ದಿನೇ ದಿನೇ ಕುಸಿಯುತ್ತಿದೆ ತಾಪಾಮಾನ : ಈ ಭಾಗಗಳಲ್ಲಿ ಅರೆಂಜ್ ಅಲರ್ಟ್ ಜಾರಿ

4 January 2023 Weather Update: ದೆಹಲಿಯಲ್ಲಿ ಹೆಚ್ಚುತ್ತಿರುವ ಚಳಿ ಮತ್ತು ಮಂಜಿನ ಹವಾಮಾನದಿಂದಾಗಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.ದೆಹಲಿಯಲ್ಲಿ ಇಂದಿನ ಗರಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಕನಿಷ್ಠ ತಾಪಮಾನ 7 ಡಿಗ್ರಿ ಸೆಲ್ಸಿಯಸ್ ಆಗಿದೆ.

Written by - Ranjitha R K | Last Updated : Jan 4, 2024, 12:50 PM IST
  • ಉತ್ತರ ಭಾರತದಲ್ಲಿ ಶೀತಗಾಳಿಯ ತಾಂಡವ
  • ಮೈ ಕೊರೆಯುವ ಚಳಿಯ ಜೊತೆಗೆ ಎಲ್ಲೆಡೆ ಮಂಜು ಆವರಿಸಿದೆ
  • ದೆಹಲಿಯಲ್ಲಿ ಆರೆಂಜ್ ಅಲರ್ಟ್
ದಿನೇ ದಿನೇ ಕುಸಿಯುತ್ತಿದೆ ತಾಪಾಮಾನ : ಈ ಭಾಗಗಳಲ್ಲಿ ಅರೆಂಜ್ ಅಲರ್ಟ್ ಜಾರಿ  title=

4 January 2023 Weather Update : ಉತ್ತರ ಭಾರತದಲ್ಲಿ ಶೀತಗಾಳಿಯ ತಾಂಡವ.  ಮೈ ಕೊರೆಯುವ ಚಳಿಯ ಜೊತೆಗೆ ಎಲ್ಲೆಡೆ ಮಂಜು ಆವರಿಸಿದೆ. ಮನೆಯ ಹೊರಗೂ, ಒಳಗೂ ಒಂದೇ ರೀತಿಯ ಅನುಭವ. ಇಂದು ದೆಹಲಿಯಲ್ಲಿ ಕನಿಷ್ಠ ತಾಪಮಾನವು 7 ಡಿಗ್ರಿ ಸೆಲ್ಸಿಯಸ್ ಗೆ ಇಳಿದಿದೆ. 

ದೆಹಲಿಯಲ್ಲಿ ಆರೆಂಜ್ ಅಲರ್ಟ್ : 
ದೆಹಲಿಯಲ್ಲಿ ಹೆಚ್ಚುತ್ತಿರುವ ಚಳಿ ಮತ್ತು ಮಂಜಿನ ಹವಾಮಾನದಿಂದಾಗಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ದೆಹಲಿಯಲ್ಲಿ ಇಂದಿನ ಗರಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಕನಿಷ್ಠ ತಾಪಮಾನ 7 ಡಿಗ್ರಿ ಸೆಲ್ಸಿಯಸ್ ಆಗಿದೆ. ಜನವರಿ 9ರಂದು ದೆಹಲಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮಳೆಯಾದ ನಂತರ ತಾಪಮಾನ ಇನ್ನೂ ಇಳಿಯುವ ಸಾಧ್ಯತೆ ಇದೆ.  

ಇದನ್ನೂ ಓದಿ : ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ರಾಮನ ಜಪದಲ್ಲಿ 584ಕಿಮೀ ಕಾಲ್ನಡಿಗೆಯಲ್ಲಿ ಹೊರಟಿರುವ ರಾಮ ಭಕ್ತ..

