ಶಿವಸೇನೆ ಮುಖ್ಯಮಂತ್ರಿಯಾಗಲು ಫಡ್ನವೀಸ್, ಷಾ ಅಗತ್ಯವಿಲ್ಲ: ಉದ್ಧವ್ ಠಾಕ್ರೆ

ಶಿವಸೇನೆಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಬಾಲಾಸಾಹೇಬರಿಗೆ ಪ್ರತಿಜ್ಞೆ ಮಾಡಿದ್ದೇನೆ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ತಮ್ಮ ಭಾಷಣದಲ್ಲಿ ಹೇಳಿದರು.

Last Updated : Nov 8, 2019, 07:43 PM IST
ಶಿವಸೇನೆ ಮುಖ್ಯಮಂತ್ರಿಯಾಗಲು ಫಡ್ನವೀಸ್, ಷಾ ಅಗತ್ಯವಿಲ್ಲ: ಉದ್ಧವ್ ಠಾಕ್ರೆ title=
Photo Courtesy: ANI

ಮುಂಬೈ: ಶಿವಸೇನೆ ಮುಖ್ಯಮಂತ್ರಿಯಾಗಲು ನಮಗೆ ದೇವೇಂದ್ರ ಫಡ್ನವೀಸ್ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರ ಆಶೀರ್ವಾದ ಅಗತ್ಯವಿಲ್ಲ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ತಮ್ಮ ಭಾಷಣದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.

ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡಿದ ನಂತರ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, ಶಿವಸೇನೆ ಮೇಲೆ ತಪ್ಪಾಗಿ ಆರೋಪಿಸಿರುವ ಬಗ್ಗೆ ನನಗೆ ವಿಷಾದವಿದೆ ಎಂದು ಬೇಸರ ವ್ಯಕ್ತಪಡಿಸಿದರು.

"ಸ್ವಲ್ಪ ಸಮಯದ ಹಿಂದೆ ನಾನು ಉಸ್ತುವಾರಿ ಸಿಎಂ ದೇವೇಂದ್ರ ಫಡ್ನವೀಸ್ ಅವರ ಪತ್ರಿಕಾಗೋಷ್ಠಿಯನ್ನು ಕೇಳಿದೆ. ಅವರು ತಮ್ಮ ಸರ್ಕಾರದ ಸಾಧನೆಗಳನ್ನು ಬಣ್ಣಿಸಿದರು. ಆದರೆ ಈ ಐದು ವರ್ಷಗಳ ಸಾಧನೆಗೆ, ಅಭಿವೃದ್ಧಿ ಕಾರ್ಯಗಳಿಗೆ ಕೇವಲ ಅವರು ಮಾತ್ರ ಕಾರಣರಲ್ಲ, ಅವರಿಗೆ ನಾವೂ ಕೂಡ ಬೆಂಬಲ ನೀಡಿದ್ದೆವು. ಆದಾಗ್ಯೂ ಶಿವಸೇನೆ ಮೇಲೆ ಸುಳ್ಳು ಆರೋಪಗಳನ್ನು ಮಾಡಲಾಗಿದೆ. ಈ ಬಗ್ಗೆ ನನಗೆ ಬೇಸರವಿದೆ ಎಂದು ಠಾಕ್ರೆ ತಿಳಿಸಿದರು. 

ಲೋಕಸಭಾ ಚುನಾವಣೆ ಸಮಯದಲ್ಲಿ ನಾನು ದೆಹಲಿಗೆ ಹೋಗಿರಲಿಲ್ಲ. ಅಮಿತ್ ಶಾ ಮತ್ತು ಫಡ್ನವಿಸ್ ಅವರೇ ನನ್ನ ಭೇಟಿಗೆ ಬಂದಿದ್ದರು. ಆಗ ಉಪಮುಖ್ಯಮಂತ್ರಿ ಹುದ್ದೆ ಬಗ್ಗೆ ಚರ್ಚೆ ನಡೆದಿತ್ತು. ಆಗ ನಾನು ಉಪಮುಖ್ಯಮಂತ್ರಿ ಪದವಿ ಪಡೆಯಲು ಅಸಹಾಯಕನಲ್ಲ ಎಂದು ಪ್ರತಿಕ್ರಿಯಿಸಿದ್ದೆ ಎಂದು ಉದ್ಧವ್ ಠಾಕ್ರೆ ಚುನಾವಣೆಗೂ ಮೊದಲು ಬಿಜೆಪಿ-ಶಿವಸೇನೆ ನಡುವಿನ ಮಾತುಕತೆಯನ್ನು ಉಲ್ಲೇಖಿಸಿದರು.

"ಶಿವಸೇನೆಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಬಾಲಾಸಾಹೇಬರಿಗೆ ನಾನು ಪ್ರತಿಜ್ಞೆ ಮಾಡಿದ್ದೇನೆ. ಶಿವಸೇನೆಯವರು ಮುಖ್ಯಮಂತ್ರಿಯಾಗಲು ನನಗೆ ಫಡ್ನವೀಸ್ ಮತ್ತು ಅಮಿತ್ ಷಾ ಅವರ ಆಶೀರ್ವಾದದ ಅಗತ್ಯವಿಲ್ಲ. ಅವರ ಸುಳ್ಳಿನ ಪ್ರಮಾಣಪತ್ರ ನನಗೆ ಅಗತ್ಯವಿಲ್ಲ" ಎಂದು ಠಾಕ್ರೆ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

"ಚುನಾವಣೆಗೂ ಮೊದಲು ಉಭಯ ಪಕ್ಷಗಳ ನಡುವೆ ಸ್ಥಾನ ಹಂಚಿಕೆ ಮಾತುಕತೆ ನಡೆಯುವ ವೇಳೆ ಮುಖ್ಯಮಂತ್ರಿ ಪದವಿ ಬಗ್ಗೆಯೂ ಅದರಲ್ಲಿಯೇ ಸೇರಿತ್ತು. ಬಿಜೆಪಿಯವರು ಸಿಹಿ-ಸಿಹಿ ಮಾತನಾಡುವ ಮೂಲಕ ನಮ್ಮನ್ನು ಮುಗಿಸಲು ಬಯಸಿದ್ದರು. ಆದರೆ ನಾವು ಅವರ ಆ ಮಾರ್ಗವನ್ನು ಮುಚ್ಚಿದ್ದೇವೆ. ಹೌದು, ನಾನು ಬಿಜೆಪಿಯೊಂದಿಗೆ ಮಾತುಕತೆ ನಿಲ್ಲಿಸಿದ್ದೇನೆ. ಏಕೆಂದರೆ ಫಡ್ನವೀಸ್ ಅವರು ಫಲಿತಾಂಶ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡುವಾಗ ಅವರು ನೀಡಿರುವ ಹೇಳಿಕೆ ನನಗೆ ಬೇಸರ ತಂದಿದೆ. 2014 ರಲ್ಲಿ ಕೇಂದ್ರವು ನಮಗೆ ಭಾರೀ ಕೈಗಾರಿಕಾ ಸಚಿವರ ಹುದ್ದೆ ನೀಡಿತು. ಅದೇ 2019 ರಲ್ಲಿ ಏನು ನೀಡಿದ್ದಾರೆ. ಅಮಿತ್ ಭಾಯ್ ಎಲ್ಲಿದ್ದರು. ನಾನು ಬಿಜೆಪಿಯ ಶತ್ರು ಅಲ್ಲ. ಆದರೆ ಸುಳ್ಳು ಹೇಳಬೇಡಿ ಎಂದ ಠಾಕ್ರೆ, ನೋಟು ರದ್ಧತಿ, ಅಚ್ಚೇ ದಿನ್ ಎಂದು ಹೇಳುತ್ತಾ ಸುಳ್ಳು ಹೇಳುತ್ತಿರುವವರು ಯಾರು?" ಎಂದು ಪ್ರಶ್ನಿಸಿದರು.

