ಮೊದಲು ಅಯೋಧ್ಯೆಯಲ್ಲಿ ದೇವಾಲಯ, ನಂತರ ಮಹಾರಾಷ್ಟ್ರದಲ್ಲಿ ಸರ್ಕಾರ: ಸಂಜಯ್ ರೌತ್

ಅಯೋಧ್ಯ ಪ್ರಕರಣದಲ್ಲಿ ಶನಿವಾರ ಸುಪ್ರೀಂ ಕೋರ್ಟ್ ರಾಮ ಮಂದಿರದ ಪರವಾಗಿ ತೀರ್ಪು ನೀಡುದ್ದು, ಮೂರು ತಿಂಗಳೊಳಗೆ ನಿರ್ಮಾಣದ ರೂಪುರೇಷೆಗಳನ್ನು ಸಿದ್ಧಪಡಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ. ಕೇಂದ್ರ ಸರ್ಕಾರವು ಟ್ರಸ್ಟ್ ನಿರ್ಮಿಸುವ ಮೂಲಕ ದೇವಾಲಯವನ್ನು ನಿರ್ಮಿಸಬೇಕು ಎಂದು ನ್ಯಾಯಾಲಯ ಹೇಳಿದೆ.  

Last Updated : Nov 9, 2019, 02:24 PM IST
ಮೊದಲು ಅಯೋಧ್ಯೆಯಲ್ಲಿ ದೇವಾಲಯ, ನಂತರ ಮಹಾರಾಷ್ಟ್ರದಲ್ಲಿ ಸರ್ಕಾರ: ಸಂಜಯ್ ರೌತ್ title=

ಮುಂಬೈ: ಅಯೋಧ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪನ್ನು ಸ್ವಾಗತಿಸಿರುವ ಶಿವಸೇನೆ ಮುಖಂಡ ಸಂಜಯ್ ರೌತ್, ಅಯೋಧ್ಯೆಯಲ್ಲಿ ಮೊದಲು ರಾಮನ ದೇವಾಲಯವನ್ನು ನಿರ್ಮಿಸಬೇಕು ಮತ್ತು ನಂತರ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಬೇಕು ಎಂದು ಹೇಳಿದ್ದಾರೆ. 

ಸಂಜಯ್ ರೌತ್ ತಮ್ಮ ಟ್ವೀಟ್‌ನಲ್ಲಿ ಹೀಗೆ ಬರೆದಿದ್ದಾರೆ: 'ಮೊದಲು ದೇವಾಲಯ ನಂತರ ಸರ್ಕಾರ, ಅಯೋಧ್ಯೆಯಲ್ಲಿ ದೇವಾಲಯ, ಮಹಾರಾಷ್ಟ್ರದ ಸರ್ಕಾರ ... ಜೈ ಶ್ರೀ ರಾಮ್'. ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಬಂದು 15 ದಿನಗಳೇ ಕಳೆದಿವೆ ಮತ್ತು ರಾಜ್ಯದಲ್ಲಿ ಇನ್ನೂ ಸರ್ಕಾರ ರಚನೆಯಾಗಿಲ್ಲ ಎಂಬುದು ಗಮನಾರ್ಹ.

ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಮತ್ತು ಶಿವಸೇನಾ ಮೈತ್ರಿಕೂಟಕ್ಕೆ ಬಹುಮತ ಸಿಕ್ಕಿದ್ದರೂ ಮುಖ್ಯಮಂತ್ರಿ ಸ್ಥಾನಕ್ಕೆ ಉಭಯ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಶುಕ್ರವಾರ, ದೇವೇಂದ್ರ ಫಡ್ನವೀಸ್ ಅವರು ತಮ್ಮ ರಾಜೀನಾಮೆಯನ್ನು ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ ಅವರಿಗೆ ಸಲ್ಲಿಸಿದರು. ಆದರೆ, ಹೊಸ ಸರ್ಕಾರ ರಚನೆಯಾಗುವವರೆಗೂ ದೇವೇಂದ್ರ ಫಡ್ನವೀಸ್ ಉಸ್ತುವಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಅಯೋಧ್ಯ ಪ್ರಕರಣದಲ್ಲಿ ಶನಿವಾರ ಸುಪ್ರೀಂ ಕೋರ್ಟ್ ರಾಮ ಮಂದಿರದ ಪರವಾಗಿ ತೀರ್ಪು ನೀಡುದ್ದು, ಮೂರು ತಿಂಗಳೊಳಗೆ ನಿರ್ಮಾಣದ ರೂಪುರೇಷೆಗಳನ್ನು ಸಿದ್ಧಪಡಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ. ಕೇಂದ್ರ ಸರ್ಕಾರವು ಟ್ರಸ್ಟ್ ನಿರ್ಮಿಸುವ ಮೂಲಕ ದೇವಾಲಯವನ್ನು ನಿರ್ಮಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಕೇಂದ್ರ ಸರ್ಕಾರವು ಟ್ರಸ್ಟ್ ನಿರ್ಮಿಸುವ ಮೂಲಕ ದೇವಾಲಯವನ್ನು ನಿರ್ಮಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಇದರೊಂದಿಗೆ, ಮುಸ್ಲಿಂ ಸಮಾಜಕ್ಕೆ ಬೇರೆ ಜಾಗದಲ್ಲಿ 5 ಎಕರೆ ಭೂಮಿಯನ್ನು ಪ್ರತ್ಯೇಕವಾಗಿ ನೀಡುವಂತೆ ಆದೇಶಿಸಲಾಗಿದೆ.
 

Trending News