Maharashtra Political Crisis: ಮಹಾರಾಷ್ಟ್ರ ವಿಧಾನಸಭೆ ವಿಸರ್ಜನೆಯ ಹಿಂಟ್‌ ಕೊಟ್ಟ ರಾವತ್‌

Maharashtra Political Crisis: ಸದ್ಯ ಎಲ್ಲರ ಚಿತ್ತ ಮಹಾರಾಷ್ಟ್ರ ರಾಜ್ಯ ರಾಜಕಾರಣದ ಮೇಲಿದೆ. ಈ ಬೆನ್ನಲ್ಲೇ ಶಿವಸೇನೆ ಸಂಸದ ಸಂಜಯ್ ರಾವತ್ ರಾಜ್ಯ ವಿಧಾನಸಭೆ ವಿಸರ್ಜನೆಯ ಸುಳಿವು ನೀಡಿದ್ದಾರೆ.  

Written by - Chetana Devarmani | Last Updated : Jun 22, 2022, 12:16 PM IST
  • ಸದ್ಯ ಎಲ್ಲರ ಚಿತ್ತ ಮಹಾರಾಷ್ಟ್ರ ರಾಜ್ಯ ರಾಜಕಾರಣದ ಮೇಲಿದೆ
  • ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟು
  • ವಿಧಾನಸಭೆ ವಿಸರ್ಜನೆಯ ಸುಳಿವು ನೀಡಿದ ಶಿವಸೇನೆ ಸಂಸದ ಸಂಜಯ್ ರಾವತ್
Maharashtra Political Crisis: ಮಹಾರಾಷ್ಟ್ರ ವಿಧಾನಸಭೆ ವಿಸರ್ಜನೆಯ ಹಿಂಟ್‌ ಕೊಟ್ಟ ರಾವತ್‌  title=
ಶಿವಸೇನೆ ಸಂಸದ ಸಂಜಯ್ ರಾವತ್

Maharashtra Political Crisis: ಸದ್ಯ ಎಲ್ಲರ ಚಿತ್ತ ಮಹಾರಾಷ್ಟ್ರ ರಾಜ್ಯ ರಾಜಕಾರಣದ ಮೇಲಿದೆ. ಈ ಬೆನ್ನಲ್ಲೇ ಶಿವಸೇನೆ ಸಂಸದ ಸಂಜಯ್ ರಾವತ್ ರಾಜ್ಯ ವಿಧಾನಸಭೆ ವಿಸರ್ಜನೆಯ ಸುಳಿವು ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟು ವಿಧಾನಸಭೆ ವಿಸರ್ಜನೆಯತ್ತ ಸಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

 

 

ಸೂರತ್‌ನಿಂದ ಅಸ್ಸೋಂಗೆ:

ಮಹಾರಾಷ್ಟ್ರದಲ್ಲಿ ಬಂಡಾಯವೆದ್ದಿರುವ ಶಿವಸೇನಾ ನಾಯಕ ಮತ್ತು ಸಚಿವ ಏಕನಾಥ್ ಶಿಂದೆ ಅವರು ಬೆಂಬಲಿಗ ಶಾಸಕರ ಜೊತೆ ಸೂರತ್‌ನಿಂದ ಅಸ್ಸೋಂಗೆ ತೆರಳಿದ್ದಾರೆ. ತಮಗೆ 40 ಶಿವಸೇನಾ ಶಾಸಕರ ಬೆಂಬಲವಿದೆ ಎಂದು ಅವರು ಹೇಳಿದ್ದು, ಕುತೂಹಕಲ ಕೆರಳಿಸಿದೆ. 

ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರಕ್ಕೆ ತಲೆನೋವಾದ ಏಕನಾಥ್ ಶಿಂಧೆ ; ಇಂದು ಮಹತ್ವದ ನಡೆ ಸಾಧ್ಯತೆ

ಶಿಂಧೆ ಅವರಿಗೆ 37 ಶಾಸಕರ ಬೆಂಬಲ:

ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಅನರ್ಹತೆಯನ್ನು ಎದುರಿಸದೆ ಪಕ್ಷವನ್ನು ಒಡೆಯಲು ಏಕನಾಥ್ ಶಿಂಧೆ ಅವರಿಗೆ 37 ಶಾಸಕರ ಬೆಂಬಲ - ಅವರ ಪಕ್ಷದಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ತಾನು ಶಿವಸೇನೆಯಿಂದ ಬೇರ್ಪಡುತ್ತಿಲ್ಲ ಮತ್ತು ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆಯ ಹಿಂದುತ್ವ ಸಿದ್ಧಾಂತವನ್ನು ಮುಂದಕ್ಕೆ ಕೊಂಡೊಯ್ಯಲು ಬಯಸುವುದಾಗಿ ಶಿಂಧೆ ಹೇಳಿದ್ದಾರೆ. "ನಾವು ಬಾಳಾಸಾಹೇಬ್ ಠಾಕ್ರೆಯವರ ಶಿವಸೇನೆಯನ್ನು ಬಿಟ್ಟಿಲ್ಲ ಮತ್ತು ಅದನ್ನು ಬಿಡುವುದಿಲ್ಲ. ನಾವು ಹಿಂದುತ್ವವನ್ನು ನಂಬುತ್ತೇವೆ" ಎಂದು ಅವರು ಹೇಳಿದರು.

ಉದ್ಧವ್ ಠಾಕ್ರೆ ಮಾತುಕತೆ ವಿಫಲ!

ಏಕನಾಥ್ ಶಿಂಧೆ ಅವರ ಮನವೊಲಿಸಲು ಪ್ರಯತ್ನಿಸಿದ್ದ ಉದ್ಧವ್ ಠಾಕ್ರೆ, ಪಕ್ಷಕ್ಕೆ ಮರಳುವಂತೆ  ಕೇಳಿಕೊಂಡಿದ್ದರು. ಶಿವಸೇನೆಯು ಬಿಜೆಪಿಯೊಂದಿಗಿನ ಮೈತ್ರಿಯನ್ನು ಪುನಃಸ್ಥಾಪಿಸಲು ಮತ್ತು ರಾಜ್ಯದಲ್ಲಿ ಜಂಟಿಯಾಗಿ ಆಡಳಿತ ನಡೆಸಬೇಕೆಂದು ಶಿಂಧೆ ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಂತಹ ಯಾವುದೇ ಘರ್ಷಣೆಯನ್ನು ತಪ್ಪಿಸಲು ಬಿಜೆಪಿಯು ಶಿವಸೇನೆಯ ಶಾಸಕರನ್ನು ಗುವಾಹಟಿಗೆ ಸ್ಥಳಾಂತರಿಸಿದೆ ಎಂದು ವರದಿಗಳು ಸೂಚಿಸುತ್ತವೆ.

ಮಧ್ಯಾಹ್ನ 1 ಗಂಟೆಗೆ ಮಹಾರಾಷ್ಟ್ರ ಸಂಪುಟ ಸಭೆ:

ಉದ್ಧವ್ ಠಾಕ್ರೆ ಅವರು ಮಧ್ಯಾಹ್ನ 1 ಗಂಟೆಗೆ ಮಹಾರಾಷ್ಟ್ರ ಸಂಪುಟ ಸಭೆಯನ್ನು ಕರೆದಿದ್ದಾರೆ. ಸಭೆಗೂ ಮುನ್ನ ಅವರು ಮಿತ್ರ ಪಕ್ಷದ ನಾಯಕ ಶರದ್ ಪವಾರ್ ಮತ್ತು ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು : 40 ಶಾಸಕರೊಂದಿಗೆ ಸೂರತ್‌ನಿಂದ ಗುವಾಹಟಿಗೆ ಶಿಂಧೆ ಶಿಫ್ಟ್

ಮಹಾರಾಷ್ಟ್ರದ ರಾಜ್ಯಪಾಲರಿಗೆ ಕೊರೊನಾ ದೃಢ:

ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರಿಗೆ ಕೊರೊನಾ ದೃಢಪಟ್ಟಿದ್ದು, ಅವರನ್ನು ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರನ್ನು ಸಂಪರ್ಕಿಸಲು ಬಯಸುವ ಯಾರಾದರೂ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಂಪರ್ಕಿಸಬಹುದಾಗಿದೆ. 

ಯಾರ ಬಳಿ ಎಷ್ಟು ಸಂಖ್ಯಾಬಲ?  

ಶಿವಸೇನೆ ಒಟ್ಟು 55 ಶಾಸಕರನ್ನು ಹೊಂದಿದ್ದು, ಎನ್‌ಸಿಪಿ 53 ಮತ್ತು ಕಾಂಗ್ರೆಸ್ 44 ಶಾಸಕರನ್ನು ಹೊಂದಿವೆ. 288 ಸದಸ್ಯರ ಸದನದಲ್ಲಿ ಪ್ರಸ್ತುತ 285 ಶಾಸಕರಿದ್ದಾರೆ. ಬಿಜೆಪಿ 106 ಶಾಸಕರನ್ನು ಹೊಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News