ಫಡ್ನವೀಸ್ ಅವರ ವಾಕ್ಚಾತುರ್ಯದ ಆರೋಪಕ್ಕೆ ಪ್ರತಿಕ್ರಿಯಿಸಿದ ಠಾಕ್ರೆ, "ನಾನು ಮೋದಿ ಜಿ ಬಗ್ಗೆ ಯಾವುದೇ ಟೀಕಾ ಪ್ರಹಾರ ನಡೆಸಿಲ್ಲ. ಮೋದಿ ಜಿ ನನ್ನನ್ನು ಎರಡು ಬಾರಿ ಅವರ ಕಿರಿಯ ಸಹೋದರ ಎಂದು ಸಂಬೋಧಿಸಿದ್ದರು. ಲೋಕಸಭಾ ಫಲಿತಾಂಶವನ್ನು ನೋಡಿದರೆ ನಮ್ಮ ಪಕ್ಷ ಅಧಿಕ ಸ್ಥಾನ ಗೆಲ್ಲಲು ಸ್ಟ್ರೈಕ್ ರೇಟ್ ಹೆಚ್ಚು ಎಂದು ಫಡ್ನವೀಸ್ ಹೇಳುತ್ತಾರೆ. ಆದ್ದರಿಂದ ಆ ಅರ್ಥದಲ್ಲಿ ವಿಧಾನಸಭೆಗೆ 220 ಸ್ಥಾನಗಳು ಸಿಗಬೇಕಿತ್ತು. ಆದರೆ ಅದು ಆಗಲಿಲ್ಲ ಎಂದು ಲೇವಡಿ ಮಾಡಿದರು. 

ಇದೇ ಸಂದರ್ಭದಲ್ಲಿ "ನನಗೆ ಸಂಘದ ಬಗ್ಗೆ ಗೌರವವಿದೆ ಎಂದು ಸ್ಪಷ್ಟಪಡಿಸಿದ ಉದ್ಧವ್ ಠಾಕ್ರೆ, ಹಿಂದುತ್ವವು ಸಂಘಟನೆಯಾಗಿದೆ. ಯಾರ ಹಿಂದುತ್ವವನ್ನು ತಪ್ಪಾಗಿ ಮಾತನಾಡಬೇಕೆಂದು ಸಂಘವು ನಿರ್ಧರಿಸಬೇಕು. ನಮ್ಮ ಸರ್ಕಾರ ಬರುತ್ತದೆ ಎಂದು ಸಿಎಂ ಫಡ್ನವೀಸ್ ಹೇಳುತ್ತಾರೆ. ನಾನು ಅವರೊಂದಿಗೆ ಮಾತನಾಡಬೇಕು ಎಂದು ಭಾವಿಸುತ್ತಾರೆ. ಆದರೆ, ನಾವು ಸುಳ್ಳುಗಾರರೊಂದಿಗೆ ಮಾತನಾಡುವುದಿಲ್ಲವಾದ್ದರಿಂದ ಅವರೊಂದಿಗೆ ಮಾತುಕತೆ ಸಾಧ್ಯವಿಲ್ಲ. ಮಹಾರಾಷ್ಟ್ರದ ಜನರು ಠಾಕ್ರೆ ಕುಟುಂಬ ಮತ್ತು ಶಿವಸೇನೆಯನ್ನು ನಂಬುತ್ತಾರೆ. ಅಮಿತ್ ಶಾ ಮತ್ತು ಅವರ ಪಕ್ಷದ ಮೇಲೆ ಅವರಿಗೆ ಹೆಚ್ಚು ಅಪನಂಬಿಕೆ ಇದೆ. ಯಾವುದೇ ಕ್ರೆಡಿಟ್ ಇಲ್ಲ. ರಾಮ್ ದೇವಾಲಯದ ನಿರ್ಧಾರಕ್ಕೆ ಯಾವುದೇ ಕ್ರೆಡಿಟ್ ತೆಗೆದುಕೊಳ್ಳಬೇಡಿ. ಈ ನಿರ್ಧಾರವು ನ್ಯಾಯಾಲಯದ ಪ್ರಕರಣವಾಗಿದೆ, ಪಕ್ಷದ್ದಲ್ಲ" ಎಂದರು.
 

Trending News