ಚುನಾವಣೆಗೆ ರಣತಂತ್ರ ರೂಪಿಸಲು ಮುಂದಾದ ರಾಹುಲ್ ಗಾಂಧಿ

    

Last Updated : Feb 6, 2018, 03:11 PM IST
ಚುನಾವಣೆಗೆ ರಣತಂತ್ರ ರೂಪಿಸಲು ಮುಂದಾದ ರಾಹುಲ್ ಗಾಂಧಿ title=

ನವದೆಹಲಿ: ಕಾಂಗ್ರೇಸ್ ಅಧ್ಯಕ್ಷರಾದ ಬಳಿಕ ತಮ್ಮ ಭಿನ್ನ ರೀತಿಯ ಪಕ್ಷದ ಕಾರ್ಯ ಯೋಜನೆಗಳ ಮೂಲಕ ದೇಶದ ಗಮನ ಸೆಳೆದಿರುವ ರಾಹುಲ್ ಗಾಂಧಿಯವರು ಈಗ ಹೊಸ ಕಾರ್ಯ ತಂತ್ರ ರೂಪಿಸಲು ಮುಂದಾಗಿದ್ದಾರೆ.

ಗುಜರಾತ್ ಚುನಾವಣೆಯಲ್ಲಿ ತಮ್ಮ  ಕಾರ್ಯಶೈಲಿಯಿಂದ ಬಿಜೆಪಿ ಮತ್ತು ಪ್ರಧಾನಿಯವರ ಬೆವರು ಇಳಿಸುವಲ್ಲಿ ಯಶ ಕಂಡಿದ್ದ ಅವರು, ಮುಂಬರುವ 2019 ರ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಕಾರ್ಯತಂತ್ರ ರೂಪಿಸುತ್ತ ಹೆಜ್ಜೆಯನ್ನಿರಿಸಿದ್ದಾರೆ. 

ಅದಕ್ಕೆ ಪೂರ್ವಭಾವಿಯಾಗಿ ನೇರವಾಗಿ ಸಾರ್ವಜನಿಕರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಲು ಈ ಕಾಂಗ್ರೆಸಿನ ನಾಯಕ ಮುಂದಾಗಿದ್ದಾರೆ. ಆ ಮೂಲಕ ಚುನಾವಣೆಗೂ ಮುನ್ನವೇ ವೇದಿಕೆ ಸೃಷ್ಟಿ ನಿರ್ಮಿಸಲು ರಾಹುಲ್ ಗಾಂಧಿ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಸಾರ್ವಜನಿಕರ ಭೇಟಿಯನ್ನು ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಅವರು ಹಮ್ಮಿಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.

Trending News