ರಾಷ್ಟ್ರೀಯ ರಾಜಧಾನಿಯಲ್ಲಿ ಕನ್ನಡಿಗರ ಕೂಗಿಗೆ ಸಿಕ್ಕಿದ ಮನ್ನಣೆ

ದೆಹಲಿಯ ಕರ್ನಾಟಕ ಸಂಘದ ಮುಂದೆ ಇರುವ ಮೆಟ್ರೋ ನಿಲ್ದಾಣಕ್ಕೆ ಕರ್ನಾಟಕ ಮೂಲದ ಅಪ್ರತಿಮ ವಿಜ್ಞಾನಿ ಹೆಸರು.

Last Updated : Mar 31, 2018, 03:07 PM IST
ರಾಷ್ಟ್ರೀಯ ರಾಜಧಾನಿಯಲ್ಲಿ ಕನ್ನಡಿಗರ ಕೂಗಿಗೆ ಸಿಕ್ಕಿದ ಮನ್ನಣೆ title=

ನವದೆಹಲಿ: ರಾಷ್ಟ್ರೀಯ ರಾಜಧಾನಿಯಲ್ಲಿ ದೆಹಲಿ ಕರ್ನಾಟಕ ಸಂಘದ ಮುಂದೆ ಹೊಸದಾಗಿ ನಿರ್ಮಾಣವಾಗಿರುವ ಮೆಟ್ರೋ ನಿಲ್ದಾಣಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಹೆಸರು ಇಡಬೇಕೆಂಬ ಕನ್ನಡಿಗರ ಬೇಡಿಕೆಯನ್ನು ಕೇಂದ್ರ ಸರ್ಕಾರ ಪುರಸ್ಕರಿಸಿದೆ. 

ಕನ್ನಡಿಗರ ಈ ಬೇಡಿಕೆಗೆ ಮನ್ನಣೆ ನೀಡಿರುವ ಕೇಂದ್ರ ಸರ್ಕಾರ ದೆಹಲಿ ಕರ್ನಾಟಕ ಸಂಘದ ಮುಂಭಾಗದಲ್ಲಿರುವ ಮೋತಿ ಬಾಗ್ ಮೆಟ್ರೋ ನಿಲ್ದಾಣಕ್ಕೆ ಕರ್ನಾಟಕ ಮೂಲದ ಅಪ್ರತಿಮ ವಿಜ್ಞಾನಿ ಸರ್ ಎಂ. ವಿಶ್ವೇಶ್ವರಯ್ಯ ಹೆಸರನ್ನು ನಾಮಕರಣ ಮಾಡಿದೆ.

ಈ ನಿಲ್ದಾಣವು ದೆಹಲಿ ಕರ್ನಾಟಕ ಸಂಘದ ಮುಂಭಾಗವೇ ಇದ್ದುದರಿಂದ ವಿಶ್ವೇಶ್ವರಯ್ಯ ಹೆಸರಿಡಲು ದೆಹಲಿ ಕರ್ನಾಟಕ ಸಂಘ ಮತ್ತು ಕನ್ನಡಿಗರು ಮನವಿ ಮಾಡಿದ್ದರು.

Trending News