ಒಂದು ಎಕರೆ ಜಮೀನಿನಲ್ಲಿ 3 ಲಕ್ಷ ರೂ,ಆದಾಯ ಗಳಿಸಿದ ರೈತ..! ಇಲ್ಲಿದೆ ಯಶೋಗಾಥೆ

ಮಾವಿನ ಬೆಳೆ ಜಿಲ್ಲೆಯ ಪ್ರಮುಖ ಹಣ್ಣಿನ ಬೆಳೆಯಾಗಿದ್ದು, ಇತ್ತೀಚಿಗೆ ಆಯೋಜಿಸಿದ ಮಾವು ಮೇಳ ಅತ್ಯಂತ ಯಶಸ್ವಿಯಾಗಿ ರಾಜ್ಯಮಟ್ಟದಲ್ಲೂ ಹೆಸರು ಮಾಡಿದೆ. ಜಿಲ್ಲೆಯ ಇನ್ನೊಂದು ಪ್ರಮುಖ ಬೆಳೆಯಾಗಿ "ಪೇರಲ" ಎಂದು ಕರೆಯಲ್ಪಡುವ ಸೀಬೆ ಹೆಚ್ಚು ಜನಪ್ರಿಯವಾಗುತ್ತಿದೆ.

Last Updated : Jul 14, 2022, 04:44 PM IST
  • ಪೇರಲ ಬೆಳೆ ಕಡಿಮೆ ಖರ್ಚಿನಲ್ಲಿ ಉತ್ತಮ ಆದಾಯ ಬರುವುದೆಂದು ಮಾಹಿತಿ ಪಡೆದ ಈ ಭಾಗದ ಹತ್ತಾರು ರೈತರು ಒಂದೂವರೆಯಿಂದ 2.5 ಎಕರೆಯಷ್ಟು ಸಾಂದ್ರ ಪದ್ದತಿಯಲ್ಲಿ ಪೇರು ಬೆಳೆಯಲು ಮುಂದೆ ಬಂದಿದ್ದಾರೆ.
ಒಂದು ಎಕರೆ ಜಮೀನಿನಲ್ಲಿ 3 ಲಕ್ಷ ರೂ,ಆದಾಯ ಗಳಿಸಿದ ರೈತ..! ಇಲ್ಲಿದೆ ಯಶೋಗಾಥೆ  title=

ಕೊಪ್ಪಳ: ಮಾವಿನ ಬೆಳೆ ಜಿಲ್ಲೆಯ ಪ್ರಮುಖ ಹಣ್ಣಿನ ಬೆಳೆಯಾಗಿದ್ದು, ಇತ್ತೀಚಿಗೆ ಆಯೋಜಿಸಿದ ಮಾವು ಮೇಳ ಅತ್ಯಂತ ಯಶಸ್ವಿಯಾಗಿ ರಾಜ್ಯಮಟ್ಟದಲ್ಲೂ ಹೆಸರು ಮಾಡಿದೆ. ಜಿಲ್ಲೆಯ ಇನ್ನೊಂದು ಪ್ರಮುಖ ಬೆಳೆಯಾಗಿ "ಪೇರಲ" ಎಂದು ಕರೆಯಲ್ಪಡುವ ಸೀಬೆ ಹೆಚ್ಚು ಜನಪ್ರಿಯವಾಗುತ್ತಿದೆ.

ಇದಕ್ಕೆ ಮುಖ್ಯ ಕಾರಣ ಪೇರಲ ಬೆಳೆ ಸಾಧಾರಣ ಮಣ್ಣು ಹಾಗೂ ಕಡಿಮೆ ನೀರಿನಲ್ಲಿಯೂ ಅತ್ಯಂತ ಸಮೃದ್ಧ ಇಳುವರಿ ಕೊಡಬಲ್ಲದಲ್ಲದೇ ಗ್ರಾಹಕರಿಗೂ ಕೂಡ ಹೆಚ್ಚು ಪ್ರಿಯವಾಗಿದೆ. ಇದರಲ್ಲಿನ "ಸಿ" ಜೀವಕೋಶ ಕರೋನ ದಂತಹ ರೋಗದ ನಿರ್ವಹಣೆಗೆ ಸಹಕಾರಿ. ಮಧುಮೇಹಿಗಳಿಗೂ ಕೂಡ ಪೇರಲ ಉತ್ತಮ ಔಷಧಿಯಾಗಿದೆ.ಇಷ್ಟೇ ಅಲ್ಲದೇ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಆಹಾರ ಸಂಸ್ಕರಣಾ ಯೋಜನೆ ನಿಯಮಬದ್ದಗೊಳಿಸುವಿಕೆ (ಪಿಎಂಎಫ್ಎಂಇ) ಯೋಜನೆಯಡಿ ಕೊಪ್ಪಳ ಜಿಲ್ಲೆಗೆ "ಒಂದು ಜಿಲ್ಲೆ ಒಂದು ಬೆಳೆ" ಯೋಜನೆಯಡಿ "ಪೇರಲ" ಬೆಳೆ ಆಯ್ಕೆಯಾಗಿರುವದು ಈ ಬೆಳೆಯ ಮಹತ್ವ ತೋರುತ್ತದೆ.

