ಪುಲ್ವಾಮಾ ದಾಳಿ: ಪಾಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪ್ರಧಾನಿಗೆ ರಾಮದೇವ್ ಆಗ್ರಹ

ಯೋಗಾ ಗುರು ಬಾಬಾ ರಾಮ್ ದೇವ್ ಪಾಕ್ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಪ್ರಧಾನಿ ಮೋದಿಗೆ ಒತ್ತಾಯಿಸಿದ್ದಾರೆ. 

Last Updated : Feb 15, 2019, 07:27 PM IST
ಪುಲ್ವಾಮಾ ದಾಳಿ: ಪಾಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪ್ರಧಾನಿಗೆ ರಾಮದೇವ್ ಆಗ್ರಹ  title=
file photo

ನವದೆಹಲಿ: ಯೋಗಾ ಗುರು ಬಾಬಾ ರಾಮ್ ದೇವ್ ಪಾಕ್ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಪ್ರಧಾನಿ ಮೋದಿಗೆ ಒತ್ತಾಯಿಸಿದ್ದಾರೆ. 

ಗುರುವಾರದಂದು ಭಯೋತ್ಪಾದಕರ ಕೃತ್ಯಕ್ಕೆ ಸುಮಾರು 40 ಸೈನಿಕರು ಮೃತಪಟ್ಟಿದ್ದರು ಈ ಹಿನ್ನಲೆಯಲ್ಲಿ ಈಗ ಪ್ರತಿಕ್ರಿಯಿಸಿರುವ ರಾಮ್ ದೇವ್ "ಪ್ರಧಾನಿ ಮೋದಿ ಈ ವಿಚಾರವಾಗಿ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬೇಕು ಪ್ರತಿಯೊಬ್ಬರೂ ಕೂಡ ಪ್ರಧಾನಿ ಬೆಂಬಲಕ್ಕಿದ್ದಾರೆ.ಇದರಲ್ಲಿ ಕೀಳು ಮಟ್ಟದ ರಾಜಕೀಯ ಮಾಡಬಾರದು.ಇದು ಭಾರತದ ಐಕ್ಯತೆ, ಸಾರ್ವಭೌಮತ್ವ, ಮತ್ತು ಸ್ವಾಭಿಮಾನದ ವಿಷಯ" ಎಂದು ಹೇಳಿದರು.  

ಈ ಉಗ್ರರ ದಾಳಿಯನ್ನು ದೇಶದ ಐಕ್ಯತೆಯನ್ನು ಒಡೆಯುವ ಕೃತ್ಯ ಎಂದು ವಾಖ್ಯಾನಿಸಿದ ರಾಮದೇವ್ " ಭಾರತವು ಯಾವೋಬ್ಬ ಭಯೋತ್ಪಾದಕನನ್ನು ಕೂಡ ಬಿಡಬಾರದು ಅದರಲ್ಲೂ ಹಫೀಜ್ ಸಯಿದ್ ಮತ್ತು ಅಜರ್ ಮಸೂದ್ ರನ್ನು ಮೊದಲು ಬಿಡಬಾರದು. ಅವರನ್ನು ಜೀವಂತವಾಗಲಿ ಅಥವಾ ಹೆಣವಾಗಿಯಾದರೂ ಆಗಲಿ ಅವರನ್ನು ಹಿಡಿದು ಭಾರತಕ್ಕೆ ತರಬೇಕು ಎಂದು ಆಗ್ರಹಿಸಿದರು.

Trending News