Chakraborty Sulibele : ಅವಿದ್ಯಾವಂತರು ಹೆಚ್ಚಾಗಿ ಕಾಂಗ್ರೆಸ್‌ ಗೆ ಮತ ಹಾಕಿದ್ದಾರೆ - ಚಕ್ರವರ್ತಿ ಸೂಲಿಬೆಲೆ !

Sulibele tweet On Congress Exit Poll:  ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆಯು ಮುಗಿದು ಇನ್ನು ಫಲಿತಾಂಶ ಒಂದೇ ಬಾಕಿ ಇದೆ. ಇದರ ನಡುವೆ ಚಕ್ರವರ್ತಿ ಸೂಲಿಬೆಲೆ ಮಾಡಿರುವ  ಟ್ವೀಟ್‌ ಇದೀಗ ಎಲ್ಲರ ಅಕ್ರೋಶಕ್ಕೂ ಕಾರಣವಾಗಿದೆ. 

Written by - Zee Kannada News Desk | Last Updated : May 12, 2023, 12:19 PM IST
  • ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆಯು ಮುಗಿದಿದೆ.. ಇನ್ನು ಫಲಿತಾಂಶ ಒಂದೇ ಬಾಕಿ
  • ಚಕ್ರವರ್ತಿ ಸೂಲಿಬೆಲೆ ಮಾಡಿರುವ ಟ್ವೀಟ್‌ ಇದೀಗ ಎಲ್ಲರ ಆಕ್ರೋಶಕ್ಕೆ ಕಾರಣ
  • ಚುನಾವಣೆ ಬಳಿಕ ಚುನಾವಣೋತ್ತರ ಸಮೀಕ್ಷೆ ಬಗ್ಗೆ ಎಲ್ಲೆಡೆ ಚರ್ಚೆ
Chakraborty Sulibele : ಅವಿದ್ಯಾವಂತರು ಹೆಚ್ಚಾಗಿ ಕಾಂಗ್ರೆಸ್‌ ಗೆ ಮತ ಹಾಕಿದ್ದಾರೆ - ಚಕ್ರವರ್ತಿ ಸೂಲಿಬೆಲೆ ! title=

ಬೆಂಗಳೂರು: ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆಯು ಮುಗಿದಿದೆ.. ಇನ್ನು ಫಲಿತಾಂಶ ಒಂದೇ ಬಾಕಿ ಇದೆ. ಹೀಗಿರುವಾಗ ನಾನ ರೀತಿಯಲ್ಲಿ ಮತದಾನೋತ್ತರ ಸಮೀಕ್ಷೆ ಹೊರ ಬಂದಿವೆ. ಇದರ ನಡುವೆ ಚಕ್ರವರ್ತಿ ಸೂಲಿಬೆಲೆ  ಮಾಡಿರುವ  ಟ್ವೀಟ್‌ ಇದೀಗ ಎಲ್ಲರ ಆಕ್ರೋಶಕ್ಕೂ ಕಾರಣವಾಗಿದೆ.

 ಚುನಾವಣೆ ಫಲಿತಾಂಶಕ್ಕೆ ಇನ್ನು ಒಂದು ದಿನಗಳಷ್ಟೇ ಬಾಕಿ ಆಗಾಗಲೇ ರಾಜ್ಯಾದಾಂತ ಬಹುಮತ ಕುರಿತು ಒಂದಿಷ್ಟು ಅಭಿಪ್ರಯಾಗಳು ಹೊರ ಬರುತ್ತಿವೆ. ಈ ಹಿನ್ನಲೆ ಚಕ್ರವರ್ತಿ ಸೂಲಿಬೆಲೆ ಅವಿದ್ಯಾವಂತರು ಹೆಚ್ಚಾಗಿ ಕಾಂಗ್ರೆಸ್‌ ಗೆ ಮತ ಹಾಕಿದ್ದಾರೆ ಎಂದು ತಮ್ಮ ಟ್ವೀಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ..

