Karnataka Crime : ಪರಪುರುಷನ ಜೊತೆ ಪತ್ನಿ ಪೋನ್ ಸಂಪರ್ಕ : ಹೆಂಡತಿ ಕೊಂದು ಎಸ್ಕೇಪ್ ಆಗಿದ್ದ ಪತಿ ಅರೆಸ್ಟ್

ವನಜಾಕ್ಷಿ ಅಣ್ಣ ತಂಗಿ ಕಾಲ್ ಪಿಕ್ ಮಾಡ್ತಿಲ್ಲ ಭಾವ ಕೂಡ ಕಾಲ್ ಪಿಕ್ ಮಾಡ್ತಿಲ್ಲ ಅಂತ ಮನೆ ಹತ್ರ ಬಂದು ನೋಡಿದಾಗ ಮನೆ ಲಾಕ್ ಆಗಿತ್ತು. ಅಲ್ಲದೆ, ಕೆಟ್ಟ ವಾಸನೆ ಬರ್ತಿತ್ತು. ಬಾಗಿಲು ಓಪನ್ ಮಾಡಿ ನೋಡಿದಾಗ  ಮನೆಯಲ್ಲಿ ತಂಗಿ ವನಜಾಕ್ಷಿ ದೇಹ ಕೊಳೆತ ಸ್ಥಿತಿಯಲ್ಲಿತ್ತು. ತಕ್ಷಣ ವನಜಾಕ್ಷಿ ಅಣ್ಣ ಪೊಲೀಸ್ರಿಗೆ ಮಾಹಿತಿ ನೀಡಿದ್ರು. ವನಜಾಕ್ಷಿ ಮರ್ಡರ್ ಆಗೇ ಸತ್ತಿದ್ದಾಳೆ ಅನ್ನೊದನ್ನ ಕನ್ಫರ್ಮ್‌ ಮಾಡ್ಕೊಂಡು ಪೊಲೀಸರು ಇನ್ವೆಸ್ಟಿಗೇಷನ್ ಶುರುಮಾಡಿದ್ರು.

Written by - VISHWANATH HARIHARA | Last Updated : Apr 21, 2022, 05:03 PM IST
  • ವನಜಾಕ್ಷಿ ಅಣ್ಣ ತಂಗಿ ಕಾಲ್ ಪಿಕ್ ಮಾಡ್ತಿಲ್ಲ ಭಾವ ಕೂಡ ಕಾಲ್ ಪಿಕ್ ಮಾಡ್ತಿಲ್ಲ
  • ಪತ್ನಿ ವನಜಾಕ್ಷಿಯನ್ನು ಕೊಂದು ಗಂಡ ಅಶೋಕ್ ಈಗ ಅಂದರ್
  • ವನಜಾಕ್ಷಿ ಮರ್ಡರ್ ಆಗೇ ಸತ್ತಿದ್ದಾಳೆ ಅನ್ನೊದನ್ನ ಕನ್ಫರ್ಮ್‌ ಮಾಡ್ಕೊಂಡು ಪೊಲೀಸರು
Karnataka Crime : ಪರಪುರುಷನ ಜೊತೆ ಪತ್ನಿ ಪೋನ್ ಸಂಪರ್ಕ : ಹೆಂಡತಿ ಕೊಂದು ಎಸ್ಕೇಪ್ ಆಗಿದ್ದ ಪತಿ ಅರೆಸ್ಟ್ title=

ಬೆಂಗಳೂರು : ಹೆಂಡತಿ ಪರಪುರಷನ ಜೊತೆ ಫೋನ್ ನಲ್ಲಿ ಮಾತನಾಡುತ್ತಿದ್ದಾಳೆ ಎಂದು ಆಕೆಯನ್ನು ಕೊಂದು ಎಸ್ಕೇಪ್ ಆಗಿದ್ದ ಆರೋಪಿಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಪತ್ನಿ ವನಜಾಕ್ಷಿಯನ್ನು ಕೊಂದು ಗಂಡ ಅಶೋಕ್ ಈಗ ಅಂದರ್ ಆಗಿದ್ದಾನೆ.

