ನಿಗದಿತ ಅವಧಿಯಲ್ಲಿ ಪ್ಲ್ಯಾಟ್ ನಿರ್ಮಿಸಿ ಕೊಡದ್ದರಿಂದ ಕರಾರಿನಂತೆ ತಿಂಗಳಿಗೆ 10 ಸಾವಿರ ರೂ. ಬಾಡಿಗೆ ಕೊಡಲು ಆದೇಶ

ಧಾರವಾಡದ ಸಂಜೀವ ದೇಸಾಯಿ ಎಂಬುವವರು ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದು, 2017 ರಲ್ಲಿ ಎದುರುದಾರರಾದ ಸ್ಕೈಟೌನ್ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಇವರ ಬಳಿ ಪೂರ್ತಿ ಹಣ ಪಾವತಿಸಿ ಪ್ಲಾಟ್‍ನ್ನು ಖರೀದಿಸಿದ್ದರು. ಖರೀದಿ ಕರಾರಿನಂತೆ 24 ತಿಂಗಳ ಒಳಗಾಗಿ ಮನೆಯನ್ನು ಪೂರ್ಣಗೊಳಿಸಿ ಕೊಡಬೇಕು, ತಪ್ಪಿದ್ದಲ್ಲಿ ಪ್ರತಿ ತಿಂಗಳು ರೂ.10 ಸಾವಿರ ಮನೆ ಬಾಡಿಗೆ ಅಂತ ಪೂರ್ತಿ ಮನೆ ಕಟ್ಟುವವರೆಗೂ ಎದುರುದಾರರು ದೂರುದಾರರಿಗೆ ಕೊಡುವ ಒಪ್ಪಂದವಾಗಿತ್ತು.

Written by - Manjunath N | Last Updated : Dec 22, 2023, 11:38 PM IST
  • ನವೆಂಬರ್-2019 ರಿಂದ ಇಲ್ಲಿಯವರೆಗೆ ಮನೆಯನ್ನು ಕಟ್ಟಿಕೊಡದೇ ಮತ್ತು ಪ್ರತಿ ತಿಂಗಳ ರೂ.10 ಸಾವಿರ ಬಾಡಿಗೆ ಹಣವನ್ನು ಕೊಡದೇ ಸತಾಯಿಸುತ್ತಿದ್ದರು.
  • ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ ದಿ.02/11/2023 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ನಿಗದಿತ ಅವಧಿಯಲ್ಲಿ ಪ್ಲ್ಯಾಟ್ ನಿರ್ಮಿಸಿ ಕೊಡದ್ದರಿಂದ ಕರಾರಿನಂತೆ ತಿಂಗಳಿಗೆ 10 ಸಾವಿರ ರೂ. ಬಾಡಿಗೆ ಕೊಡಲು ಆದೇಶ title=
ಸಾಂಧರ್ಭಿಕ ಚಿತ್ರ

ಧಾರವಾಡ : ಧಾರವಾಡದ ಸಂಜೀವ ದೇಸಾಯಿ ಎಂಬುವವರು ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದು, 2017 ರಲ್ಲಿ ಎದುರುದಾರರಾದ ಸ್ಕೈಟೌನ್ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಇವರ ಬಳಿ ಪೂರ್ತಿ ಹಣ ಪಾವತಿಸಿ ಪ್ಲಾಟ್‍ನ್ನು ಖರೀದಿಸಿದ್ದರು. ಖರೀದಿ ಕರಾರಿನಂತೆ 24 ತಿಂಗಳ ಒಳಗಾಗಿ ಮನೆಯನ್ನು ಪೂರ್ಣಗೊಳಿಸಿ ಕೊಡಬೇಕು, ತಪ್ಪಿದ್ದಲ್ಲಿ ಪ್ರತಿ ತಿಂಗಳು ರೂ.10 ಸಾವಿರ ಮನೆ ಬಾಡಿಗೆ ಅಂತ ಪೂರ್ತಿ ಮನೆ ಕಟ್ಟುವವರೆಗೂ ಎದುರುದಾರರು ದೂರುದಾರರಿಗೆ ಕೊಡುವ ಒಪ್ಪಂದವಾಗಿತ್ತು.

