Kolkata Election: ಪ.ಬಂಗಾಳ ಚುನಾವಣೆ ಹೊಸ್ತಿಲಲ್ಲಿ 'ಹೊಸ ರಾಜಕೀಯ ಪಕ್ಷ' ಉದಯ..!

ರಾಜ್ಯದ ಕೋಮು ಸಾಮರಸ್ಯವನ್ನು ಕಾಪಾಡುವ ದೃಷ್ಟಿಯಿಂದ ಇಂಡಿಯನ್ ಸೆಕ್ಯೂಲರ್ ಫ್ರಂಟ್(ISF) ಪಕ್ಷವನ್ನು ಸ್ಥಾಪಿಸಲಾಗಿದೆ ಎಂದು ಸಿದ್ದಿಕಿ ಈ ವೇಳೆ ನುಡಿದರು.

Last Updated : Jan 21, 2021, 06:08 PM IST
  • ವಿಧಾನಸಭೆ ಚುನಾವಣೆ ಇನ್ನೇನು ಸಮೀಪಿಸುತ್ತಿರುವಾಗಲೇ, ಪಶ್ಚಿಮ ಬಂಗಾಳದಲ್ಲಿ ನೂತನ ಪಕ್ಷವೊಂದು ಉದಯ
  • ಇದು ಈಗಾಗಲೇ ಅಸ್ತಿತ್ವದಲ್ಲಿರುವ ರಾಜಕೀಯ ಪಕ್ಷಗಳಿಗೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆಯೂ ಇದೆ.
  • ರಾಜ್ಯದ ಕೋಮು ಸಾಮರಸ್ಯವನ್ನು ಕಾಪಾಡುವ ದೃಷ್ಟಿಯಿಂದ ಇಂಡಿಯನ್ ಸೆಕ್ಯೂಲರ್ ಫ್ರಂಟ್(ISF) ಪಕ್ಷವನ್ನು ಸ್ಥಾಪಿಸಲಾಗಿದೆ ಎಂದು ಸಿದ್ದಿಕಿ ಈ ವೇಳೆ ನುಡಿದರು.
Kolkata Election: ಪ.ಬಂಗಾಳ ಚುನಾವಣೆ ಹೊಸ್ತಿಲಲ್ಲಿ 'ಹೊಸ ರಾಜಕೀಯ ಪಕ್ಷ' ಉದಯ..! title=

ಕೋಲ್ಕತ್ತಾ: ವಿಧಾನಸಭೆ ಚುನಾವಣೆ ಇನ್ನೇನು ಸಮೀಪಿಸುತ್ತಿರುವಾಗಲೇ, ಪಶ್ಚಿಮ ಬಂಗಾಳದಲ್ಲಿ ನೂತನ ಪಕ್ಷವೊಂದು ಉದಯವಾಗಿದೆ. ಇದು ಈಗಾಗಲೇ ಅಸ್ತಿತ್ವದಲ್ಲಿರುವ ರಾಜಕೀಯ ಪಕ್ಷಗಳಿಗೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆಯೂ ಇದೆ.

ಫರ್ಫುರಾ ಷರೀಫ್ ಅಹಲೆ ಸುನ್ನತುಲ್ ಜಮಾತ್ ಸಂಸ್ಥಾಪಕ ಪಿರ್‌ಜಾದಾ ಅಬ್ಬಾಸ್ ಸಿದ್ದಿಕಿ, ಇಂಡಿಯನ್ ಸೆಕ್ಯೂಲರ್ ಫ್ರಂಟ್(ISF) ಎಂಬ ನೂತನ ರಾಜಕೀಯ ಪಕ್ಷದ ಘೋಷಣೆ ಮಾಡಿದ್ದಾರೆ.

Video: PPE Kit ಧರಿಸಿ 13 ಕೋಟಿ ರೂ ಮೌಲ್ಯದ 25 ಕೆಜಿ ಚಿನ್ನ ಕದ್ದ ಕಳ್ಳ...!

