PM Kisan : ಆಗಸ್ಟ್ 9 ರಂದು ರೈತರ ಖಾತೆಗೆ 2000 ರೂ. ಜಮಾ : ನಿಮ್ಮ ಹೆಸರನ್ನು ಇಲ್ಲಿ ಪರಿಶೀಲಿಸಿ

ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮತ್ತು ಅವರ ಆದಾಯವನ್ನು ಹೆಚ್ಚಿಸಲು, ಕೇಂದ್ರ ಸರ್ಕಾರವು ಎರಡು ಕಂತುಗಳನ್ನು 2000 ರೂ. ಅಂದರೆ 6000 ರೂ.ಗಳನ್ನು ನೇರವಾಗಿ ರೈತರ ಖಾತೆಗೆ ಕಳುಹಿಸುತ್ತದೆ.

Written by - Channabasava A Kashinakunti | Last Updated : Aug 8, 2021, 07:10 PM IST
  • ಪ್ರಧಾನಿ ನರೇಂದ್ರ ಮೋದಿ ಅವರು ಕಿಸಾನ್ ಸಮ್ಮಾನ್ ನಿಧಿ ಯೋಜನೆ 9 ನೇ ಕಂತ
  • ನಾಳೆ ಅಂದರೆ ಆಗಸ್ಟ್ 9 ರಂದು 12:30 ಕ್ಕೆ ಬಿಡುಗಡೆ ಮಾಡಲಿದ್ದಾರೆ
  • ರೈತರ ಆದಾಯವನ್ನು ಹೆಚ್ಚಿಸುವುದು ಮತ್ತು ಅವರಿಗೆ ನೇರವಾಗಿ ಆರ್ಥಿಕ ಸಹಾಯ
PM Kisan : ಆಗಸ್ಟ್ 9 ರಂದು ರೈತರ ಖಾತೆಗೆ 2000 ರೂ. ಜಮಾ : ನಿಮ್ಮ ಹೆಸರನ್ನು ಇಲ್ಲಿ ಪರಿಶೀಲಿಸಿ title=

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ 9 ನೇ ಕಂತನ್ನು ನಾಳೆ ಅಂದರೆ ಆಗಸ್ಟ್ 9 ರಂದು 12:30 ಕ್ಕೆ ಬಿಡುಗಡೆ ಮಾಡಲಿದ್ದಾರೆ. 

9 ನೇ ಕಂತಿಗೆ ಕಾಯುತ್ತಿರುವ ರೈತರು :

ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮತ್ತು ಅವರ ಆದಾಯವನ್ನು ಹೆಚ್ಚಿಸಲು, ಕೇಂದ್ರ ಸರ್ಕಾರ(Central Government)ವು ಎರಡು ಕಂತುಗಳನ್ನು 2000 ರೂ. ಅಂದರೆ 6000 ರೂ.ಗಳನ್ನು ನೇರವಾಗಿ ರೈತರ ಖಾತೆಗೆ ಕಳುಹಿಸುತ್ತದೆ. ಇಲ್ಲಿಯವರೆಗೆ, ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 8 ಕಂತುಗಳ ಹಣ ರೈತರ ಖಾತೆಗೆ ಬಂದಿದೆ. ಈಗ ಮುಂದಿನ ಅಂದರೆ 9 ನೇ ಕಂತಿನ ಹಣ ರೈತರ ಖಾತೆಗೆ ಬರಲಿದೆ. ಈ ಮೊದಲು 8 ನೇ ಕಂತನ್ನು ಮೇ 14 ರಂದು ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ : PM Kisan Tractor Yojana: Good News - ಟ್ರ್ಯಾಕ್ಟರ್ ಖರೀದಿಗಾಗಿ ಮೋದಿ ಸರ್ಕಾರ ನೀಡುತ್ತಿದೆ ಶೇ.50 ರಷ್ಟು ಸಬ್ಸಿಡಿ

ನಿಮ್ಮ ಕಂತಿನ ಸ್ಟೇಟಸ್ ಹೀಗೆ ಪರಿಶೀಲಿಸಿ :