ಪಂಜಾಬ್‌ನಿಂದ ಯುಪಿವರೆಗೆ ಕೋಲ್ಡ್ ಡೇ ಅಲರ್ಟ್ : 
ಹವಾಮಾನ ಇಲಾಖೆ ಪ್ರಕಾರ, ಮುಂದಿನ ದಿನಗಳಲ್ಲಿ ತಾಪಮಾನದಲ್ಲಿ ಮತ್ತಷ್ಟು ಇಳಿಕೆ ಕಂಡುಬರಬಹುದು.ಹೀಗಾಗಿ ಜನರು ಚಳಿ ತಡೆಯಲು ಮುಂಜಾಗ್ರತೆ ವಹಿಸುವಂತೆ  ಸೂಚನೆ ನೀಡಲಾಗಿದೆ. ಉತ್ತರ ಭಾರತದ ಬಯಲು ಸೀಮೆಯು ಶೀತ ಅಲೆಯ ಹೊಡೆತವನ್ನು ಎದುರಿಸುತ್ತಿದೆ. ದೆಹಲಿ, ಯುಪಿ, ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದಲ್ಲಿ ಕೋಲ್ಡ್ ಡೇ ಅಲರ್ಟ್ ಜಾರಿ ಮಾಡಲಾಗಿದೆ. 

ಯುಪಿಯಲ್ಲಿ ದಟ್ಟವಾದ ಮಂಜು :
ಉತ್ತರ ಪ್ರದೇಶದ ಹಲವು ಪ್ರದೇಶಗಳಲ್ಲಿ ದಟ್ಟವಾದ ಮಂಜು ಆವರಿಸುವ ಎಚ್ಚರಿಕೆ ನೀಡಲಾಗಿದೆ.  ಅಲ್ಲದೆ, ಜನವರಿ 7ರವರೆಗೆ ಕೆಲವೆಡೆ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಉತ್ತರಪ್ರದೇಶದಲ್ಲಿ  ಇಂದು ಅಧಿಕ ಚಳಿ ಆವರಿಸಿರುವ ದಿನವಾಗಿದೆ. ಲಕ್ನೋದಲ್ಲಿಯೂ ದಟ್ಟವಾದ ಮಂಜಿನಿಂದಾಗಿ ಗೋಚರತೆ ಶೂನ್ಯವಾಗಿದೆ.ಇದರಿಂದಾಗಿ ರಸ್ತೆಗಳಲ್ಲಿ ವಾಹನಗಳ ವೇಗ ಸ್ಥಗಿತಗೊಂಡಿದೆ.

ಇದನ್ನೂ ಓದಿ : ಮೂವತ್ತು ವರ್ಷಗಳ ಹಿಂದೆಯೇ ರಾಮಮಂದಿರ ವಿನ್ಯಾಸಗೊಳಿಸಲಾಗಿತ್ತು, ಯಾರಿದು ಚಂದ್ರಕಾಂತ್ ಸೋಂಪುರ..?

ಮತ್ತಷ್ಟು ಚಳಿ ಹೆಚ್ಚಾಗುವ ಸಾಧ್ಯತೆ : 
ದಟ್ಟವಾದ ಮಂಜು ಮತ್ತು ತಣ್ಣನೆಯ ಗಾಳಿಯಿಂದಾಗಿ ಚಳಿ ತೀವ್ರವಾಗಿದೆ. ಮಂಜಿನಿಂದಾಗಿ ಗೋಚರತೆ ಕಡಿಮೆಯಾಗಿ ವಾಹನಗಳ ವೇಗ ಕಡಿಮೆಯಾಗಿದೆ. ರಾಜಸ್ಥಾನ ಮಾತ್ರವಲ್ಲದೆ ಮಧ್ಯಪ್ರದೇಶದಲ್ಲೂ ತೀವ್ರ ಚಳಿಯಾಗುತ್ತಿರುವುದು ಗಮನಾರ್ಹ. ದಟ್ಟವಾದ ಮಂಜಿನಿಂದಾಗಿ, ಕಳೆದ ಎರಡು ದಿನಗಳಿಂದ ಸೂರ್ಯನ ದರ್ಶನವೇ ಇಲ್ಲ ಎನ್ನುವಂತಾಗಿದೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News