ಬೈಪಾರ್‌ಜೋಯ್ ಚಂಡಮಾರುತ ಎಫೆಕ್ಟ್: ಜೂ. 13 ರಿಂದ ಜೂ. 15ರ ನಡುವೆ ಸುಮಾರು 95 ರೈಲುಗಳು ರದ್ದು

Byparjoy Cyclone: ಅರಬ್ಬಿ ಸಮುದ್ರದಲ್ಲಿ ಹುಟ್ಟಿಕೊಂಡಿರುವ ಬೈಪರ್ಜೋಯ್ ಚಂಡಮಾರುತ ನಾಳೆ ವೇಳೆಗೆ ಗುಜರಾತ್ ಕರಾವಳಿಯನ್ನು ಪ್ರವೇಶಿಸಬಹುದು ಎಂದು ಊಹಿಸಲಾಗಿದೆ. ಇದರ ಪರಿಣಾಮವಾಗಿ ಬಿರುಗಾಳಿಯೊಂದಿಗೆ ಭಾರೀ  ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಹಿನ್ನಲೆಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗುವುದರಿಂದ ಭಾರತೀಯ ರೈಲ್ವೆ ಪರಿಸ್ಥಿತಿಯನ್ನು ನಿಭಾಯಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ. 

Written by - Yashaswini V | Last Updated : Jun 13, 2023, 06:08 AM IST
  • ಸೈಕ್ಲೋನ್ ಬೈಪಾರ್ಜೋಯ್ ಎಫೆಕ್ಟ್: ಮುಂದಿನ ಮೂರು ದಿನ ಭಾರೀ ಮಳೆ
  • ರೈಲ್ವೆ ಅಧಿಕಾರಿಗಳ ಪ್ರಕಾರ, ರೈಲು ಜಾಲ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹಲವಾರು ಕ್ರಮಗಳನ್ನು ಜಾರಿಗೆ ತರಲಾಗಿದೆ.
  • ಇದಕ್ಕಾಗಿ ವಲಯ ರೈಲ್ವೇ ಪ್ರಧಾನ ಕಚೇರಿಯಲ್ಲಿ ವಿಪತ್ತು ನಿರ್ವಹಣಾ ಕೋಶವನ್ನು ಸಕ್ರಿಯಗೊಳಿಸಲಾಗಿದೆ.
ಬೈಪಾರ್‌ಜೋಯ್ ಚಂಡಮಾರುತ ಎಫೆಕ್ಟ್: ಜೂ. 13 ರಿಂದ ಜೂ. 15ರ ನಡುವೆ ಸುಮಾರು 95 ರೈಲುಗಳು ರದ್ದು  title=
Cyclone Biparjoy Latest Update

Byparjoy Cyclone Effect: ಅರಬ್ಬಿ ಸಮುದ್ರದಲ್ಲಿ ಸಕ್ರಿಯವಾಗಿರುವ ಬೈಪರ್‌ಜಾಯ್ ಚಂಡಮಾರುತವು ದಿನೇ ದಿನೇ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಬೈಪರ್ಜೋಯ್ ಚಂಡಮಾರುತ ನಾಳೆ ವೇಳೆಗೆ ಗುಜರಾತ್ ಕರಾವಳಿಯನ್ನು ಪ್ರವೇಶಿಸಬಹುದು ಎಂದು ಊಹಿಸಲಾಗಿದೆ. 

ಹವಾಮಾನ ಇಲಾಖೆ ಮುನ್ಸೂಚನೆಯಂತೆ, ಅರಬ್ಬಿ ಸಮುದ್ರದಲ್ಲಿ ಹುಟ್ಟಿಕೊಂಡಿರುವ ಬೈಪರ್ಜೋಯ್ ಚಂಡಮಾರುತದಿಂದಾಗಿ ಬಿರುಗಾಳಿಯೊಂದಿಗೆ ಭಾರೀ  ಮಳೆಯಾಗುವ ಸಂಭವವಿರುವುದರಿಂದ, ಇದರ ಪರಿಣಾಮವನ್ನು ಕಡಿಮೆ ಮಾಡಲು, ಭಾರತೀಯ ರೈಲ್ವೇ ಇಲಾಖೆ ಕೂಡ ಸನ್ನದ್ಧವಾಗಿದೆ. ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ತನ್ನ ವಿಪತ್ತು ನಿರ್ವಹಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದೆ. 

