ಮಹಾಮೈತ್ರಿಯ ಮೂಲ ಅಜೆಂಡಾ ಮೋದಿಯನ್ನು ತೊಲಗಿಸುವುದು- ಜಾವಡೆಕರ್

    

Last Updated : Jun 20, 2018, 05:54 PM IST
ಮಹಾಮೈತ್ರಿಯ ಮೂಲ ಅಜೆಂಡಾ ಮೋದಿಯನ್ನು ತೊಲಗಿಸುವುದು- ಜಾವಡೆಕರ್   title=
Photo courtesy: twitter

ನವದೆಹಲಿ: ಜೀ ನ್ಯೂಸ್ ನ ಕನ್ ಕ್ಲೇವ್ ನಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ ಜಾವಡೆಕರ್ ಪ್ರತಿ ಪಕ್ಷಗಳ ಮಹಾಮೈತ್ರಿಯ ಮೂಲ ಉದ್ದೇಶ ಪ್ರಧಾನಿ ನರೇಂದ್ರ ಮೋದಿಯನ್ನು ತೊಲಗಿಸುವುದು ಎಂದು ತಿಳಿಸಿದರು.

ಇಲ್ಲಿ ನಡೆಯುತ್ತಿರುವ ಕನ್ ಕ್ಲೇವ್ ನಲ್ಲಿ ಜೀ ನ್ಯೂಸ್ ನ ಸುಧೀರ್ ಚೌಧರಿ ಜೊತೆ ಸಂವಾದದ ವೇಳೆ ಮಾತನಾಡಿದ ಜಾವಡೆಕರ್ " ಭಾರತದ ಜನರು ನಮ್ಮ ಜೊತೆ ಇದ್ದಾರೆ, ನಮ್ಮ ಮೇಲೆ ಯಾವುದೇ ರೀತಿಯ ಭ್ರಷ್ಟಾಚಾರದ ಆರೋಪಗಳಿಲ್ಲ ನಾವು ಆಡಳಿತವನ್ನು ಪಾರದರ್ಷಕವನ್ನಾಗಿ ಮಾಡಿದ್ದೇವೆ ಅಲ್ಲದೆ ಎಲ್ಲ ಕಡೆ ಅಭಿವ್ರುದ್ದಿಯಿಂದಾಗಿ ಸಾಕಷ್ಟು ಜನರು ಉಪಯೋಗ ಪಡೆಡಿದ್ದಾರೆ ಎಂದು ಅವರು ತಿಳಿಸಿದರು.

ಇದೇ ವೇಳೆ ಭಯೋತ್ಪಾದನೆಯ ವಿಚಾರವಾಗಿ ಮಾತನಾಡಿದ ಅವರು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಮಟ್ಟ ಹಾಕುವ ಕಾರಣದಿಂದಾಗಿ ಈಗ ನಾವು ಪಿಡಿಪಿ ಜೊತೆ ಮೈತ್ರಿಯನ್ನು ಕಡಿತಗೊಳಿಸಿದ್ದೇವೆ ಎಂದರು.ಪ್ರತಿಪಕ್ಷಗಳ ಮಹಾಮೈತ್ರಿಯನ್ನು ಟೀಕಿಸಿದ ಜಾವಡೆಕರ್ ಅದು ವಿಫಲವಾಗಲಿದೆ ಅವರ ಪ್ರಮುಖ ಉದ್ದೇಶ ಕೇವಲ ಮೋದಿಯನ್ನು ತೊಲಗಿಸುವುದಷ್ಟೇ ಎಂದು ಅಭಿಪ್ರಾಯಪಟ್ಟರು. 

Trending News