ವನಜಾಕ್ಷಿ ಅಣ್ಣ ತಂಗಿ ಕಾಲ್ ಪಿಕ್ ಮಾಡ್ತಿಲ್ಲ ಭಾವ ಕೂಡ ಕಾಲ್ ಪಿಕ್ ಮಾಡ್ತಿಲ್ಲ ಅಂತ ಮನೆ ಹತ್ರ ಬಂದು ನೋಡಿದಾಗ ಮನೆ ಲಾಕ್ ಆಗಿತ್ತು. ಅಲ್ಲದೆ, ಕೆಟ್ಟ ವಾಸನೆ ಬರ್ತಿತ್ತು. ಬಾಗಿಲು ಓಪನ್ ಮಾಡಿ ನೋಡಿದಾಗ  ಮನೆಯಲ್ಲಿ ತಂಗಿ ವನಜಾಕ್ಷಿ ದೇಹ ಕೊಳೆತ ಸ್ಥಿತಿಯಲ್ಲಿತ್ತು. ತಕ್ಷಣ ವನಜಾಕ್ಷಿ ಅಣ್ಣ ಪೊಲೀಸ್ರಿಗೆ ಮಾಹಿತಿ ನೀಡಿದ್ರು. ವನಜಾಕ್ಷಿ ಮರ್ಡರ್ ಆಗೇ ಸತ್ತಿದ್ದಾಳೆ ಅನ್ನೊದನ್ನ ಕನ್ಫರ್ಮ್‌ ಮಾಡ್ಕೊಂಡು ಪೊಲೀಸರು ಇನ್ವೆಸ್ಟಿಗೇಷನ್ ಶುರುಮಾಡಿದ್ರು.

ಇದನ್ನೂ ಓದಿ : PSI Recruitment Scam : PSI ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ : ಕಾಂಗ್ರೆಸ್ ಶಾಸಕನ ಗನ್ ಮ್ಯಾನ್ ಅರೆಸ್ಟ್!

ಅದಾಗ್ಲೆ ಊರು ಬಿಟ್ಟಿದ್ದ ವನಜಾಕ್ಷಿ ಪತಿ ಅಶೋಕನ ಮೇಲೆ ಸಾಕಷ್ಟು ಅನುಮಾನ ಬಂದಿತ್ತು. ಮಾಗಡಿ ಬಳಿಯ ಹುಟ್ಟೂರಿನಲ್ಲಿದ್ದ ಅಶೋಕನನ್ನು ಪೊಲೀಸ್ರು ಲಾಕ್ ಮಾಡ್ತಿದ್ದಂತೆ ಕೊಲೆಗೆ ನಿಜ ಕಾರಣನ್ನು ಬಿಚ್ಚಿಟ್ಟಿದ್ದ. ಸಾರ್ ನನ್ ಹೆಂಡತಿ ಎಷ್ಟು ಹೇಳಿದ್ರು ನನ್ ಮಾತ್ ಕೇಳ್ತಿರ್ಲಿಲ್ಲ, ಬೇರೆಯವನ ಸ್ನೇಹ ಬೆಳಿಸಿ ನಿತ್ಯ ಪೋನ್ ನಲ್ಲೇ ಇರ್ತಿದ್ಳು. ಇದೇ ಕಾರಣಕ್ಕೆ 17ನೇ ತಾರೀಕು ಕೂಡ ಗಲಾಟೆಯಗಿತ್ತು.  ಆ ಗಲಾಟೆಯಲ್ಲಿ ಅವಳ ಕತ್ತು ಹಿಸುಕಿ ಸಾಯಿಸಿರೋದಾಗಿ ಬಾಯಿ ಬಿಟ್ಟಿದ್ದಾನೆ.

ಇನ್ನೂ 13 ವರ್ಷದಿಂದ ಮದುವೆಯಾಗಿದ್ದ ವನಜಾಕ್ಷಿ ಮತ್ತು ಅಶೋಕ್ ಕಾಮಾಕ್ಷಿಪಾಳ್ಯದ ಕಾವೇರಿಪುರದಲ್ಲಿ ವಾಸವಿದ್ರು. ಮೂರು ಮಕ್ಕಳಿದ್ರು ಗಂಡ ಅಶೋಕ ಸರಿಯಾಗಿ ನೋಡ್ಕೋತಿರ್ಲಿಲ್ಲ ಅಂತ ಆಗಾಗ ಗಲಾಟೆ ಕೂಡ ಆಗುತ್ತಿತ್ತು ಎಂಬ ಮಾಹಿತಿ ಸಹ ಇದೆ.

ಇದನ್ನೂ ಓದಿ : ಥೂ.. ನೀನು ಮನುಷ್ಯನಾ..? ಬೀದಿನಾಯಿ ಮೇಲೆ ಕಾರು ಹತ್ತಿಸಿ ಕೊಂದೇಬಿಟ್ಟ ಪಾಪಿ..!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News