ದೂರುದಾರರು ಕರಾರಿನಂತೆ ಹಣ ಪಾವತಿಸಿದರೂ ಎದುರುದಾರರು ನವೆಂಬರ್-2019 ರಿಂದ ಇಲ್ಲಿಯವರೆಗೆ ಮನೆಯನ್ನು ಕಟ್ಟಿಕೊಡದೇ ಮತ್ತು ಪ್ರತಿ ತಿಂಗಳ ರೂ.10 ಸಾವಿರ ಬಾಡಿಗೆ ಹಣವನ್ನು ಕೊಡದೇ ಸತಾಯಿಸುತ್ತಿದ್ದರು. ಸ್ಕೈಟೌನ್ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಇಂತಹ ನಡಾವಳಿಕೆ ಗ್ರಾಹಕರ ಸಂರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತ ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ ದಿ.02/11/2023 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಇದನ್ನೂ ಓದಿ: C Voter Survey: ಖರ್ಗೆ, ರಾಹುಲ್, ನಿತೀಶ್, ಕೇಜ್ರಿವಾಲ್... I.N.D.I.A. ಮೈತ್ರಿಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ಯಾರಾಗಬೇಕು?

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ.ಭೂತೆ, ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಸದಸ್ಯರುಗಳಾದ ಪ್ರಭು ಸಿ. ಹಿರೇಮಠ ಅವರು 2017 ರಲ್ಲಿ ದೂರುದಾರರು ಕರಾರಿನಂತೆ ಹಣ ಸಂದಾಯ ಮಾಡಿದ್ದರೂ ನಿಗದಿತ 24 ತಿಂಗಳಲ್ಲಿ ಎದುರುದಾರ ಸ್ಕೈಟೌನ್ ಬಿಲ್ಡರ್ಸ್‍ರವರು ಪ್ಲ್ಯಾಟ ನಿರ್ಮಿಸಿ ದೂರುದಾರರಿಗೆ ಕೊಡದೇ ಇರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ನಿಗದಿತ ಅವದಿಯಲ್ಲಿ ಪ್ಲ್ಯಾಟ್ ನಿರ್ಮಿಸಿ ಕೊಡದ್ದರಿಂದ ಒಪ್ಪಂದದಂತೆ ಪ್ರತಿ ತಿಂಗಳಿಗೆ ರೂ.10 ಸಾವಿರ ಬಾಡಿಗೆಯನ್ನು ದೂರುದಾರರಿಗೆ ಕೊಡಬೇಕು. ದಿ:01/11/2019 ರಿಂದ 01/11/2023 ರವರೆಗೆ ಬಾಡಿಗೆ ಹಣ ಒಟ್ಟು ರೂ.4,90,000/- ಗಳನ್ನು ದೂರುದಾರರಿಗೆ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಕೊಡುವಂತೆ ಎದುರುದಾರ ಸ್ಕೈಟೌನ್ ಬಿಲ್ಡರ್ಸ್‍ಗೆ ಆದೇಶಿಸಿದೆ.

ಇದನ್ನೂ ಓದಿ:  ಪ್ರಶ್ನೆ ಕೇಳಿದ್ದಕ್ಕೆ ಸಂಸದರ ಅಮಾನತು, ಕಾಂಗೇಶ್ ಪ್ರತಿಭಟನೆ

ಪ್ಲ್ಯಾಟ ನಿರ್ಮಿಸಿ ಕೊಡುವುವವರೆಗೂ ತಿಂಗಳಿಗೆ ರೂ.10 ಸಾವಿರದಂತೆ ಬಾಡಿಗೆ ಕೊಡುತ್ತಾ ಹೋಗುವಂತೆ ಮತ್ತು ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗಾಗಿ ರೂ.25,000/-ಗಳು ಮತ್ತು ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10 ಸಾವಿರಗಳನ್ನು ಎದುರುದಾರರಿಗೆ ಕೊಡಲು ಆದೇಶಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News