ಈ ವಾರ ಗುಜರಾತ್‌ನಲ್ಲಿ ಈ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದ್ದು ಇದು ದೊಡ್ಡ ಪ್ರಮಾಣದ ಹಾನಿಯನ್ನುಂಟುಮಾಡುತ್ತದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆಯನ್ನು ನೀಡಿದೆ. ಜೂನ್ 14 ರ ಸಂಜೆ ಮಾಂಡವಿ-ಜಖೌ ಬಂದರಿನ ಬಳಿ ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ (ಐಎಂಡಿ) ಅಂದಾಜಿಸಿದೆ. ಕಚ್ ಜಿಲ್ಲೆಯ ಜಖೌ ಬಂದರಿನ ಬಳಿ ಬಿಪರ್‌ಜೋಯ್ ಗುರುವಾರ ಭೂಕುಸಿತವನ್ನು ಉಂಟುಮಾಡುವ ನಿರೀಕ್ಷೆಯಿದೆ, ಆ ಹೊತ್ತಿಗೆ ಅದು 'ಅತ್ಯಂತ ತೀವ್ರ ಚಂಡಮಾರುತ' ಆಗಲಿದೆ. ಈ ವೇಳೆ ಗಂಟೆಗೆ 150 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಭಾವನಗರ, ಮಹುವ, ವೆರಾವಲ್‌ನಿಂದ ಪೋರಬಂದರ್, ಓಖಾದಿಂದ ಹಪಾ ಮತ್ತು ಗಾಂಧಿಧಾಮ್ ಪ್ರದೇಶಗಳನ್ನು ಒಳಗೊಂಡಂತೆ ಸೂಕ್ಷ್ಮ ವಿಭಾಗಗಳನ್ನು ರೈಲ್ವೆ ಗುರುತಿಸಿದೆ. 

ಇದನ್ನೂ ಓದಿ- Biparjoy Cyclone: ಅಪಾಯಕಾರಿ ಸ್ವರೂಪ ಪಡೆದುಕೊಳ್ಳುತ್ತಿದೆ ಬಿಪರ್ಜಾಯ್, ಅಧಿಕಾರಿಗಳಿಗೆ ಪ್ರಧಾನಿ ಮೋದಿ ನಿರ್ದೇಶನ

ತುರ್ತು ನಿಯಂತ್ರಣ ಕೊಠಡಿ: 
ರೈಲ್ವೆ ಅಧಿಕಾರಿಗಳ ಪ್ರಕಾರ, ರೈಲು ಜಾಲ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹಲವಾರು ಕ್ರಮಗಳನ್ನು ಜಾರಿಗೆ ತರಲಾಗಿದೆ. ಇದಕ್ಕಾಗಿ ವಲಯ ರೈಲ್ವೇ ಪ್ರಧಾನ ಕಚೇರಿಯಲ್ಲಿ ವಿಪತ್ತು ನಿರ್ವಹಣಾ ಕೋಶವನ್ನು ಸಕ್ರಿಯಗೊಳಿಸಲಾಗಿದೆ. ಇದಲ್ಲದೆ, ಭಾವನಗರ, ರಾಜ್‌ಕೋಟ್, ಅಹಮದಾಬಾದ್ ಮತ್ತು ಗಾಂಧಿಧಾಮ್‌ನಲ್ಲಿರುವ ವಿಭಾಗೀಯ ಕೇಂದ್ರಗಳಲ್ಲಿ ತುರ್ತು ನಿಯಂತ್ರಣ ಕೊಠಡಿಗಳನ್ನು ಕಾರ್ಯಗತಗೊಳಿಸಲಾಗಿದೆ. ಇದರೊಂದಿಗೆ, ಸೈಕ್ಲೋನ್ ಬೈಪಾರ್ಜೋಯ್ ಚಂಡಮಾರುತದ ಪರಿಣಾಮವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ವಿವಿಧ ಇಲಾಖೆಗಳು ದಿನದ 24ಗಂಟೆಯೂ ಕೂಡ ಮೇಲ್ವಿಚಾರಣೆ ಮಾಡಲಿವೆ ಎಂದು ತಿಳಿದುಬಂದಿದೆ. 