ಇದನ್ನೂ ಓದಿ : Today Vegetable Price: ಇಂದು ತರಕಾರಿ ಹಾಗೂ ಹಣ್ಣಿನ ಬೆಲೆ ಹೀಗಿದೆ ನೋಡಿ..

May be an image of 3 people, people standing, tree, outdoors and text that says "Bikanhalli, Karnataka 583238,India India Bikanhalli Karnataka India DeimalDMS DMS Decimal Latitude 15,270297 15'16'13'N Longitude 76.050001 76'3'0"E 2022-06-21(Tue) 11:30"

ಬಿಕನಳ್ಳಿ ಗ್ರಾಮದ ಹನುಮಂತಪ್ಪ ಪೂಜಾರ ರವರು ಒಬ್ಬ ಸಾಮಾನ್ಯ ರೈತರಾಗಿದ್ದು, ತಮ್ಮ ಜಮೀನಿನಲ್ಲಿ ಕೃಷಿ ಬೆಳೆಯಾದ ಮೆಕ್ಕೆ ಜೋಳ, ಹತ್ತಿ, ಸಜ್ಜೆ, ಕಿರುಧಾನ್ಯಗಳನ್ನು ಬೆಳೆಯುತ್ತಾರೆ. ರೇಷ್ಮೆ ಕೃಷಿ ಕೂಡ ಮಾಡಿರುವ ಹನುಮಂತರವರಿಗೆ ಯಾವ ಬೆಳೆಯಲ್ಲೂ ಆಕರ್ಷಕ ಆದಾಯ ಕಂಡಿರಲಿಲ್ಲ. ತೋಟಗಾರಿಕೆ ಇಲಾಖೆಯಲ್ಲಿ ಅನೇಕ ರೈತಪರ ಯೋಜನೆಗಳಿರುವುದನ್ನು ಮಾಧ್ಯಮಗಳಿಂದ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದು ಯಾವ ಬೆಳೆ ಬೆಳೆದಿದ್ದಾರೆ, ಕಡಿಮೆ ಖರ್ಚು, ಅಧಿಕ ಲಾಭ ಪಡೆದಿರಬಹುದೆಂದು ಇಲಾಖೆ ಅಧಿಕಾರಿಗಳೊಡನೆ ಚರ್ಚಿಸಿದಾಗ ಪೇರಲ ಬೆಳೆ ಕಡಿಮೆ ನಿರ್ವಹಣೆಯಲ್ಲಿ ಅಧಿಕ ಲಾಭ ತರಬಹುದೆಂದು ತಿಳಿದುಕೊಂಡು 2021-22 ನೇ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪೇರಲ ಬೆಳೆ ನಾಟಿ ಮಾಡಿದರು. ಇವರಿಗೆ ಸಸಿಗಳ ಲಭ್ಯತೆ, ನಾಟಿ ಮಾಡುವ ವಿಧಾನ, ಅಂತರ ಮತ್ತು ಮುಂತಾದ ತಾಂತ್ರಿಕ ಮಾಹಿತಿ ನೀಡಿ ಮಾರ್ಗದರ್ಶನ ನೀಡಿದರು. ಅಳವಂಡಿ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಬಸವರಾಜ ರಾಂಪೂರ ಇವರ ಸಲಹೆ ಪಡೆದು ಎಕರೆಗೆ 6*6 ಅಡಿ ಅಂತರದಲ್ಲಿ ತೈವಾನ ಪಿಂಕ್ ತಳಿಯ 1000 ಗಿಡಗಳನ್ನು ಆಂಧ್ರ ಪ್ರದೇಶ ರಾಜಮಂಡ್ರಿಯಿಂದ ತಂದು ನಾಟಿ ಮಾಡಿರುತ್ತಾರೆ.

ಇದನ್ನೂ ಓದಿ : ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ವಿರುದ್ದ ಸಿಎಂಗೆ ದೂರು :ವರ್ಗಾವಣೆಗೆ ಮನವಿ

