Daily GK Quiz: ಮೈಸೂರು ರಾಜ್ಯವು ಕರ್ನಾಟಕ ಎಂದು ನಾಮಕರಣವಾದದ್ದು ಯಾವಾಗ?

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

Written by - Puttaraj K Alur | Last Updated : Jan 1, 2024, 05:12 PM IST
  • ಮೈಸೂರು ರಾಜ್ಯವು ಕರ್ನಾಟಕ ಎಂದು ನಾಮಕರಣವಾದದ್ದು ಯಾವಾಗ?
  • ‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಎಂದು ಹೇಳಿದವರು ಯಾರು?
  • ಕರ್ನಾಟಕ ಸರ್ಕಾರವು ಪ್ರತಿವರ್ಷ ನವೆಂಬರ್ 1ರಂದು ನೀಡುವ ಪ್ರಶಸ್ತಿ ಯಾವುದು?
Daily GK Quiz: ಮೈಸೂರು ರಾಜ್ಯವು ಕರ್ನಾಟಕ ಎಂದು ನಾಮಕರಣವಾದದ್ದು ಯಾವಾಗ? title=
Daily GK Quiz

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

ಪ್ರಶ್ನೆ 1: ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು?

a) ನಿಜಲಿಂಗಪ್ಪ

b) ಕೆ. ಸಿ. ರೆಡ್ಡಿ

c) ಬಸವರಾಜ್ ಬೊಮ್ಮಾಯಿ

d) ರಾಮಕೃಷ್ಣ ಹೆಗಡೆ

ಉತ್ತರ: b) ಕೆ. ಸಿ. ರೆಡ್ಡಿ

ಪ್ರಶ್ನೆ 2: ಮೈಸೂರು ರಾಜ್ಯವು ಕರ್ನಾಟಕ ಎಂದು ನಾಮಕರಣವಾದದ್ದು ಯಾವಾಗ?

a) 1973 ನವಂಬರ್ 1

b) 1956 ನವೆಂಬರ್ 1

c) 1950 ಜನವರಿ 26

d) 1950 ನವೆಂಬರ್ 1

ಉತ್ತರ: a) 1973 ನವಂಬರ್ 1

ಪ್ರಶ್ನೆ 3: ‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಎಂದು ಹೇಳಿದವರು ಯಾರು?

a) ಹುಯಿಲಗೋಳ ನಾರಾಯಣರಾವ್

b) ದುರ್ಗಸಿಂಹ

c) ಬೇಂದ್ರೆ

d) ಕುವೆಂಪು

ಉತ್ತರ: ಹುಯಿಲಗೋಳ ನಾರಾಯಣರಾವ್

ಪ್ರಶ್ನೆ 4: ಕರ್ನಾಟಕ ಸರ್ಕಾರವು ಪ್ರತಿವರ್ಷ ನವೆಂಬರ್ 1ರಂದು ನೀಡುವ ಪ್ರಶಸ್ತಿ ಯಾವುದು?

a) ಪಂಪ ಪ್ರಶಸ್ತಿ

b) ರಾಜ್ಯೋತ್ಸವ ಪ್ರಶಸ್ತಿ

c) ಸಾಹಿತ್ಯ ಪ್ರಶಸ್ತಿ

d) ನಾಡೋಜ ಪ್ರಶಸ್ತಿ

ಉತ್ತರ: ರಾಜ್ಯೋತ್ಸವ ಪ್ರಶಸ್ತಿ

ಪ್ರಶ್ನೆ 5: ಕನ್ನಡದ ಮೊದಲ ನಾಟಕ ಯಾವುದು?

a) ಇಂದಿರಾ

b) ಮಿತ್ರಾವಿಂದ ಗೋವಿಂದ

c) ಶಿವರಾತ್ರಿ

d) ಸಾಯೋ ಆಟ

ಉತ್ತರ: b) ಮಿತ್ರಾವಿಂದ ಗೋವಿಂದ

ಇದನ್ನೂ ಓದಿ: ಹೊಸ ವರ್ಷದ ಮೊದಲ ಮುಂಜಾನೆ ಇಸ್ರೋ ಮಹತ್ವದ ಕಾರ್ಯಾಚರಣೆ ಆರಂಭಿಸಿದೆ

ಪ್ರಶಸ್ತಿ 6: ಕರ್ನಾಟಕ ಏಕೀಕರಣ ಚಳವಳಿ ಪ್ರಾರಂಭವಾದ ವರ್ಷ ಯಾವುದು?

a) 1905

b) 1906

c) 1904

d) 1903

ಉತ್ತರ: a) 1905

ಪ್ರಶ್ನೆ 7: ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಯಾದ ವರ್ಷ

a) 1912

b) 1915

c) 1914

d) 1913

ಉತ್ತರ: b) 1915

ಪ್ರಶ್ನೆ 8: ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಕನ್ನಡದ ಹಾಡನ್ನು ಹಾಡಿದ ಗಾಯಕರು ಯಾರು?

a) ಸಿ.ಅಶ್ವಥ್

b) ಡಾಕ್ಟರ್ ರಾಜಕುಮಾರ್

c) ವಿಷ್ಣುವರ್ಧನ

d) ಹಂಸಲೇಖ

ಉತ್ತರ: ಡಾಕ್ಟರ್ ರಾಜಕುಮಾರ್

ಪ್ರಶ್ನೆ 9: ಕನ್ನಡ ಸಾಹಿತ್ಯದ ‘ಶಿಶು ಗೀತೆಗಳ ಜನಕ’ ಎಂದು ಪ್ರಸಿದ್ಧರಾದವರು

a) ಪಂಜೆ ಮಂಗೇಶರಾಯರು

b) ಎಂ.ಗೋವಿಂದ ಪೈ

c) ಮಾಸ್ತಿ ವೆಂಕಟೇಶ ಅಯ್ಯಂಗಾರ್

d) ಜಿ.ಪಿ ರಾಜರತ್ನಂ

ಉತ್ತರ: ಪಂಜೆ ಮಂಗೇಶರಾಯರು

ಪ್ರಶ್ನೆ 10: ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷೆ ಯಾರು?

a) ಅನುಪಮಾ ನಿರಂಜನ

b) ವೈದೇಹಿ

c) ಜಯದೇವಿ ತಾಯಿ ಲಿಗಾಡೆ

d) ಗೀತಾ ನಾಗಭೂಷಣ

ಉತ್ತರ: c) ಜಯದೇವಿ ತಾಯಿ ಲಿಗಾಡೆ

ಇದನ್ನೂ ಓದಿ: ಜನವರಿ 1 ರಿಂದ ಜಾರಿಗೆ ಬಂದ 5 ಪ್ರಮುಖ ಬದಲಾವಣೆಯ ಬಗ್ಗೆ ತಿಳಿದುಕೊಳ್ಳಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News