ಮಾತುಕತೆ ಮೂಲಕ ಕಾಶ್ಮೀರ ಸಮಸ್ಯೆ ಬಗೆಹರಿಸಿಕೊಳ್ಳಿ; ಪ್ರಧಾನಿ ಮೋದಿಗೆ ಯುಕೆ ಪಿಎಂ ಸಲಹೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಕಾಶ್ಮೀರ ವಿಷಯದ ಬಗ್ಗೆ ದೂರವಾಣಿಯಲ್ಲಿ ಚರ್ಚಿಸಿದ್ದಾರೆ.

Last Updated : Aug 21, 2019, 12:10 PM IST
ಮಾತುಕತೆ ಮೂಲಕ ಕಾಶ್ಮೀರ ಸಮಸ್ಯೆ ಬಗೆಹರಿಸಿಕೊಳ್ಳಿ; ಪ್ರಧಾನಿ ಮೋದಿಗೆ ಯುಕೆ ಪಿಎಂ ಸಲಹೆ title=
File Image

ನವದೆಹಲಿ: ಕಾಶ್ಮೀರ ವಿಷಯವನ್ನು ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ವಿಷಯ ಎಂದು ತಿಳಿಸಿರುವ ಬ್ರಿಟಿಷ್ ಸರ್ಕಾರ, ಮಾತುಕತೆ ಮೂಲಕ ಈ ಸಮಸ್ಯೆಯನ್ನು ಉಭಯ ದೇಶಗಳು ಬಗೆಹರಿಸಿಕೊಳ್ಳಬೇಕು ಎಂಬುದನ್ನು ಒತ್ತಿ ಹೇಳಿದೆ. ಮಂಗಳವಾರ ಮಧ್ಯಾಹ್ನ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕರೆ ಮಾಡಿದ್ದ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಈ ಬಗ್ಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಯುಕೆ ಸರ್ಕಾರ, "ಯುಕೆ ಪ್ರಧಾನಿ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಪ್ರಸಕ್ತ ಕಾಶ್ಮೀರ ಸಮಸ್ಯೆ ಕುರಿತು ಮಾತುಕತೆ ನಡೆಸಿದ್ದಾರೆ. ಕಾಶ್ಮೀರ ಸಮಸ್ಯೆಯು ನೆರೆಯ ದೇಶಗಳಾದ ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ವಿಷಯವಾಗಿದೆ. ಈ ಸಮಸ್ಯೆಯನ್ನು ಎರಡೂ ರಾಷ್ಟ್ರಗಳು ಕೂತು ಶಾಂತಿಯುತ ಮಾತುಕತೆ ನಡೆಸುವ ಮೂಲಕ ಬಗೆಹರಿಸಿಕೊಳ್ಳುವುದರ ಮಹತ್ವವನ್ನು ಒತ್ತಿಹೇಳಿರುವುದಾಗಿ ತಿಳಿಸಿದೆ".

ವಾರಾಂತ್ಯದಲ್ಲಿ ಫ್ರಾನ್ಸ್‌ನಲ್ಲಿ ನಡೆಯಲಿರುವ ಜಿ 7 ಶೃಂಗಸಭೆಯಲ್ಲಿ ಉಭಯ ನಾಯಕರು ಹಾಜರಾಗಲಿದ್ದಾರೆ ಮತ್ತು "ಜಿ 7 ಶೃಂಗ ಸಭೆಗಿಂತ ಮುಂಚಿತವಾಗಿ, ಹವಾಮಾನ ಬದಲಾವಣೆ ಮತ್ತು ಇತರ ಬೆದರಿಕೆಗಳನ್ನು ನಿಭಾಯಿಸಲು ಒಟ್ಟಾಗಿ ಕೆಲಸ ಮಾಡುವ ಮಹತ್ವವನ್ನು ಪ್ರಧಾನಿ ಮತ್ತು ಪ್ರಧಾನಿ ಮೋದಿ ಒಪ್ಪಿಕೊಂಡಿರುವುದಾಗಿ ಯುಕೆ ತಿಳಿಸಿದೆ".

ದೂರವಾಣಿ ಸಂಭಾಷಣೆ ಸಂದರ್ಭದಲ್ಲಿ ಭಯೋತ್ಪಾದಕತೆ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ಭಾರತ ಮತ್ತು ಯುಕೆ ಪ್ರಧಾನಿಗಳು ಸಮಾಲೋಚನೆ ನಡೆಸಿದ್ದು, ಭಾರತ ಮತ್ತು ಯುರೋಪ್ ಸೇರಿದಂತೆ ವಿಶ್ವದ ಎಲ್ಲ ಭಾಗಗಳಲ್ಲಿ ಭಯೋತ್ಪಾದನೆ ಹಾವಳಿ ಬಗ್ಗೆ ಗಂಭೀರ ಚರ್ಚೆ ನಡೆದಿದೆ ಎನ್ನಲಾಗಿದೆ.

