ರಾಜ್ಯದ ಆರು ಸ್ಥಳಗಳಲ್ಲಿ ಚಿತ್ರ ಕಲಾ ಗ್ಯಾಲರಿಗಳನ್ನು ಪ್ರಾರಂಭಿಸಲು ಕ್ರಮ‌-ಸಿಎಂ ಬೊಮ್ಮಾಯಿ

ಇಡೀ ಕರ್ನಾಟಕದ ಚಿತ್ರಕಲೆಗೆ ತವರೂರು ಚಿತ್ರಕಲಾ ಪರಿಷತ್ತು. ಇದು ಎಲ್ಲೆಡೆ ವ್ಯಾಪಿಸಬೇಕೆಂಬ ಉದ್ದೇಶವಿದೆ. ಆರು ಪ್ರಾದೇಶಿಕ ಸ್ಥಳಗಳಲ್ಲಿ ಚಿತ್ರ ಕಲಾ ಗ್ಯಾಲರಿಗಳನ್ನು ಪ್ರಾರಂಭಿಸಲು ಕ್ರಮ‌ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.

Written by - Prashobh Devanahalli | Last Updated : Mar 27, 2022, 09:23 PM IST
  • ಅವರು ಇಂದು ಕರ್ನಾಟಕ ಚಿತ್ರಕಲಾ ಪರಿಷತ್ತು ವತಿಯಿಂದ ಆಯೋಜಿಸಿದ್ದ ಚಿತ್ರಸಂತೆಯ 19ನೇ ಆವೃತ್ತಿನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಆರು ಸ್ಥಳಗಳಲ್ಲಿ ಚಿತ್ರ ಕಲಾ ಗ್ಯಾಲರಿಗಳನ್ನು ಪ್ರಾರಂಭಿಸಲು ಕ್ರಮ‌-ಸಿಎಂ ಬೊಮ್ಮಾಯಿ  title=

ಬೆಂಗಳೂರು: ಇಡೀ ಕರ್ನಾಟಕದ ಚಿತ್ರಕಲೆಗೆ ತವರೂರು ಚಿತ್ರಕಲಾ ಪರಿಷತ್ತು. ಇದು ಎಲ್ಲೆಡೆ ವ್ಯಾಪಿಸಬೇಕೆಂಬ ಉದ್ದೇಶವಿದೆ. ಆರು ಪ್ರಾದೇಶಿಕ ಸ್ಥಳಗಳಲ್ಲಿ ಚಿತ್ರ ಕಲಾ ಗ್ಯಾಲರಿಗಳನ್ನು ಪ್ರಾರಂಭಿಸಲು ಕ್ರಮ‌ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.

ಅವರು ಇಂದು ಕರ್ನಾಟಕ ಚಿತ್ರಕಲಾ ಪರಿಷತ್ತು ವತಿಯಿಂದ ಆಯೋಜಿಸಿದ್ದ ಚಿತ್ರಸಂತೆಯ 19ನೇ ಆವೃತ್ತಿನ್ನು ಉದ್ಘಾಟಿಸಿ ಮಾತನಾಡಿದರು.

ಸ್ವಾಯತ್ತ ಸಂಸ್ಥೆಯಾಗಿರುವ ಚಿತ್ರ ಕಲಾ ಪರಿಷತ್ತನ್ನು ಡೀಮ್ಡ್ ವಿಶ್ವವಿದ್ಯಾಲಯ ಮಾಡಬೇಕೆಂಬ ಬೇಡಿಕೆ ಇದ್ದು, ಬರುವ ಅಧಿವೇಶನದಲ್ಲಿ ಡೀಮ್ಡ್ ವಿಶ್ವವಿದ್ಯಾಲಯವೆಂದು ಘೋಷಿಸಲು ಕ್ರಮ ವಹಿಸಲಾಗುವುದು.ಇದರಡಿಯಲ್ಲಿ ಹಲವಾರು ಸಂಸ್ಥೆಗಳನ್ನು ತಂದು ಚಿತ್ರಕಲೆಗೆ ಹೊಸ ಆಯಾಮ ನೀಡುವ ಕೆಲಸವನ್ನು ಬಿ.ಎಲ್.ಶಂಕರ್ ಅವರ ನೇತೃತ್ವದಲ್ಲಿ ಮಾಡಲಾಗುವುದು ಎಂದರು.