ಇದನ್ನೂ ಓದಿ: ಬೆಂಗಳೂರು ಕ್ಷೇತ್ರಗಳ ಮತಯಂತ್ರಗಳಿಗೆ ಪೊಲೀಸ್ ಭದ್ರತೆ

ಮತದಾನ ಎನ್ನುವುದು ಪ್ರತಿಯೊಬ್ಬರ ಹಕ್ಕಾಗಿದೆ. ಅದನ್ನು ಯಾರು ನಿರ್ಧರಿಸುವಂತಿಲ್ಲ. ಗ್ರಾಮ ಪಂಚಾಯಿತ್‌ ಎಲೆಕ್ಷನ್‌ಲ್ಲಿ ಅಣ್ಣ ತಮ್ಮ ಇಬ್ಬರು ಪರ ವಿರೋಧ ಸ್ಪರ್ದೀಸಿದ್ದರೇ, ತಮ್ಮ ಮತ ಯಾರಿಗಾದರೂ ಒಬ್ಬರಿಗೆ ಹಾಕಬಹದು. ಅದು ಹಕ್ಕು ಕರ್ತವ್ಯದ ಜೊತೆ ಅಭಿವ್ಯಕ್ತಿ  ಸ್ವಾತಂತ್ರ ಕೂಡ ಆಗಿದೆ. ಹೀಗಿರುವಾಗ ಮತದಾರನ್ನು ಅವಿದ್ಯಾವಂತರಿಗೆ ಹೋಲಿಸುವುದು ತಪ್ಪೆಂದು ಜನ ಅಕ್ರೋಶ ಹೊರ ಹಾಕಿದ್ದಾರೆ. 

ಚುನಾವಣೋತ್ತರ ಸಮೀಕ್ಷೆ ನಡೆಸಿದ್ದು ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ. ಕಾಂಗ್ರೆಸ್ 122 ರಿಂದ 140 ಸ್ಥಾನಗಳಲ್ಲಿ ಪಡೆಯಲಿದ್ದು, ಬಿಜೆಪಿ 62-80 ಸೀಟುಗಳನ್ನು ಪಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ. ಅದರ ಜೊತೆಯಲ್ಲಿ  ಮತದಾರರ ಶೈಕ್ಷಣಿಕ ಅರ್ಹತೆ ಬಗ್ಗೆಯೂ ಸಮೀಕ್ಷೆಯಲ್ಲಿ ವಿವರ ನೀಡಿದೆ.

ಇದನ್ನೂ ಓದಿ:  ಎರಡು ಬಸ್ಸುಗಳ ನಡುವೆ ಪರಸ್ಪರ ಡಿಕ್ಕಿ 20ಕ್ಕೂ ಹೆಚ್ಚು ಜನರು ಗಂಭೀರ!

ಚಕ್ರವರ್ತಿ ಸೂಲಿಬೆಲೆ ಟ್ವೀಟ್‌ ಕುರಿತಂತೆ ಪ್ರತಿಕ್ರಿಯೆ ಹರಿದು ಬರುತ್ತಿದೆ. ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರವಿದೆ. ಅವಿಧ್ಯಾವಂತರಿಗೂ ಮತದಾನದ ಹಕ್ಕು ಇದೆ. ಹಾಗೆಯೇ ಅವಿದ್ಯಾವಂತರಿಂದ ಪ್ರಜಾಪ್ರಭುತ್ವ ಉಳಿದಿದೆ. ಆದರೆ ನಿಮ್ಮಂತಹ ವಿದ್ಯಾವಂತರಿಂದ ದೇಶ ಹಾಳಾಗುತ್ತಿದೆ. ವಿದ್ಯಾವಂತರು ಇರುವ ನಾಡಿನಲ್ಲಿ ಎನ್‌ ಅಭಿವೃದ್ಧಿ ಮಾಡಿದ್ದೀರಾ ಎಂದು ನಾನ ರೀತಿಯಲ್ಲಿ ಅಕ್ರೋಶ ಹೊರ ಹಾಕುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News