ಅಕಾಲಿ ದಳ ತೊರೆದು ಕಾಂಗ್ರೆಸ್ ಕೈ ಹಿಡಿದ ಸಂಸದ ಶೇರ್ ಸಿಂಗ್ ಘುಬಾಯಾ

 ಶಿರೋಮಣಿ ಅಕಾಲಿ ದಳ ತ್ಯಜಿಸಿದ ನಂತರ ಪಂಜಾಬ್ ಸಂಸದ ಶೇರ್ ಸಿಂಗ್ ಘುಬಾಯ ಅವರು ಈಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಉಪಸ್ಥಿತಿಯಲ್ಲಿ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. 

Last Updated : Mar 5, 2019, 01:49 PM IST
ಅಕಾಲಿ ದಳ ತೊರೆದು ಕಾಂಗ್ರೆಸ್ ಕೈ ಹಿಡಿದ ಸಂಸದ ಶೇರ್ ಸಿಂಗ್ ಘುಬಾಯಾ  title=
photo:ANI

ನವದೆಹಲಿ: ಶಿರೋಮಣಿ ಅಕಾಲಿ ದಳ ತ್ಯಜಿಸಿದ ನಂತರ ಪಂಜಾಬ್ ಸಂಸದ ಶೇರ್ ಸಿಂಗ್ ಘುಬಾಯ ಅವರು ಈಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಉಪಸ್ಥಿತಿಯಲ್ಲಿ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. 

ಘುಬಾಯಾ ಸಧ್ಯ ಫಿರೋಜ್ಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.ಸೋಮವಾರದಂದು ಎರಡು  ಇಬ್ಬರು ಬಾರಿ ಸಂಸದರಾಗಿದ್ದ ಘುಬಾಯಾ ಶಿರೋಮಣಿ ಅಕಾಲಿದಳ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಅಕಾಲಿ ದಳ ಘುಬಯ ಅವರನ್ನು ಈಗಾಗಲೇ ಪಕ್ಷದ ವಿರೋಧಿ ಚಟುವಟಿಕೆಗಳಿಗಾಗಿ ಪಕ್ಷದಿಂದ ಹೊರಹಾಕಲಾಗಿದೆ ಎಂದು ಹೇಳಿಕೆ ನೀಡಿತ್ತು.

ಲೋಕಸಭಾ ಚುನಾವಣೆಗೆ ಕೇವಲ ತಿಂಗಳು ಬಾಕಿ ಇರುವ ಸಂದರ್ಭದಲ್ಲಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿರುವುದು ಈಗ ರಾಜಕೀಯದಲ್ಲಿ ಕೂತುಹಲ ಮೂಡಿಸಿದೆ.

 

Trending News