ಹುಬ್ಬಳ್ಳಿಯ ನವನಗರದ ಬಸವಣ್ಣೆಪ್ಪ ಗುಮಗೋಳ ಅನ್ನುವವರು 2021-2022ನೇ ಹಿಂಗಾರು ಸಾಲಿನಲ್ಲಿ ತಮ್ಮ ಜಮೀನಿನಲ್ಲಿನ ಮಾವಿನ ಬೆಳೆಗೆ ಎಸ್.ಬಿ.ಆಯ್ ಜನರಲ್ ಇನ್ಸುರೆನ್ಸ್ ಕಂಪನಿಯಿಂದ ವಿಮೆ ಮಾಡಿಸಿದ್ದರು. ವಿಮೆಗೆ ತಗಲುವ ವಿಮಾಕಂತಿನ ಹಣ ರೂ.10,116.80 ಪೈಸೆ ಗಳನ್ನು ವಿಮಾ ಕಂಪನಿಯ ಅಧಿಕೃತ ಏಜಂಟರಾದ ನವನಗರದ ಹುಬ್ಬಳ್ಳಿಯ ಜೀವನ ಆಧಾರ ಸಹಾಯವಾಣಿ ಕೇಂದ್ರದ ಮೂಲಕ ಭರಿಸಿದ್ದರು.
ಹುಬ್ಬಳ್ಳಿಯ ಜೆ.ಪಿ.ನಗರ, ಗೋಕುಲ ರಸ್ತೆ ನಿವಾಸಿ ವಿನಯ ಹಂಜಿಎಂಬುವವರುತಮ್ಮ ಪತ್ನಿ ಶ್ರೀಮತಿ. ರೇಖಾಳ ಹೆರಿಗೆಗಾಗಿ ದಿ:10/12/2019ರಂದು ಎದುರುದಾರ ಹುಬ್ಬಳ್ಳಿಯ ಜನತಾ ಬಜಾರ ಹತ್ತಿರದ ಸಿಟಿ ಕ್ಲಿನಿಕ್ ಮಲ್ಟಿ ಸ್ಪೆಶಾಲಿಟಿಆಸ್ಪತ್ರೆಗೆ ದಾಖಲಿಸಿದ್ದರು.
ಧಾರವಾಡದ ಮಹೇಂದ್ರಕರ ಚಾಳ ನಿವಾಸಿ ಕಾರ್ತಿಕ ಎಲಿಗಾರ ಎಂಬುವವರು ಕಾಲೇಜ ವಿದ್ಯಾರ್ಥಿಯಾಗಿದ್ದು ಗಿಟಾರ್ ವಾದ್ಯ ಕಲಿಯುತ್ತಿದ್ದರು. ಅವರು ತಮ್ಮ ವಿದ್ಯಾಭ್ಯಾಸ ಮತ್ತು ಗಿಟಾರ ಕಲಿಯಲು ಸಹಾಯವಾಗಲೆಂದು ಆನ್ಲೈನ್ ಮೂಲಕ ಪ್ಲಿಪ್ಕಾರ್ಟ್ನಿಂದ ದಿ:22/09/2022 ರಂದು ರೂ.54,019/- ಮೌಲ್ಯದ ಆಪಲ್ ಐಫೋನ್ ಖರೀದಿಸಿದ್ದರು.
ಗದಗ, ಶಿರಟ್ಟಿ, ಹುಬ್ಬಳ್ಳಿ, ಧಾರವಾಡ ಹಾಗೂ ಬೆಂಗಳೂರಿನ 22 ಜನದೂರುದಾರರು ಹುಬ್ಬಳ್ಳಿಯ ಆಶೀರ್ವಾದ್ ಡೆವಲ್ಪರ್ಸ್ಜತೆ ಧಾರವಾಡದ ಸತ್ತೂರಿನಲ್ಲಿ ಪ್ಲಾಟ್ ಖರೀದಿಸಲು 2012 ನೇ ಇಸ್ವಿಯಲ್ಲಿ ಒಪ್ಪಂದ ಪತ್ರ ಮಾಡಿಕೊಂಡಿದ್ದರು. ಎಲ್ಲ ದೂರುದಾರರು ಖರೀದಿ ಒಪ್ಪಂದದ ಮುಂಗಡ ಹಣವನ್ನು ಆಶೀರ್ವಾದ ಡೆವಲ್ಪರ್ಸ್ 2010 ರಿಂದ 2012 ಇಸ್ವಿವರೆಗೆ ಸಂದಾಯ ಮಾಡಿದ್ದರು.
ನವಲಗುಂದ ತಾಲ್ಲೂಕು ಮೊರಬ್ ಗ್ರಾಮದ ವಾಸಿ ಶಿಲ್ಪಾ ಹೊಳಲ್ ಅನ್ನುವವರ ಗಂಡ ಮಂಜುನಾಥ ಹೊಳಲ್ ರವರು ಹುಬ್ಬಳ್ಳಿಯ ಗೋಕುಲ್ ರಸ್ತೆಯ ಸ್ಟೇಟ್ ಬ್ಯಾಂಕ್ನಲ್ಲಿ ರೂ.2,10,000/-ಗಳ ಗೋಲ್ಡ್ ಲೋನ್ ತೆಗೆದುಕೊಂಡಿದ್ದರು. ಅಲ್ಲದೇ ಮಂಜುನಾಥರವರು ರೂ.5,60,000/- ವೈಯಕ್ತಿಕ ಸಾಲವನ್ನು ಅದೇ ಬ್ಯಾಂಕ್ನಿಂದ ಪಡೆದಿದ್ದರು. ಸಾಲ ಕೊಟ್ಟ ಸ್ಟೇಟ್ ಬ್ಯಾಂಕ್ನವರು ಆ ಎರಡರ ವೈಯಕ್ತಿಕ ಸಾಲಗಳ ಮೇಲೆ ಎಸ್ಬಿಆಯ್ ಜನರಲ್ ಇನ್ಸುರೆನ್ಸ್ ಮಾಡಿಸಿದ್ದರು. ನಂತರ ಮಂಜುನಾಥ ರೂ.2,10,000/- ಗೋಲ್ಡ್ ಲೋನ್ ಹಣ ಬ್ಯಾಂಕಿಗೆ ಮರು ಪಾವತಿಸಿದ್ದರು. ಈ ಮಧ್ಯದಲ್ಲಿ ಆತ ದಿ.28/01/2022 ರಂದು ಮಂಜುನಾಥ ಹೊಳಲ್ ನಿಧನ ಹೊಂದಿದ್ದರು.
ಹುಬ್ಬಳ್ಳಿಯ ಪೃಥ್ವಿ ಬಿಲ್ಡರ್ ಹಾಗೂ ಡೆವಲಪರ್ನ ಪಾಲುದಾರರಾದ ಶಿವನಗೌಡ ಪಾಟೀಲ ಎಂಬುವವರು ಇಟಿಗಟ್ಟಿ ಗ್ರಾಮದಲ್ಲಿ ಅಭಿವೃದ್ಧಿ ಪಡಿಸುತ್ತಿದ್ದ ಇಟಿಗಟ್ಟಿ ಲೇಔಟನಲ್ಲಿ, ಹುಬ್ಬಳ್ಳಿಯ ಅಧ್ಯಾಪಕ ನಗರ ನಿವಾಸಿ ನಾಗರತ್ನ ಮುಂಡರಗಿ ಮತ್ತು ಧಾರವಾಡದ ಸತ್ತೂರ ನಿವಾಸಿ ಮೋಹನ ಡೊಂಬರ ಎಂಬುವವರು ಸೈಟ್ ಪಡೆದುಕೊಳ್ಳಲು ಇಚ್ಚಿಸಿ ಪೃಥ್ವಿ ಡವಲಪರ್ಸ್ಜೊತೆ ಪ್ಲಾಟ ನಂ.9, 10 ಮತ್ತು 11ರ ಬಗ್ಗೆ ಮಾರಾಟದ ಒಪ್ಪಂದ ಮಾಡಿಕೊಂಡು, ಒಂದೊಂದು ಸೈಟಿಗೆ ರೂ.5,63,600/- ರೂಪಾಯಿ ಹಣ ಸಂದಾಯ ಮಾಡಿದ್ದರು.
ಹುಬ್ಬಳ್ಳಿಯ ಕೇಶ್ವಾಪುರ ನಗರದ ನೂತನ್ಜೈನ್ ಹಾಗೂ ಕಮಲೇಶ ಬಗ್ರೆಚಾ ಇಬ್ಬರೂ ದೂರುದಾರರು ಒಂದೇ ಕುಟುಂಬದವರಾಗಿದ್ದು, ಎದುರು ದಾರರಾದ ಸಿಲ್ವರ್ ಬ್ರಿಕ್ ಬಿಲ್ಡರ್ ಮತ್ತು ಡೆವಲ್ಪರ್ನ ಮಾಲೀಕ ಅವಿನಾಶ ಸವಣೂರರವರು ಹುಬ್ಬಳ್ಳಿಯ ಬೆಂಗೇರಿ ಗ್ರಾಮದಲ್ಲಿ ನಿರ್ಮಿಸುತ್ತಿದ್ದ ಲಕ್ಸೋಎನ್ಟಿಗೊ ಅಪಾರ್ಟಮೆಂಟನಲ್ಲಿ ತಲಾ ಒಂದು ಪ್ಲ್ಯಾಟ್ ಖರೀದಿಸಿದ್ದರು. ಅದಕ್ಕೆ ಇಬ್ಬರೂ ದೂರುದಾರರು ಎದುರು ದಾರರಿಗೆ ಮುಂಗಡವಾಗಿ ರೂ.28,09,000/- ಮತ್ತು ರೂ.23,79,000/- ಸಂದಾಯ ಮಾಡಿದ್ದರು.
ಹುಬ್ಬಳ್ಳಿಯ ಗೋಕುಲ್ ರಸ್ತೆಯ ವ್ಯಾಪಾರಿ ಮಹಾಂತೇಶ ಬಾಟ್ಲಿ ಎಂಬುವವರು ಪ್ರತಿಕ್ಷಾ ಇಂಜಿನಿಯರಿಂಗ್ ವಕ್ರ್ಸನ ಮಾಲೀಕರಾಗಿದ್ದಾರೆ. ಅವರು ತಮ್ಮ ಉದ್ಯೋಗಕ್ಕಾಗಿ ಎದುರುದಾರ ಸಿಎನ್ಸಿ ಮಶೀನಿನ ಉತ್ಪಾದಕರಾದ ಮಹಾರಾಷ್ಟ್ರ ಸತಾರದ ಅಭಿಜಿತ್ ಇಕ್ವಿಪ್ಮೆಂಟ್ಸ್ ಕಂಪನಿಯವರಿಂದ 27/05/2022 ರಂದು ಹೊಸ ಸಿಎನ್ಸಿ ಟ್ಯೂನಿಂಗ್ ಮಶೀನ ಖರೀದಿಸಿದ್ದರು. ಅದರ ಬೆಲೆ ರೂ.11 ಲಕ್ಷ ಇತ್ತು. ಆ ಹಣ ಪಡೆದ ಎದುರುದಾರ ದೂರುದಾರರಿಗೆ ಸಿಎನ್ಸಿ ಟ್ಯೂನಿಂಗ್ ಮಶೀನ ಪೂರೈಸಿದ್ದರು.
ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿ ಕಮಲಾ ಬಡಿಗೇರ ಎಂಬುವವರು 2020 ರಲ್ಲಿ ಹುಬ್ಬಳ್ಳಿಯ ವಾಣಿಜ್ಯ ಮಳಿಗೆಯಲ್ಲಿ ವ್ಯಾಪಾರ ಮಾಡಲು ಇಚ್ಚಿಸಿ ಎದುರುದಾರ ಎಸ್.ಎಸ್ ವಿ ಶೇಲ್ಟರ್ಸ್ನ ವಿಜಯಕುಮಾರ ಕಬಾಡಿ ರವರಿಂದ 875 ಚ.ಅಡಿ ವಿಸ್ತ್ರೀರ್ಣದ ಮಳಿಗೆಯನ್ನು ಖರೀಸಿದ್ದರು. ಅದಕ್ಕೆ ಅವರು ರೂ.27,41,080/-ಗಳಿಗೆ ಹಣ ಸಂದಾಯ ಮಾಡಿದ್ದರು.
ಧಾರವಾಡದ ಸಂಜೀವ ದೇಸಾಯಿ ಎಂಬುವವರು ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದು, 2017 ರಲ್ಲಿ ಎದುರುದಾರರಾದ ಸ್ಕೈಟೌನ್ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಇವರ ಬಳಿ ಪೂರ್ತಿ ಹಣ ಪಾವತಿಸಿ ಪ್ಲಾಟ್ನ್ನು ಖರೀದಿಸಿದ್ದರು. ಖರೀದಿ ಕರಾರಿನಂತೆ 24 ತಿಂಗಳ ಒಳಗಾಗಿ ಮನೆಯನ್ನು ಪೂರ್ಣಗೊಳಿಸಿ ಕೊಡಬೇಕು, ತಪ್ಪಿದ್ದಲ್ಲಿ ಪ್ರತಿ ತಿಂಗಳು ರೂ.10 ಸಾವಿರ ಮನೆ ಬಾಡಿಗೆ ಅಂತ ಪೂರ್ತಿ ಮನೆ ಕಟ್ಟುವವರೆಗೂ ಎದುರುದಾರರು ದೂರುದಾರರಿಗೆ ಕೊಡುವ ಒಪ್ಪಂದವಾಗಿತ್ತು.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪೂರ ತಾಲ್ಲೂಕಿನ ಹೊಸಳ್ಳಿ ಗ್ರಾಮದ ದೂರುದಾರ ಮಂಜುನಾಥ ಕಾಂಬಳೆ ಅನ್ನುವವರ ಹೆಸರಿನಲ್ಲಿ ದಿ:26/03/1999 ರಂದು ಐದು ಸಾವಿರ ರೂಪಾಯಿ ಹಣವನ್ನು ಆಗಿನ ಧಾರವಾಡದ ದೇನಾ ಬ್ಯಾಂಕಿನಲ್ಲಿ ಖಾಯಂ ಠೇವಣಿ ಇಟ್ಟಿದ್ದರು. ಸದರಿ ದೇನಾ ಬ್ಯಾಂಕ ನಂತರ ಬ್ಯಾಂಕ್ಆಪ್ ಬರೋಡಾದಲ್ಲಿ ವಿಲೀನವಾಗಿತ್ತು.
ವಿಮಾ ಕಂಪನಿಯವರ ಅಂತಹ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:08/06/2023 ರಂದು ದೂರು ಸಲ್ಲಿಸಿದ್ದರು.
ಹುಬ್ಬಳ್ಳಿಯ ಅಮರಗೋಳದ ನಿವಾಸಿ ಖಾಸಗಿ ಕಂಪನಿಯಲ್ಲಿ ನೌಕರಿ ಮಾಡುವ ಚೇತನ ಅಥಣಿ ಅನ್ನುವವರು 2017ರಲ್ಲಿ ರಾಯಭಾಗನ ಎಸ್.ಎಸ್.ಗೋಲ್ಡನ್ ಕಂಪನಿಗೆ ಸದಸ್ಯರಾಗಿದ್ದರು. ಎದುರುದಾರರ ಜಾಹಿರಾತಿಗೆ ಮಾರು ಹೋಗಿ ಅವರು ದಿ:30/06/2017 ರಂದು ರೂ.3,50,000/- ಹಣ ನೀಡಿದ್ದರು.
ಅಮರಗೋಳದ ನಿವಾಸಿ ಖಾಸಗಿ ಕಂಪನಿಯಲ್ಲಿ ನೌಕರಿ ಮಾಡುವ ಮಹಾಂತೇಶ ಹೂಲಿ ಅನ್ನುವವರು ಸೈಟ್ ಖರೀದಿಸಿ ಮನೆ ಕಟ್ಟಿಕೊಳ್ಳಲು ದಿ:22/09/2022 ರಂದು ಹುಬ್ಬಳ್ಳಿಯ ವಿದ್ಯಾನಗರದ ರೆಪ್ಕೋ ಹೋಮ ಫೈನಾನ್ಸ್ರವರಿಂದ ರೂ.12 ಲಕ್ಷ ಸಾಲ ಪಡೆದಿದ್ದರು.
ಆ ವಿಮೆ ಚಾಲ್ತಿಯಿರುವಾಗ ದಿ:27/09/2019 ರಂದು ಆ ವಾಹನ ನರಗುಂದದ ಹಿರೇಹಳ್ಳ ಹತ್ತಿರ ಅಪಘಾತಕ್ಕೀಡಾಗಿ ಜಖಂಗೊಂಡಿತ್ತು. ಆ ವಾಹನದ ರಿಪೇರಿಗಾಗಿ ರೂ.2,04,967/- ಆಗುತ್ತದೆ ಅಂತಾ ಅಧಿಕೃತ ಸರ್ವಿಸ್ ಸೆಂಟರನಿಂದ ಎಸ್ಟಿಮೇಷನ್ ಪಡೆದು ಆ ಮೊತ್ತದ ಹಣ ಪರಿಹಾರವಾಗಿ ಕೊಡುವಂತೆ ಎದುರುದಾರ ವಿಮಾ ಕಂಪನಿಯವರಿಗೆ ಎಲ್ಲ ದಾಖಲೆಗಳ ಸಮೇತ ಕೋರಿಕೊಂಡಿದ್ದರು.