ಮಾತುಕತೆ ವೇಳೆ ಪ್ರಧಾನಿ ಮೋದಿ, ಸ್ವಾತಂತ್ರ್ಯ ದಿನದಂದು ಪಾಕಿಸ್ತಾನ ಮತ್ತು ಖಲಿಸ್ತಾನಿ ಗುಂಪುಗಳು ಭಾರತೀಯ ಕಾರ್ಯಾಚರಣೆಯ ಹೊರಗೆ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ವಿಷಯವನ್ನೂ ಪ್ರಸ್ತಾಪಿಸಿದ್ದಾರೆ ಎಂದು ಹೇಳಲಾಗಿದೆ.

ನವದೆಹಲಿ ಮೂಲಗಳ ಹೇಳಿಕೆ ಪ್ರಕಾರ, ಪ್ರಧಾನಿ ಮೋದಿ, “ಹಿಂಸಾತ್ಮಕ ವಿಧಾನಗಳನ್ನು ಒಳಗೊಂಡಂತೆ ತಮ್ಮ ಪ್ರೇರಿತ ಕಾರ್ಯಸೂಚಿಯನ್ನು ಅನುಸರಿಸುವ ಪಟ್ಟಭದ್ರ ಹಿತಾಸಕ್ತಿಗಳು ಎದುರಿಸುತ್ತಿರುವ ಸವಾಲುಗಳತ್ತ ಗಮನ ಸೆಳೆದರು”.

"ಈ ಸಂದರ್ಭದಲ್ಲಿ ಅವರು ಭಾರತದ ಸ್ವಾತಂತ್ರ್ಯ ದಿನದಂದು ಲಂಡನ್ನಲ್ಲಿ ಭಾರತದ ಹೈಕಮಿಷನ್ ವಿರುದ್ಧ ನಡೆಸಿದ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯವನ್ನು ಉಲ್ಲೇಖಿಸಿದ್ದಾರೆ" ಎಂದು ಹೇಳಲಾಗಿದೆ.

ಬ್ರಿಟಿಷ್ ಪ್ರಧಾನಿ ಈ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ ಮತ್ತು ಭಾರತೀಯ ಕಾರ್ಯಾಚರಣೆಯ ಸುರಕ್ಷತೆಗೆ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯುಕೆ ಪ್ರಧಾನ ಮಂತ್ರಿ ಜಾನ್ಸನ್ "ಹೈಕಮಿಷನ್, ಅದರ ಸಿಬ್ಬಂದಿ ಮತ್ತು ಸಂದರ್ಶಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು" ಎಂದು ಹೇಳಲಾಗಿದೆ.

ಆಗಸ್ಟ್ 15 ರಂದು ಲಂಡನ್‌ನ ಪಾಕಿಸ್ತಾನಿ ಮತ್ತು ಖಲಿಸ್ತಾನಿ ಗುಂಪುಗಳ ಸಾವಿರಾರು ಪ್ರತಿಭಟನಾಕಾರರು ಭಾರತೀಯ ಹೈಕಮಿಷನ್‌ನ ಕಚೇರಿ ಹೊರಗೆ ಘರ್ಷಣೆ ನಡೆಸಿದರು. ಘಟನೆಯಲ್ಲಿ ನಾಲ್ಕು ಜನರನ್ನು ಲಂಡನ್ ಅಧಿಕಾರಿಗಳು ಬಂಧಿಸಿದರೆ, ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ.

ಪ್ರತಿಭಟನೆ ನಡೆಯುವ ಬಗ್ಗೆ ಭಾರತೀಯ ಹೈಕಮಿಷನ್‌ ಮೊದಲೇ ಮಾಹಿತಿ ತಿಳಿಸಿದ್ದು, ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಳಲಾಗಿದ್ದರೂ, ಅದು ನಡೆದ ಪ್ರಮಾಣ ಮತ್ತು ನಾಟಕೀಯ ದೃಶ್ಯಗಳು ಭಾರತೀಯ ವಲಸೆಗಾರರ ಅನೇಕ ಸದಸ್ಯರನ್ನು ಆಘಾತಕ್ಕೊಳಗಾಗಿಸಿವೆ.

ಹಿಂಸಾತ್ಮಕ ಪ್ರತಿಭಟನೆಗಳ ವಿಷಯವನ್ನು ಭಾರತ ಈಗಾಗಲೇ ಯುನೈಟೆಡ್ ಕಿಂಗ್‌ಡಂನೊಂದಿಗೆ ಚರ್ಚಿಸಿದ್ದು,  ಭಾರತೀಯ ಹೈಕಮಿಷನ್‌ನ ಸುರಕ್ಷತೆಯನ್ನು ಹೇಗೆ ಹಾಳುಮಾಡಿದೆ ಎಂಬುದರ ಕುರಿತು ತನ್ನ ಕಳವಳವನ್ನು ವ್ಯಕ್ತಪಡಿಸಿದೆ.

Trending News