Funny News: ಫಸ್ಟ್ ನೈಟ್ ದಿನವೇ ನೆರೆಮನೆಯಲ್ಲಿ ಅಡಗಿ ಕುಳಿತ ವರ: ಕಾರಣ ತಿಳಿದರೆ ಬಿದ್ದುಬಿದ್ದು ನಗೋದು ಗ್ಯಾರಂಟಿ!

Groom Hiding neighbour’s house on First Night: ಇಂತಹದೊಂದು ವಿಚಿತ್ರ ಘಟನೆಯ ಬಗ್ಗೆ ಉತ್ತರ ಪ್ರದೇಶದ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ. ಇತ್ತೀಚೆಗೆ, ಒಂದು ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವರ ತನ್ನ ಮೊದಲ ರಾತ್ರಿಯಂದು ನೆರೆಹೊರೆಯವರ ಮನೆಯಲ್ಲಿ ಹೋಗಿ ಅಡಗಿ ಕುಳಿತಿದ್ದಾನೆ. ಇದಕ್ಕೆ ಕಾರಣ ಆತನ ನಾಚಿಕೆ ಸ್ವಭಾವ.

Written by - Bhavishya Shetty | Last Updated : Feb 15, 2023, 11:48 PM IST
    • ವರ ತನ್ನ ಮೊದಲ ರಾತ್ರಿಯಂದು ನೆರೆಹೊರೆಯವರ ಮನೆಯಲ್ಲಿ ಹೋಗಿ ಅಡಗಿ ಕುಳಿತಿದ್ದಾನೆ
    • ವಿಚಿತ್ರ ಘಟನೆಯ ಬಗ್ಗೆ ಉತ್ತರ ಪ್ರದೇಶದ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ
    • ಈ ವಿಚಾರ ತಿಳಿದ ವಧು ಮತ್ತು ಆತನ ಕುಟುಂಬಸ್ಥರು ಶಾಕ್ ಆಗಿದ್ದಾರೆ.
Funny News: ಫಸ್ಟ್ ನೈಟ್ ದಿನವೇ ನೆರೆಮನೆಯಲ್ಲಿ ಅಡಗಿ ಕುಳಿತ ವರ: ಕಾರಣ ತಿಳಿದರೆ ಬಿದ್ದುಬಿದ್ದು ನಗೋದು ಗ್ಯಾರಂಟಿ!  title=
Viral Post

Groom Hiding neighbour’s house on First Night: ಪ್ರತಿ ನವವಿವಾಹಿತ ದಂಪತಿಗಳು ಮಧುಚಂದ್ರದ ರಾತ್ರಿಗಾಗಿ ಕಾತುರದಿಂದ ಕಾಯುತ್ತಾರೆ. ಆದರೆ ಇಲ್ಲೊಬ್ಬ ವರನು ತನ್ನ ವಧು ತನಗಾಗಿ ಕಾಯುತ್ತಿರುವಾಗ ನೆರೆಹೊರೆಯವರ ಮನೆಯಲ್ಲಿ ಹೋಗಿ ಅಡಗಿ ಕುಳಿತಿದ್ದಾನೆ. ಈ ವಿಚಾರ ತಿಳಿದ ವಧು ಮತ್ತು ಆತನ ಕುಟುಂಬಸ್ಥರು ಶಾಕ್ ಆಗಿದ್ದಾರೆ.

ಇದನ್ನೂ ಓದಿ:  Viral Video: ಏಕಾಂಗಿ ಎಮ್ಮೆ ಮೇಲೆ ದಾಳಿ ಮಾಡಿದ ಸಿಂಹಗಳ ದಂಡು: ಆದ್ರೆ ಮುಂದಾಗಿದ್ದು ಮಾತ್ರ ಬೆಚ್ಚಿಬೀಳುವ ಘಟನೆ!