ಹುಬ್ಬಳ್ಳಿಯ ಶಿಂದೆ ಕಾಂಪ್ಲೆಕ್ಸ ನಿವಾಸಿ ಉಷಾ ಜೈನ ಎಂಬುವವರು ಅಲ್ಲಿಯ ವಿದ್ಯಾನಗರದ ಪ್ರಕಲ್ಪ ಮೋಟರ್ಸ ಇವರಿಂದ ದಿ. 18/06/2021 ರಂದು ರೂ. 1,25,000/- ಕೊಟ್ಟು ಟಿ ವಿ ಎಸ್ ಐಕ್ಯೂಬ್ ಇಲೆಕ್ಟ್ರಿಕ್ ವಾಹನ ಖರೀದಿಸಿದ್ದರು. ವಾಹನ ಖರೀದಿಸಿದ 6 ತಿಂಗಳಲ್ಲಿಯೇ ಅದರ ಬ್ರೇಕ್ನಲ್ಲಿ ಕರೆಂಟ್ ಬಂದು ಆ ವಾಹನದಲ್ಲಿ ದೋಷ ಕಂಡು ಬಂದಿತ್ತು.
ಹುಬ್ಬಳ್ಳಿ ತಾಲೂಕಿನ ಹೆಬಸೂರ ಗ್ರಾಮದ ಲಕ್ಷ್ಮವ್ವ ಇಂಗಳಿಹಳ್ಳಿ ಅವರ ಪತಿ ಅಶೋಕ ಎಂಬುವವರು ಚೋರಮಂಡಲಮ್ ಜನರಲ್ ಇನ್ಸುರೆನ್ಸ್ ಕಂಪನಿ ಲಿಮಿಟೆಡ್ ಅವರಿಂದ ರೂ.413/-ಗಳನ್ನು ಪ್ರಿಮಿಯಮ್ ನೀಡಿ, ರೂ.5 ಲಕ್ಷಗಳಿಗೆ ದಿ:06/08/2020 ರಂದು ಒಂದು ವರ್ಷದ ಅವಧಿಯ ಅಪಘಾತ ವಿಮೆ ಖರೀದಿಸಿದ್ದರು. ವಿಮೆದಾರ ದಿ:13/12/2020 ರಂದು ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದರು. ಮೃತನ ಪತ್ನಿ ಲಕ್ಷ್ಮವ್ವ ಅಗತ್ಯ ದಾಖಲೆಗಳೊಂದಿಗೆ ವಿಮೆ ಹಣ ಕೊಡುವಂತೆ ವಿಮಾ ಕಂಪನಿಗೆ ಕ್ಲೇಮ ಅರ್ಜಿ ಸಲ್ಲಿಸಿದ್ದರು.
ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಹಿರೇಹರಕುಣಿ ಗ್ರಾಮದ ನಾಗಪ್ಪ ಶಿವಪ್ಪ ಕುರಹಟ್ಟಿ ಇವರು ಮೆಣಸಿನಕಾಯಿ ವ್ಯಾಪಾರಸ್ಥರಾಗಿದ್ದರು. ವ್ಯಾಪಾರಕ್ಕೆಂದು ಶಿವಮೊಗ್ಗ ಜಿಲ್ಲೆಯ ಸೊರಬಕ್ಕೆ ಆಗಾಗ್ಗೆ ಹೋಗಿ ಬರುತ್ತಿದ್ದರು. ಹೀಗೆ ವ್ಯಾಪಾರಕ್ಕೆಂದು ಹೋದಾಗ ದಿ:28/03/2019 ರಂದು ರೂ.7,291/- ಪ್ರೀಮಿಯಮ್ ನೀಡಿ ಸೊರಬ (ಸಾಗರ) ಅಂಚೆ ಕಛೇರಿಯಿಂದ ಗ್ರಾಮೀಣ ಅಂಚೆ ಜೀವ ವಿಮೆಯನ್ನು ಪಡೆದುಕೊಂಡಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.