ಅಭೂತಪೂರ್ವ ಕಲ್ಪನೆ

ಚಿತ್ರಸಂತೆ ಒಂದು ಅಭೂತಪೂರ್ವ ಕಲ್ಪನೆ. ಹಲವಾರು ಉದಯೋನ್ಮುಖ ಕಲಾವಿದರಿದ್ದಾರೆ. ಕಲೆ ಎನ್ನುವುದು ಪ್ರತಿ ಮನುಷ್ಯನೊಳಗಿರುವ ಪ್ರತಿಭೆ. ಕೆಲವು ಕಲೆ  ಕುಲಧರ್ಮದಿಂದ ಬಂದಿರುತ್ತವೆ.ವಿಶ್ವಕರ್ಮ ಜನಾಂಗದವರು ಪಂಚ ಕಲೆಯಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ ಎಂದರು.

ಇದನ್ನೂ ಓದಿ: Basavaraj Bommai : 2023ರ ಚುನಾವಣೆಗೆ ಶಿಗ್ಗಾಂವಿ ಕ್ಷೇತ್ರ ಬದಲಾವಣೆ ಇಲ್ಲ : ಸಿಎಂ ಬೊಮ್ಮಾಯಿ

ಚಿತ್ರಸಂತೆ ಕಲೆಗೆ ಬೆಲೆ ಕೊಡುವ ಪ್ರಯೋಗ

ಕಲೆ ನಮ್ಮೊಂದಿದ್ದರೆ  ಅದಕ್ಕೆ ಬೆಲೆ ಇರುವುದಿಲ್ಲ. ಸಾರ್ವಜನಿಕ ವಾಗಿ ಜಗತ್ತಿಗೆ ತಿಳಿದರೆ ಕಲೆಗೆ ಬೆಲೆ ಬರುತ್ತದೆ. ಚಿತ್ರಸಂತೆ ಕಲೆಗೆ ಬೆಲೆ ಕೊಡುವ ಪ್ರಯೋಗ ಲಕ್ಷಾಂತರ ಜನ ವೀಕ್ಷಿಸುತ್ತಾರೆ, ಸ್ಫೂರ್ತಿ ಪಡೆಯುತ್ತಾರೆ. ಕಲಾವಿದರಿಗಂತೂ ಉತ್ತಮ ಪ್ರತಿಕ್ರಿಯೆ ಬಹಳ ಮುಖ್ಯ.

ಕಲೆಯಲ್ಲಿ ಕ್ರಿಟಿಕ್ ಎಂಬ ವರ್ಗವಿದೆ.ಸೃಷ್ಟಿಕರ್ತನಿಗೇ ಪರಿಪೂರ್ಣತೆ  ಸಾಧ್ಯವಾಗಿಲ್ಲ. ಹಾಗಾಗಿ ಕ್ರಿಟಿಕ್ ಗಳ ಟೀಕೆಗೆ ಹೆಚ್ಚು ಗಮನ ನೀಡಬೇಕಿಲ್ಲ.ನಮ್ಮಲ್ಲಿ ಸುಧಾರಣೆ ತರಲು ಇದ್ದಾರೆ. ಕಲಾವಿದನಿಗೆ ತನ್ನ ಕಲೆಯ ಬಗ್ಗೆ ಸಮಾಧಾನ ಮತ್ತು ತೃಪ್ತಿ ಇರಬೇಕು. ಆಗ ಮಾತ್ರ ಹೆಚ್ಚಿನ ಸಾಧನೆಯನ್ನು ಮಾಡಲು ಸಾಧ್ಯ ಎಂದರು.

ಕಲಾವಿದರು ಮತ್ತು ಕಲಾ ಪೋಷಕರ ಸಂಗಮ

ಕಲಾವಿದರು ಮತ್ತು ಕಲಾ ಪೋಷಕರ ಸಂಗಮವಾದ ಚಿತ್ರಕಲಾ ಸಂತೆ 2 ವರ್ಷಗಳ ನಂತರ ನಡೆಯುತ್ತಿದೆ. ಇದು ಅದ್ಭುತವಾದ ಚಿತ್ರಸಂತೆ.ಇದು ನಿರಂತವಾಗಿ ನಡೆಯಬೇಕು. ಇದಕ್ಕೆ ನಮ್ಮ ಸರ್ಕಾರ ಎಲ್ಲಾ ಸಾಂಸ್ಕೃತಿಕ, ಸಾಹಿತ್ಯಿಕ, ಮತ್ತು ಕಲೆಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತದೆ. ಸಂಸ್ಕೃತಿ ಬಹಳ ಮುಖ್ಯ.  ನಾಗರೀಕತೆ ಎನ್ನುವುದು ನಮ್ಮ ಬಳಿ ಇರುವುದು. ನಾವೇನಾಗಿದ್ದೇವೋ ಅದು ಸಂಸ್ಕೃತಿ. ನಮ್ಮನ್ನು ನಾವೇ ಅರ್ಥ ಮಾಡಿಕೊಳ್ಳಲು ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯಿಂದ ಮಾತ್ರ ