'ಉತ್ತರ ಪ್ರದೇಶದ ಜನರ ಅಭಿವೃದ್ಧಿಯು ಭಾರತದ ಅಭಿವೃದ್ಧಿಗೆ ವೇಗವನ್ನು ನೀಡುತ್ತದೆ -ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಬುಧವಾರದಂದು ಬಾರಾಬಂಕಿಯಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ ಉತ್ತರ ಪ್ರದೇಶದ ಜನರ ಅಭಿವೃದ್ಧಿಯು ಭಾರತದ ಅಭಿವೃದ್ಧಿಗೆ ವೇಗವನ್ನು ನೀಡುತ್ತದೆ ಎಂದು ಹೇಳಿದರು.

Written by - Zee Kannada News Desk | Last Updated : Feb 23, 2022, 02:35 PM IST
  • 'ಈ ಚುನಾವಣೆಗಳು ಯುಪಿ ಅಭಿವೃದ್ಧಿಗೆ ಮಾತ್ರವಲ್ಲದೆ ದೇಶಕ್ಕೂ ಅತ್ಯಗತ್ಯ.ಯುಪಿ ಪ್ರದೇಶದ ಪ್ರಕಾರ ದೇಶದ ಒಟ್ಟು 7% ಆಗಿರಬಹುದು.ಆದರೆ ನೀವು ಅದರ ಜನಸಂಖ್ಯೆಯನ್ನು ನೋಡಿದರೆ ಅದು ಭಾರತದ 16% ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಒಳಗೊಂಡಿದೆ' ಎಂದು ಪ್ರಧಾನಿ ಮೋದಿ ಹೇಳಿದರು.
'ಉತ್ತರ ಪ್ರದೇಶದ ಜನರ ಅಭಿವೃದ್ಧಿಯು ಭಾರತದ ಅಭಿವೃದ್ಧಿಗೆ ವೇಗವನ್ನು ನೀಡುತ್ತದೆ -ಪ್ರಧಾನಿ ಮೋದಿ  title=

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬುಧವಾರದಂದು ಬಾರಾಬಂಕಿಯಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ ಉತ್ತರ ಪ್ರದೇಶದ ಜನರ ಅಭಿವೃದ್ಧಿಯು ಭಾರತದ ಅಭಿವೃದ್ಧಿಗೆ ವೇಗವನ್ನು ನೀಡುತ್ತದೆ ಎಂದು ಹೇಳಿದರು.

ಫೆಬ್ರವರಿ 27 ರಂದು ಬಾರಾಬಂಕಿಯಲ್ಲಿ ಚುನಾವಣೆಗೆ ಮುನ್ನ ಮಾತನಾಡಿದ ಪ್ರಧಾನಿ ಮೋದಿ, ಈ ಚುನಾವಣೆಗಳು ಯುಪಿ ಅಭಿವೃದ್ಧಿಗೆ ಮಾತ್ರವಲ್ಲದೆ ದೇಶಕ್ಕೂ ಅತ್ಯಗತ್ಯ ಎಂದು ಹೇಳಿದರು.'ಯುಪಿ ಜನರ ಅಭಿವೃದ್ಧಿಯು ಭಾರತದ ಅಭಿವೃದ್ಧಿಗೆ ವೇಗವನ್ನು ನೀಡುತ್ತದೆ.ಯುಪಿ ಜನರ ಸಾಮರ್ಥ್ಯವು ಭಾರತದ ಜನರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.ಆದರೆ ಯುಪಿಯಲ್ಲಿ ಹಲವಾರು ದಶಕಗಳಿಂದ ರಾಜವಂಶ ಆಧಾರಿತ ಸರ್ಕಾರಗಳು ಉತ್ತರ ಪ್ರದೇಶದ ಸಾಮರ್ಥ್ಯಕ್ಕೆ ಅನುಗುಣವಾಗಿ ನ್ಯಾಯವನ್ನು ಒದಗಿಸಲಿಲ್ಲ' ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ: Surya Kumar Yadav: ಟೀಮ್ ಇಂಡಿಯಾಗೆ ಕೆಟ್ಟ ಸುದ್ದಿ, ಶ್ರೀಲಂಕಾ ವಿರುದ್ಧದ T20 ಸರಣಿಯಿಂದ ಈ ಆಟಗಾರ ಔಟ್

'ಈ ಚುನಾವಣೆಗಳು ಯುಪಿ ಅಭಿವೃದ್ಧಿಗೆ ಮಾತ್ರವಲ್ಲದೆ ದೇಶಕ್ಕೂ ಅತ್ಯಗತ್ಯ.ಯುಪಿ ಪ್ರದೇಶದ ಪ್ರಕಾರ ದೇಶದ ಒಟ್ಟು 7% ಆಗಿರಬಹುದು.ಆದರೆ ನೀವು ಅದರ ಜನಸಂಖ್ಯೆಯನ್ನು ನೋಡಿದರೆ ಅದು ಭಾರತದ 16% ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಒಳಗೊಂಡಿದೆ' ಎಂದು ಪ್ರಧಾನಿ ಮೋದಿ ಹೇಳಿದರು.

ಇದೆ ವೇಳೆ ಪ್ರತಿಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ "ರಾಜವಂಶದವರು ಬಡವರು ಯಾವಾಗಲೂ ತಮ್ಮ ಪಾದಗಳ ಬಳಿ ಇರಬೇಕೆಂದು ಬಯಸುತ್ತಾರೆ ಮತ್ತು ಅವರ ಸುತ್ತಲೂ ತಿರುಗುತ್ತಿರುತ್ತಾರೆ" ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: Ind vs SL:ಶ್ರೀಲಂಕಾ ಸರಣಿಗೆ ಟೀಂ ಇಂಡಿಯಾ ಪ್ರಕಟ; ಬಲಿಷ್ಠ ಆಟಗಾರನಿಗೆ ಸಿಗದ ಅವಕಾಶ

"ನಾವು ಬಡವರ ಬಗ್ಗೆ ಕಾಳಜಿ ವಹಿಸುತ್ತೇವೆ ಮತ್ತು ಅವರ ಜೀವನದ ಸಮಸ್ಯೆಗಳನ್ನು ಕಡಿಮೆ ಮಾಡಲು ನಾವು ಕೆಲಸ ಮಾಡುತ್ತಿದ್ದೇವೆ.ಅದಕ್ಕಾಗಿಯೇ ಇಂದು ಉತ್ತರ ಪ್ರದೇಶದ ಬಡವರು ಬಿಜೆಪಿಯೊಂದಿಗೆ ನಿಂತಿದ್ದಾರೆ ಮತ್ತು ಎಲ್ಲಾ ಹಂತಗಳಲ್ಲಿ ಬಿಜೆಪಿಯನ್ನು ಆಶೀರ್ವದಿಸುತ್ತಿದ್ದಾರೆ" ಎಂದು ಅವರು ಹೇಳಿದರು.

ಇದನ್ನೂ ಓದಿ: ರಾಷ್ಟ್ರೀಯ ಮತದಾರರ ಜಾಗೃತಿ ಸ್ಪರ್ಧೆಗಳಲ್ಲಿ ಭಾಗವಹಿಸಿ, ಆಕರ್ಷಕ ಬಹುಮಾನ ಗೆಲ್ಲಿ...!

ಬಾರಾಬಂಕಿ ಸೇರಿದಂತೆ ಉತ್ತರ ಪ್ರದೇಶದ 12 ಜಿಲ್ಲೆಗಳ ಒಟ್ಟು 61 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 27 ರಂದು ಐದನೇ ಹಂತದ ಏಳು ಹಂತಗಳ ಚುನಾವಣೆ ನಡೆಯಲಿದೆ.

ಏತನ್ಮಧ್ಯೆ, ಯುಪಿ ವಿಧಾನಸಭಾ ಚುನಾವಣೆ 2022 ರ ನಾಲ್ಕನೇ ಹಂತದ ಮತದಾನವು 59 ಕ್ಷೇತ್ರಗಳಲ್ಲಿ ನಡೆಯುತ್ತಿದೆ. ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಬೆಳಗ್ಗೆ 11 ಗಂಟೆಯವರೆಗೆ ಶೇ.22.62ರಷ್ಟು ಮತದಾನವಾಗಿದೆ.ಬಂದಾ ಜಿಲ್ಲೆಯಲ್ಲಿ ಇದುವರೆಗೆ ಶೇ.23.85ರಷ್ಟು ಮತದಾನವಾಗಿದ್ದರೆ, ಫತೇಪುರ್ ಶೇ.22.49, ಹರ್ದೋಯ್ ಶೇ.20.27, ಖೇರಿ ಶೇ.26.29, ಲಖನೌ ಶೇ.21.42, ಪಿಲಿಭಿತ್ ಶೇ.27.43, ರಾಯ್ ಬರೇಲಿ ಶೇ.21.99ರಷ್ಟು ಮತ್ತು ಉನ್ನಾವೋದಲ್ಲಿ 21.27 ಶೇ.ರಷ್ಟು ಮತದಾನವಾಗಿದೆ.ಈ ಹಂತದ ಮತದಾರರು 624 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

 

Trending News