ಹೌದು, ಇಂತಹದೊಂದು ವಿಚಿತ್ರ ಘಟನೆಯ ಬಗ್ಗೆ ಉತ್ತರ ಪ್ರದೇಶದ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ. ಇತ್ತೀಚೆಗೆ, ಒಂದು ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವರ ತನ್ನ ಮೊದಲ ರಾತ್ರಿಯಂದು ನೆರೆಹೊರೆಯವರ ಮನೆಯಲ್ಲಿ ಹೋಗಿ ಅಡಗಿ ಕುಳಿತಿದ್ದಾನೆ. ಇದಕ್ಕೆ ಕಾರಣ ಆತನ ನಾಚಿಕೆ ಸ್ವಭಾವ.

ಸ್ಥಳೀಯ ಪತ್ರಿಕೆಯ ಪ್ರಕಾರ, “ವರನೊಬ್ಬ ಮೊದಲ ರಾತ್ರಿಯ ದಿನ ತನ್ನ ಮನೆಯಿಂದ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದಾನೆ. ವರ ಎಲ್ಲಿ ಹೋದನೋ ಎಂದು ಆತಂಕಗೊಂಡ ಕುಟುಂಬಸ್ಥರು ರಾತ್ರಿಯಿಡೀ ಹುಡುಕಾಡಿದ್ದಾರೆ. ಆದರೆ ಆತ ನೆರೆಯ ಮನೆಯಲ್ಲಿ ಅಡಗಿಕೊಂಡಿದ್ದ”.

“ನಂತರ ಮರುದಿನ ಬೆಳಿಗ್ಗೆ ಅವನು ತನ್ನ ಮೊಬೈಲ್ ಫೋನ್ ಆನ್ ಮಾಡಿದಾಗ ಅವನ ಕುಟುಂಬ ಸದಸ್ಯರು ಅವನನ್ನು ಸಂಪರ್ಕಿಸಿದರು. ಈ ರೀತಿ ಏಕೆ ಮಾಡಿದೆ ಎಂದು ಕೇಳಿದಾಗ, ‘ನನಗೆ ನಾಚಿಕೆಯಾಗುತ್ತಿತ್ತು’ ಎಂದು ಹೇಳಿದ್ದಾನೆ. ಅಷ್ಟೇ ಅಲ್ಲದೆ, ಮನೆಗೆ ಹಿಂತಿರುಗಲು ರಾತ್ರಿ ಧೈರ್ಯವೇ ಸಾಕಾಗಿಲ್ಲ ಎಂದಿದ್ದಾನೆ.  

ಇದನ್ನೂ ಓದಿ: Girl body found in fridge: ಪ್ರೀತಿಸುತ್ತಿದ್ದ ಯುವತಿಯನ್ನೇ ಕೊಲೆಗೈದು ಢಾಬಾದ ಫ್ರಿಡ್ಜ್ ನಲ್ಲಿಟ್ಟ ಪ್ರಿಯಕರ! ದೆಹಲಿಯಲ್ಲಿ ಮತ್ತೊಂದು ಶ್ರದ್ಧಾ ಪ್ರಕರಣ?

ಮಧುಚಂದ್ರದ ದಿನ ವರ ಏಕೆ ಓಡಿಹೋದ ಎಂಬುದು ನಿಗೂಢ. ನಿಜಕ್ಕೂ ಆತ ಅಡಗಿ ಕುಳಿತನೇ ಎಂಬುದು ಕೂಡ ಗೊತ್ತಿಲ್ಲ. ಆದರೆ, ಕೆಲವು ಜನರು ಮೀಮ್‌ಗಳಿಗಾಗಿ ಫೋಟೋಶಾಪ್ ಮೂಲಕ ಈ ಪತ್ರಿಕೆಯ ಪುಟಗಳನ್ನು ಈ ರೀತಿ ಮಾಡಿದ್ದಾರೆಯೇ ಎಂಬ ಅನುಮಾನ ಕಾಡಿದೆ. ಅದೇನೆ ಆಗಿದ್ದರೂ ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಸುದ್ದಿ ಸಖತ್ ಕಾಮಿಡಿ ಎನಿಸಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News