ಜನಗಣ ಮನ ರಾಷ್ಟ್ರಗೀತೆಯನ್ನು ತಿದ್ದುಪಡಿ ಮಾಡಲು ಪ್ರಧಾನಿ ಮೋದಿಗೆ ಸುಬ್ರಮಣ್ಯ ಸ್ವಾಮಿ ಪತ್ರ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಸಂಸದ ಸುಬ್ರಮಣ್ಯಂ ಸ್ವಾಮಿ ಮಂಗಳವಾರ ರವೀಂದ್ರನಾಥ ಟ್ಯಾಗೋರ್ ಸಂಯೋಜಿಸಿರುವ ಭಾರತೀಯ ರಾಷ್ಟ್ರಗೀತೆ 'ಜನ ಗಣ ಮನ'ದ ಮೂಲ ಆವೃತ್ತಿಯನ್ನು ಬದಲಿಸುವಂತೆ ದೇಶದ ಪ್ರಧಾನಿಯನ್ನು ಒತ್ತಾಯಿಸಿದ್ದಾರೆ.1943 ರಲ್ಲಿ ಭಾರತೀಯ ರಾಷ್ಟ್ರೀಯ ಸೇನೆ (ಐಎನ್‌ಎ) ಅಂಗೀಕರಿಸಿದ ಆವೃತ್ತಿಯನ್ನು ಅಳವಡಿಸಿಕೊಳ್ಳಲು ಸೂಚಿಸಿದ್ದಾರೆ.

Last Updated : Dec 1, 2020, 09:57 PM IST
ಜನಗಣ ಮನ ರಾಷ್ಟ್ರಗೀತೆಯನ್ನು ತಿದ್ದುಪಡಿ ಮಾಡಲು ಪ್ರಧಾನಿ ಮೋದಿಗೆ ಸುಬ್ರಮಣ್ಯ ಸ್ವಾಮಿ ಪತ್ರ  title=

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಸಂಸದ ಸುಬ್ರಮಣ್ಯಂ ಸ್ವಾಮಿ ಮಂಗಳವಾರ ರವೀಂದ್ರನಾಥ ಟ್ಯಾಗೋರ್ ಸಂಯೋಜಿಸಿರುವ ಭಾರತೀಯ ರಾಷ್ಟ್ರಗೀತೆ 'ಜನ ಗಣ ಮನ'ದ ಮೂಲ ಆವೃತ್ತಿಯನ್ನು ಬದಲಿಸುವಂತೆ ದೇಶದ ಪ್ರಧಾನಿಯನ್ನು ಒತ್ತಾಯಿಸಿದ್ದಾರೆ.1943 ರಲ್ಲಿ ಭಾರತೀಯ ರಾಷ್ಟ್ರೀಯ ಸೇನೆ (ಐಎನ್‌ಎ) ಅಂಗೀಕರಿಸಿದ ಆವೃತ್ತಿಯನ್ನು ಅಳವಡಿಸಿಕೊಳ್ಳಲು ಸೂಚಿಸಿದ್ದಾರೆ.