1. ನಿಮ್ಮ ಕಂತಿನ ಸ್ಟೇಟಸ್ ನೋಡಲು, ನೀವು ಮೊದಲು ವೆಬ್‌ಸೈಟ್‌ಗೆ ಹೋಗಿ.
2. ಇದರ ನಂತರ ಬಲಭಾಗದಲ್ಲಿರುವ ಫಾರ್ಮರ್ಸ್ ಕಾರ್ನರ್(Farmers Corner) ಮೇಲೆ ಕ್ಲಿಕ್ ಮಾಡಿ.
3. ಈಗ ಫಲಾನುಭವಿ ಸ್ಥಿತಿ ಆಯ್ಕೆಯನ್ನು ಕ್ಲಿಕ್ ಮಾಡಿ.
4. ಈಗ ನಿಮ್ಮೊಂದಿಗೆ ಹೊಸ ಪುಟ ತೆರೆಯುತ್ತದೆ.
5. ಇಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
6. ಇದರ ನಂತರ ನೀವು ನಿಮ್ಮ ಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೀರಿ.

ಇದನ್ನೂ ಓದಿ : Driving License : ಈಗ ನೀವು RTO ಕಚೇರಿಗೆ ಹೋಗಿ ಚಾಲನಾ ಪರೀಕ್ಷೆ ನೀಡುವ ಅಗತ್ಯವಿಲ್ಲ! DL ಅನ್ನು ಕೇವಲ ಒಂದು ಕ್ಲಿಕ್‌ನಲ್ಲಿ ಪಡೆಯಬಹುದು!

ಯೋಜನೆಯ ಉದ್ದೇಶವೇನು?

ಈ ಯೋಜನೆಯ ಉದ್ದೇಶ ದೇಶದ ರೈತರ ಆದಾಯ(Income)ವನ್ನು ಹೆಚ್ಚಿಸುವುದು ಮತ್ತು ಅವರಿಗೆ ನೇರವಾಗಿ ಆರ್ಥಿಕ ಸಹಾಯ ಮಾಡುವುದು. ಮುಂದಿನ ಕಂತಿಗೆ ಕಾಯುತ್ತಿರುವ ರೈತರಿಗೆ ಆಗಸ್ಟ್ ನಲ್ಲಿ ಮತ್ತೆ ಒಳ್ಳೆಯ ಸುದ್ದಿ ಸಿಗಲಿದೆ. ನೀವು ಕೂಡ ಇದಕ್ಕೆ ಅರ್ಜಿ ಸಲ್ಲಿಸಿದ್ದರೆ, ನಂತರ ನೀವು ನಿಮ್ಮ ಹೆಸರನ್ನು ಈ ಪಟ್ಟಿಯಲ್ಲಿ ಪರಿಶೀಲಿಸಬಹುದು.

ಈ ರೈತರಿಗೆ ಸಿಗುವುದಿಲ್ಲ ಲಾಭ :

ಹೊಸ ನಿಯಮಗಳ ಪ್ರಕಾರ, ಸರ್ಕಾರಿ ನೌಕರರು ಅಥವಾ ಆದಾಯ ತೆರಿಗೆ ಪಾವತಿಸುವ ರೈತರು(Farmers) ಅರ್ಹರು ಎಂದು ಪರಿಗಣಿಸಲಾಗುವುದಿಲ್ಲ. ಇದರ ಹೊರತಾಗಿ, ವೈದ್ಯರು, ಎಂಜಿನಿಯರ್‌ಗಳು, ಸಿಎಗಳು ಮತ್ತು 10 ಸಾವಿರ ರೂಪಾಯಿಗಳಿಗಿಂತ ಹೆಚ್ಚು ಪಿಂಚಣಿ ಪಡೆಯುವ ಉದ್ಯೋಗಿಗಳು ಕೂಡ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ.

ಇದನ್ನೂ ಓದಿ : Video ನೋಡಿ: ಆಹಾರ ಪ್ರಿಯರನ್ನು ಹೌಹಾರಿಸಿದ ‘ಫ್ಯಾಂಟಾ ಆಮ್ಲೆಟ್‌ ಫ್ರೈ’..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

Trending News