Uniform Civil Code: ಏಕರೂಪ ನಾಗರಿಕ ಸಂಹಿತೆಯನ್ನು ಜನತೆಯ ಮೇಲೆ ಹೇರಲು ಆಗಲ್ಲ... ಒಂದು ವೇಳೆ...!

UCC: ಏಕರೂಪ ನಾಗರಿಕ ಸಂಹಿತೆ ಒಂದು ಸಾಧಾರಣ ಪ್ರಕ್ರಿಯೆ ಇರುವಂತೆ ಬಿಂಬಿಸಲು ಪ್ರಧಾನಿ ಮೋದಿ ಯತ್ನಿಸುತ್ತಿದ್ದಾರೆ. ಹೀಗಾಗಿ ಅವರು ಈ ಹಿಂದಿನ ಕಾನೂನು ಆಯೋಗದ ವರದಿಯನ್ನೊಮ್ಮೆ ಓದಬೇಕು, ಏಕೆಂದರೆ ಅದು ಈ ಸಮಯದಲ್ಲಿ ಪ್ರಸ್ತುತವಲ್ಲ' ಎಂದು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಪಿ. ಚಿದಂಬರಂ ಹೇಳಿದ್ದಾರೆ.   

Written by - Nitin Tabib | Last Updated : Jun 28, 2023, 05:16 PM IST
  • ಕೇಂದ್ರದ ಮಾಜಿ ಸಚಿವ, ''ಬಿಜೆಪಿಯವರ ಮಾತು ಮತ್ತು ನಡೆಗಳಿಂದ ಇಂದು ದೇಶ ಇಬ್ಭಾಗವಾಗಿದೆ.
  • ಇಂತಹ ಪರಿಸ್ಥಿತಿಯಲ್ಲಿ, ಜನರ ಮೇಲೆ ಹೇರಿದ ಯುಸಿಸಿ ವಿಭಜನೆಯನ್ನು ಮತ್ತಷ್ಟು ಹೆಚ್ಚಿಸಲಿದೆ,
  • "ಅಜೆಂಡಾ ಆಧಾರಿತ ಬಹುಮತದ ಸರ್ಕಾರವು ಅದನ್ನು ಜನರ ಮೇಲೆ ಹೇರಲು ಸಾಧ್ಯವಿಲ್ಲ" ಎಂದು ಅವರು ಹೇಳಿದ್ದಾರೆ.
Uniform Civil Code: ಏಕರೂಪ ನಾಗರಿಕ ಸಂಹಿತೆಯನ್ನು ಜನತೆಯ ಮೇಲೆ ಹೇರಲು ಆಗಲ್ಲ... ಒಂದು ವೇಳೆ...! title=

Uniform Civil Code: ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬಲವಾದ ಪ್ರತಿಪಾದನೆಯ ಒಂದು ದಿನದ ನಂತರ, ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರು "ಅಜೆಂಡಾ-ಚಾಲಿತ ಬಹುಮತದ ಸರ್ಕಾರ" ಅದನ್ನು ಜನರ ಮೇಲೆ ಹೇರಲು ಸಾಧ್ಯವಿಲ್ಲ ಏಕೆಂದರೆ ಅದು ಜನರ ನಡುವೆ "ವಿಭಜನೆ" ಗೆ ಕಾರಣವಾಗಲಿದೆ ಎಂದು ಹೇಳಿದ್ದಾರೆ.

ನಿರುದ್ಯೋಗ, ಬೆಲೆ ಏರಿಕೆ ಮತ್ತು ದ್ವೇಷದ ಅಪರಾಧಗಳಂತಹ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಏಕರೂಪ ನಾಗರಿಕ ಸಂಹಿತೆಯನ್ನು ಪ್ರಧಾನಿ ಪ್ರತಿಪಾದಿಸುತ್ತಿದ್ದಾರೆ ಎಂದು ಮಾಜಿ ಕೇಂದ್ರ ಸಚಿವರು ಹೇಳಿದ್ದಾರೆ. ಸಮಾಜವನ್ನು ಧ್ರುವೀಕರಣಗೊಳಿಸಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಏಕರೂಪ ನಾಗರಿಕ ಸಂಹಿತೆಯನ್ನು ಬಳಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

'ಕಾನೂನು ಆಯೋಗದ ವರದಿಯನ್ನು ಪ್ರಧಾನಿ ಓದಬೇಕು'
ಈ ಕುರಿತು ಟ್ವೀಟ್ ಮಾಡಿರುವ ಅವರು ತಮ್ಮ ಟ್ವೀಟ್ ನಲ್ಲಿ, 'ಪ್ರಧಾನಿ ಯುಸಿಸಿ ಒಂದು ಸರಳ ಪ್ರಕ್ರಿಯೆ ಎಂದು ತೋರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅವರು ಈ ಹಿಂದಿನ ಕಾನೂನು ಆಯೋಗದ ವರದಿಯನ್ನು ಒಮ್ಮೆ ಓದಬೇಕು. ಏಕೆಂದರೆ ಯುಸಿಸಿ ಅದು ಈ ಸಮಯದಲ್ಲಿ ಪ್ರಸ್ತುತವಲ್ಲ ಎಂದು ಅವರು ಹೇಳಿದ್ದಾರೆ.

ಕೇಂದ್ರದ ಮಾಜಿ ಸಚಿವ, ''ಬಿಜೆಪಿಯವರ ಮಾತು ಮತ್ತು ನಡೆಗಳಿಂದ ಇಂದು ದೇಶ ಇಬ್ಭಾಗವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಜನರ ಮೇಲೆ ಹೇರಿದ ಯುಸಿಸಿ ವಿಭಜನೆಯನ್ನು ಮತ್ತಷ್ಟು ಹೆಚ್ಚಿಸಲಿದೆ, "ಅಜೆಂಡಾ ಆಧಾರಿತ ಬಹುಮತದ ಸರ್ಕಾರವು ಅದನ್ನು ಜನರ ಮೇಲೆ ಹೇರಲು ಸಾಧ್ಯವಿಲ್ಲ" ಎಂದು ಅವರು ಹೇಳಿದ್ದಾರೆ.

'ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನ'
ಯುಸಿಸಿ ಕುರಿತು ಪ್ರಧಾನಿ ಮೋದಿ ಅವರ ಬಲವಾದ ಪ್ರತಿಪಾದನೆ ಬೆಲೆ ಏರಿಕೆ, ನಿರುದ್ಯೋಗ, ದ್ವೇಷದ ಅಪರಾಧಗಳು, ತಾರತಮ್ಯ ಮುಂತಾದ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ . ಈ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದ್ದಾರೆ.

ಉತ್ತಮ ಆಡಳಿತದಲ್ಲಿ ವಿಫಲವಾಗಿರುವ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಮತದಾರರನ್ನು ಧ್ರುವೀಕರಣಗೊಳಿಸಲು ಯುಸಿಸಿಯನ್ನು ಬಳಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಆರೋಪಿಸಿದ್ದಾರೆ. ಯುಸಿಸಿಯನ್ನು ಪ್ರತಿಪಾದಿಸುವಾಗ ಪ್ರಧಾನಿಯವರು ದೇಶವನ್ನು ಕುಟುಂಬದೊಂದಿಗೆ ಹೋಲಿಸಿದ್ದಾರೆ. ದೃಷ್ಟಿಗೋಚರಕ್ಕೆ ಅವರ ಹೋಲಿಕೆ ಸರಿಯಾಗಿ ಕಾಣಿಸಬಹುದು, ಆದರೆ ವಾಸ್ತವವು ವಿಭಿನ್ನವಾಗಿದೆ. ಕುಟುಂಬದ ರಚನೆಯು ರಕ್ತ ಸಂಬಂಧಗಳಿಂದ ಮಾಡಲ್ಪಟ್ಟಿರುತ್ತವೆ. ಒಂದು ರಾಷ್ಟ್ರವನ್ನು ಸಂವಿಧಾನಕ್ಕೆ ಜೋಡಿಸಲಾಗಿದೆ, ಅದು ರಾಜಕೀಯ-ಕಾನೂನು ದಾಖಲೆಯಾಗಿದೆ ಎಂದು ಅವರು ಹೇಳಿದ್ದಾರೆ.

ಚಿದಂಬರಂ, 'ಕುಟುಂಬದಲ್ಲಿಯೂ ವೈವಿಧ್ಯಗಳಿವೆ. ಭಾರತದ ಸಂವಿಧಾನವು ಭಾರತದ ಜನರಲ್ಲಿ ವೈವಿಧ್ಯತೆ ಮತ್ತು ಬಹುತ್ವವನ್ನು ಗುರುತಿಸುತ್ತದೆ.

ಇದನ್ನೂ ಓದಿ-Stock Market Update: ಹೊಸ ಇತಿಹಾಸ ಬರೆದ ಷೇರು ಮಾರುಕಟ್ಟೆ, 19000 ಅಂಕಗಳ ಗಡಿ ದಾಟಿದ ನಿಫ್ಟಿ

ಯುಸಿಸಿ ಬಿಜೆಪಿಯ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ
ಗಮನಾರ್ಹವಾಗಿ, ಏಕರೂಪ ನಾಗರಿಕ ಸಂಹಿತೆಯು ಬಿಜೆಪಿಯ ಮೂರು ಪ್ರಮುಖ ಚುನಾವಣಾ ವಿಷಯಗಳಲ್ಲಿ ಒಂದಾಗಿದೆ, ಇನ್ನೊಂದು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ 370 ನೇ ವಿಧಿಯನ್ನು ರದ್ದುಗೊಳಿಸುವುದು ಮತ್ತು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ.

ಇದನ್ನೂ ಓದಿ-Mumbai Sea Link ಗೆ ಸಾವರ್ಕರ್ ಹೆಸರು, ಎಂಟಿಹೆಚ್ಎಲ್ ಹೆಸರೂ ಬದಲಾಗಲಿದೆ ಎಂದ ಶಿಂಧೆ ಸರ್ಕಾರ

ಕಾನೂನು ಆಯೋಗವು ಜೂನ್ 14 ರಂದು ಯುಸಿಸಿಯಲ್ಲಿ ಹೊಸ ಸಮಾಲೋಚನೆ ಪ್ರಕ್ರಿಯೆಯನ್ನು ಆರಂಭಿಸಿದೆ ಮತ್ತು ರಾಜಕೀಯವಾಗಿ ಸೂಕ್ಷ್ಮ ವಿಷಯದ ಕುರಿತು ಸಾರ್ವಜನಿಕರು ಮತ್ತು ಮಾನ್ಯತೆ ಪಡೆದ ಧಾರ್ಮಿಕ ಸಂಸ್ಥೆಗಳು ಸೇರಿದಂತೆ ಮಧ್ಯಸ್ಥಗಾರರ ಅಭಿಪ್ರಾಯಗಳನ್ನು ಕೋರಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News