5 ಟ್ರಿಲಿಯನ್ ಡಾಲರ್ ಆರ್ಥಿಕತೆ ಕನಸಿಗೆ ಗುಡ್ ಬೈ ಹೇಳಿ- ಸುಬ್ರಮಣಿಯನ್ ಸ್ವಾಮಿ

ರಾಷ್ಟ್ರಗೀತೆ ಜನ ಗಣ ಮನ'ದಲ್ಲಿ ಕೆಲವು ಪದಗಳನ್ನು ಐಎನ್‌ಎ ಸಂಯೋಜಿಸಿ ಹಾಡಿದ ಆವೃತ್ತಿಗೆ ಬದಲಾಯಿಸಬೇಕೆಂದು ಭಾರತದ ಬಹುಪಾಲು ಯುವಕರ" ಬೇಡಿಕೆಯಾಗಿದೆ ಎಂದು ಸ್ವಾಮಿ ಬರೆದಿದ್ದಾರೆ.ಅಕ್ಟೋಬರ್ 21,1943 ರಂದು ಭಾರತದ ಸ್ವಾತಂತ್ರ್ಯ ಘೋಷಣೆಯ ಸಂದರ್ಭ, ಸುಭಾಷ್ ಚಂದ್ರ ಬೋಸ್ ಮಣಿಪುರದ ಇಂಫಾಲ್ ಅನ್ನು ವಶಪಡಿಸಿಕೊಂಡ ನಂತರ ಐಎನ್ಎ ಸಂಯೋಜಿಸಿ ಜನಗಣಮನವನ್ನು ಹಾಡಿದ್ದರು.ರಾಷ್ಟ್ರಗೀತೆ 'ಜನ ಗಣ ಮನ'ದಲ್ಲಿನ ಪದಗಳನ್ನು ತಿದ್ದುಪಡಿ ಮಾಡಬಹುದು ಅಥವಾ ಭವಿಷ್ಯದಲ್ಲಿ ಇತರ' ಸೂಕ್ತ ಪದಗಳೊಂದಿಗೆ 'ಬದಲಾಯಿಸಬಹುದು ಎಂದು ಸೂಚಿಸಿದ ಡಾ.ರಾಜೇಂದ್ರ ಪ್ರಸಾದ್ ಅವರ ಮಾತುಗಳನ್ನು ಸ್ವಾಮಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ರಾಮ ಮಂದಿರ ಭೂಮಿ ಪೂಜೆಗೂ ಮುನ್ನ ಸರ್ಕಾರದ ಮುಂದೆ ದೊಡ್ಡ ಬೇಡಿಕೆ ಇಟ್ಟ ಸುಬ್ರಮಣಿಯನ್ ಸ್ವಾಮಿ

ಸುಭಾಷ್ ಬೋಸ್ ಮಾರ್ಪಡಿಸಿದ ಜನ ಗಣ ಮನ ರಾಷ್ಟ್ರಗೀತೆ 1949 ರಲ್ಲಿ ಅಳವಡಿಸಿಕೊಂಡ ಮೂಲ ಟ್ಯಾಗೋರ್ ಆವೃತ್ತಿಯನ್ನು ಬದಲಿಸಬೇಕು. ಐಎನ್ಎ ಅಳವಡಿಸಿಕೊಂಡ ಆವೃತ್ತಿ ಹೆಚ್ಚು ದೇಶಭಕ್ತಿ ಮತ್ತು ನಿಖರವಾಗಿದೆ.ಸಂವಿಧಾನ ಸಭೆಯಲ್ಲಿ ರಾಜೇಂದ್ರ ಪ್ರಸಾದ್ ಅವರು ತಮ್ಮ ಪದ್ಯಗಳನ್ನು ತಿದ್ದುಪಡಿ ಮಾಡಬಹುದೆಂದು ಘೋಷಿಸಿದರು" ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.

1905 ರಲ್ಲಿ ರವೀಂದ್ರನಾಥ ಟ್ಯಾಗೋರ್ ಅವರು ಭಾರತ್ ಭಾಗ್ಯ ಬಿಧಾತ ಎಂಬ ಶೀರ್ಷಿಕೆಯಲ್ಲಿ ಒಂದು ಕವಿತೆಯಾಗಿ ಗೀತೆ ಬರೆದಿದ್ದಾರೆ.ಇದನ್ನು ಮೊದಲ ಬಾರಿಗೆ 1911 ರ ಡಿಸೆಂಬರ್‌ನಲ್ಲಿ ಕಾಂಗ್ರೆಸ್ ಕಲ್ಕತ್ತಾ ಅಧಿವೇಶನದಲ್ಲಿ ಹಾಡಲಾಯಿತು. ಜನವರಿ 24, 1950 ರಂದು, ಈ ಹಾಡನ್ನು ಅದರ ಹಿಂದಿ ಆವೃತ್ತಿಯಲ್ಲಿ ಸಂವಿಧಾನ ಸಭೆಯು ಭಾರತದ ರಾಷ್ಟ್ರಗೀತೆಯಾಗಿ ಸ್ವೀಕರಿಸಿತು. ಭಾರತೀಯ ಸರ್ಕಾರದ ವೆಬ್‌ಸೈಟ್ ಗಮನಿಸಿದಂತೆ, ಸಂಪೂರ್ಣ ಹಾಡು ಐದು ಚರಣಗಳನ್ನು ಒಳಗೊಂಡಿದೆ. ಮೊದಲ ಚರಣದಲ್ಲಿ ರಾಷ್ಟ್ರಗೀತೆಯ ಪೂರ್ಣ ಆವೃತ್ತಿಯಿದೆ.

Trending News