'ಡಬಲ್-ಸ್ಟಾಕ್ ಕಂಟೈನರ್'ಗಳ ಲೋಡ್ ಸ್ಥಗಿತ: 
ಇನ್ನು ಬೈಪರ್ಜೋಯ್ ಚಂಡಮಾರುತದಿಂದಾಗಿ ಗಾಳಿಯ ವೇಗ ಹೆಚ್ಚಾಗುವ ಸಂಭವದ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನಲೆಯಲ್ಲಿ, ರೈಲ್ವೇ ಸಚಿವಾಲಯವು ಅನೇಕ ಸ್ಥಳಗಳಲ್ಲಿ ಗಾಳಿಯ ವೇಗವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲು ಸೂಚನೆ ನೀಡಿದೆ. ಗಾಳಿಯ ವೇಗ ಗಂಟೆಗೆ 50 ಕಿಮೀಗಿಂತ ಹೆಚ್ಚಾದಾಗ ರೈಲುಗಳನ್ನು ನಿಲ್ಲಿಸುತ್ತದೆ. ಹೀಗಾಗಿ, ಪ್ರಯಾಣಿಕರನ್ನು ತುರ್ತು ಸ್ಥಳಾಂತರಿಸಲು ಸಾಕಷ್ಟು ಡೀಸೆಲ್ ಇಂಜಿನ್‌ಗಳು ಮತ್ತು ಕೋಚ್‌ಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ರೈಲ್ವೆ ವಲಯಗಳಿಗೆ ನಿರ್ದೇಶನ ನೀಡಲಾಗಿದೆ. ಮಾತ್ರವಲ್ಲದೆ, ಸೈಕ್ಲೋನ್ ಎಫೆಕ್ಟ್ ನಿಂದಾಗಿ 'ಡಬಲ್-ಸ್ಟಾಕ್ ಕಂಟೈನರ್'ಗಳ ಲೋಡಿಂಗ್ ಕೆಲಸವನ್ನು ಸಹ ನಿಲ್ಲಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ- Rain Alert: ಮಿತಿ ದಾಟಿದ ಸೈಕ್ಲೋನ್ ತೀವ್ರತೆ! ಈ ಭಾಗಗಳಲ್ಲಿ ಬಿರುಗಾಳಿ ಸಹಿತ ಮಳೆಯ ಎಚ್ಚರಿಕೆ-ಹೈ ಅಲರ್ಟ್ ಘೋಷಣೆ

56 ರೈಲುಗಳು ಸ್ಥಗಿತ, 95 ರೈಲುಗಳು ರದ್ದು: 
ಮುಂಬೈನಿಂದ ಲಭ್ಯವಿರುವ ಮಾಹಿತಿಯ ಪ್ರಕಾರ,  ಪಶ್ಚಿಮ ರೈಲ್ವೇ ತನ್ನ 56 ರೈಲುಗಳನ್ನು ಕರಾವಳಿ ಗುಜರಾತ್ ಕಡೆಗೆ ತಮ್ಮ ಗಮ್ಯಸ್ಥಾನಕ್ಕೆ ಮುಂಚಿತವಾಗಿ ನಿಲ್ಲಿಸಿದೆ. ಇದರೊಂದಿಗೆ ಪಶ್ಚಿಮ ರೈಲ್ವೇ ಮುಂದಿನ 3 ದಿನಗಳ ಕಾಲ ಕೆಲವು ರೈಲುಗಳನ್ನು ರದ್ದುಗೊಳಿಸುವ ಬಗ್ಗೆಯೂ ಯೋಚಿಸುತ್ತಿದೆ ಎನ್ನಲಾಗಿದೆ. 

ಏತನ್ಮಧ್ಯೆ, ಸೈಕ್ಲೋನ್ ಬೈಪಾರ್ಜೋಯ್ ದೃಷ್ಟಿಯಿಂದ, ಪಶ್ಚಿಮ ರೈಲ್ವೆಯು ವಿಪತ್ತು ನಿರ್ವಹಣಾ ಕೊಠಡಿ, ಸಹಾಯ ಕೇಂದ್ರ ಮತ್ತು ಪರಿಹಾರ ರೈಲುಗಳನ್ನು ಸಿದ್ಧವಾಗಿರಿಸುವುದು ಸೇರಿದಂತೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕರಾವಳಿ ಗುಜರಾತ್‌ನಲ್ಲಿ ಗಾಂಧಿಧಾಮ್, ವೆರಾವಲ್, ಓಖಾ, ಪೋರಬಂದರ್‌ಗೆ ಹೋಗುವ 56 ರೈಲುಗಳನ್ನು ಅಹಮದಾಬಾದ್, ರಾಜ್‌ಕೋಟ್ ಮತ್ತು ಸುರೇಂದ್ರನಗರದಲ್ಲಿ ಮಾತ್ರ ನಿಲ್ಲಿಸಲಾಗಿದೆ. ಜೂನ್ 13 ಮತ್ತು ಜೂನ್ 15 ರ ನಡುವೆ ಸುಮಾರು 95 ರೈಲುಗಳನ್ನು ರದ್ದುಗೊಳಿಸಲು ಪ್ರಸ್ತಾಪಿಸಲಾಗಿದೆ ಎಂದು ತಿಳಿದುಬಂದಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News