ಒಂದೂವರೆ ವರ್ಷದವರೆಗೂ ಉತ್ತಮನೀರು, ಪೋಷಕಾಂಶಗಳ ನಿರ್ವಹಣೆಯಿಂದ 1.5 ವರ್ಷಕ್ಕೆ ಉತ್ತಮ ಗುಣಮಟ್ಟದ ಇಳುವರಿ ಪಡೆದು ಸುಮಾರು ರೂ.3.00 ಲಕ್ಷ ಆದಾಯ ಪಡೆದಿರುತ್ತಾರೆ.ಒಂದು ಎಕರೆಯಿಂದ ಎರಡೇ ವರ್ಷದಲ್ಲಿ ಇನ್ನೊಂದು ಆದಾಯ ಪಡೆದಿರುವುದು ಇದೇ ಮೊದಲು.ನನ್ನ ಹಣ್ಣುಗಳಿಗೆ ಹೊಸಪೇಟೆ ಮಾರುಕಟ್ಟೆಯಲ್ಲಿ ತುಂಬಾ ಬೇಡಿಕೆ ಇದೆ. ನಿರಂತರವಾಗಿ ನಾನು ಹೊಸಪೇಟೆ ಮಾರುಕಟ್ಟೆಗೆ ಹಣ್ಣುಗಳನ್ನು ಕಳುಹಿಸುತ್ತೇನೆ.ಅಲ್ಲಿ ನನ್ನ ಹಣ್ಣುಗಳಿಗೆ ಉತ್ತಮ ಬೇಡಿಕೆ ಇದೆ. ಇಂದು ನನ್ನ ಈ ಉತ್ತಮ ಸ್ಥಿತಿಗೆ ತೋಟಗಾರಿಕೆ ಅಧಿಕಾರಿಗಳ ಸಲಹೆ, ಸಹಕಾರವೇ ಕಾರಣ. ಅವರ ಮಾರ್ಗದರ್ಶನದಲ್ಲಿ ನನಗೆ ಲಾಭವಾಗಿದೆ. ಅವರಿಗೆಲ್ಲಾ ನಾನು ಋಣಿಯಾಗಿರುತ್ತೇನೆ ಎನ್ನುತ್ತಾರೆ ರೈತ ಹನುಮಂತಪ್ಪ.

ತೋಟಗಾರಿಕೆ ಹಾಗೂ ಜಿಲ್ಲಾ ತೋಟಗಾರಿಕೆ ಸಂಪನ್ಮೂಲ ಅಧಿಕಾರಿಗಳು ಇತ್ತೀಚಿಗೆ ಇವರ ತೋಟಕ್ಕೆ ಭೇಟಿ ನೀಡಿ ಉತ್ತಮ ಬೆಳೆ ನೋಡಿ ಶ್ಲಾಘಿಸಿದ್ದಾರೆ.ತೋಟಗಾರಿಕೆ ಉಪನಿರ್ದೇಶಕರು ಕೃಷ್ಣ ಉಕ್ಕುಂದ ಅವರು, ರೈತರು ಕಡಿಮೆ ಖರ್ಚಿನಲ್ಲಿ ಪೇರಲದಂತಹ ಬೆಳೆ ಬೆಳೆದಿದ್ದು, ಉತ್ತಮ ಆದಾಯ ಮಾಡಿಕೊಳ್ಳಬಹುದು. ಇದಕ್ಕಾಗಿ ಇಲಾಖೆಯಲ್ಲಿ ಹಲವಾರು ರೈತ ಪರ ಯೋಜನೆಗಳಿವೆ. ರೈತರು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

May be an image of 3 people, people standing, outdoors and text

ಬಸವರಾಜ ರಾಂಪೂರ ಸಹಾಯಕ ತೋಟಗಾರಿಕೆ ಅಧಿಕಾರಿಗಳು ರೈತ ಸಂಪರ್ಕ ಕೇಂದ್ರ ಅಳವಂಡಿರವರು ಉಪಸ್ಥಿತರಿದ್ದರು.ಈಗ ಪೇರಲ ಒಂದು ಎಕರೆ ಬೆಳೆದಿದ್ದು, ಉತ್ತಮ ಆದಾಯ ಪಡೆದಿರುವ ಹನುಮಂತಪ್ಪ ಪೂಜಾರ ಈ ವರ್ಷಕ್ಕೆ ಇನ್ನೊಂದು ಎಕರೆ ನಾಟಿ ಮಾಡಲು ಆಗಲೇ ಸಸಿಗಳನ್ನು ತರಿಸಿದ್ದಾರೆ. ಪೇರಲ ಬೆಳೆಯಲ್ಲಿ ಈ ಭಾಗದ ರೈತರು ಉತ್ಸಾಹ ವ್ಯಕ್ತಪಡಿಸಿದ್ದಾರೆ.

ಪೇರಲ ಬೆಳೆ ಕಡಿಮೆ ಖರ್ಚಿನಲ್ಲಿ ಉತ್ತಮ ಆದಾಯ ಬರುವುದೆಂದು ಮಾಹಿತಿ ಪಡೆದ ಈ ಭಾಗದ ಹತ್ತಾರು ರೈತರು ಒಂದೂವರೆಯಿಂದ 2.5 ಎಕರೆಯಷ್ಟು ಸಾಂದ್ರ ಪದ್ದತಿಯಲ್ಲಿ ಪೇರು ಬೆಳೆಯಲು ಮುಂದೆ ಬಂದಿದ್ದಾರೆ. ಬಸವರಾಜ ರಾಂಪೂರ ಅವರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಪೇರಲ ಕೊಪ್ಪಳ ಜಿಲ್ಲೆಯ ಎರಡನೇ ಪ್ರಮುಖ ಹಣ್ಣಿನ ಬೆಳೆಯಾಗಿ ಹೊರಹೊಮ್ಮುತ್ತಿರುವುದು ಉತ್ತಮ ಬೆಳವಣಿಗೆಯಾಗಿ ಎಂದು ಜಿಲ್ಲಾ ಸಂಪನ್ಮೂಲ ವ್ಯಕ್ತಿ ವಾಮನಮೂರ್ತಿ ಅವರು ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

 

 

Trending News