನ್ನು ಅಭಿವೃದ್ಧಿಪಡಿಸಿದರು, ಇದು ತುರ್ತು ವೈದ್ಯಕೀಯ ಪರಿಸ್ಥಿತಿಗಳಿಗೆ ಸ್ಪಂದಿಸಲು ಗ್ರಾಮೀಣ ಭಾರತದ ಹಿಂದುಳಿದ ಜನರನ್ನು ನೋಡಿಕೊಳ್ಳುವ ಆರೋಗ್ಯ ಕಾರ್ಯಕರ್ತರನ್ನು ಶಸ್ತ್ರಸಜ್ಜಿತಗೊಳಿಸುವ ಗುರಿಯನ್ನು ಹೊಂದಿದೆ.

Trending News