ಪಶ್ಚಿಮ ಬಂಗಾಳದ ಕಲುಷಿತ ರಾಜಕೀಯ ವಾತಾವರಣವನ್ನು ಸ್ವಚ್ಚಗೊಳಿಸುವ ಉದ್ದೇಶದೊಂದಿಗೆ ಹೊಸ ರಾಜಕೀಯ ಪಕ್ಷ ಸ್ಥಾಪಿಸಿರುವುದಾಗಿ ಪಿರ್‌ಜಾದಾ ಅಬ್ಬಾಸ್ ಸಿದ್ದಿಕಿ ಹೇಳಿದ್ದಾರೆ.

Gautam Gambhir: ರಾಮ ಮಂದಿರ ನಿರ್ಮಾಣಕ್ಕೆ ₹ 1 ಕೋಟಿ ದೇಣಿಗೆ ನೀಡಿದ ಗೌತಮ್ ಗಂಭೀರ್..!

ಭಾರತದ ರಾಜಕಾರಣದಲ್ಲಿ ಜಾತ್ಯಾತೀತ ತತ್ವಗಳು ಮಾಯವಾಗುತ್ತಿದ್ದು, ಈ ವಿಷಗಾಳಿ ಪಶ್ಚಿಮ ಬಂಗಾಳಕ್ಕೂ ಲಗ್ಗೆ ಇಟ್ಟಿದೆ. ರಾಜ್ಯದ ಕೋಮು ಸಾಮರಸ್ಯವನ್ನು ಕಾಪಾಡುವ ದೃಷ್ಟಿಯಿಂದ ಇಂಡಿಯನ್ ಸೆಕ್ಯೂಲರ್ ಫ್ರಂಟ್(ISF) ಪಕ್ಷವನ್ನು ಸ್ಥಾಪಿಸಲಾಗಿದೆ ಎಂದು ಸಿದ್ದಿಕಿ ಈ ವೇಳೆ ನುಡಿದರು.

Corona Vaccine ತಯಾರಿಸುತ್ತಿದ್ದ Serum Institute of India ಕಂಪನಿ ಕಟ್ಟಡದಲ್ಲಿ ಬೆಂಕಿ

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಘೋಷಣೆ ಮಾಡಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ, ಚುನಾವಣೆಯಲ್ಲಿ ಸಿದ್ದಿಕಿ ಅವರೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಅಂದರೆ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಎಐಎಂಐಎಂ ಹಾಗೂ ಐಎಸ್‌ಎಫ್ ಪಕ್ಷಗಳು ಮೈತ್ರಿ ಮಾಡಿಕೊಂಡು ಸ್ಪರ್ಧೆಗಿಳಿಯುವುದು ಖಚಿತವಾಗಿದೆ.

ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಸಿಎಂ ಅಭ್ಯರ್ಥಿ ಆಗ್ತಾರಾ ಪ್ರಿಯಾಂಕಾ ಗಾಂಧಿ..? ಇಲ್ಲಿದೆ ಮೆಗಾ ಪ್ಲಾನ್

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಲೆಯನ್ನು ಎದುರಿಸುತ್ತಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷ, ಒವೈಸಿ ಹಾಗೂ ಸಿದ್ದಿಕಿ ಮೈತ್ರಿಕೂಟವನ್ನು ಎದುರಿಸಬೇಕಾಗಿ ಬಂದಿದೆ. ಅಲ್ಪಸಂಖ್ಯಾತ ಮತಗಳು ವಿಭಜನೆಯಾಗುವ ಸಾಧ್ಯತೆ ಇರುವುದರಿಂದ ಮಮತಾ ಅವರ ಚಿಂತೆ ಮತ್ತಷ್ಟು ಹೆಚ್ಚಿದೆ.

ಎರಡನೇ ಹಂತದಲ್ಲಿ Corona Vaccine ಪಡೆಯಲಿರುವ ಪ್ರಧಾನಿ ಮೋದಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G 
Apple Link - https://apple.co/3hEw2hy 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News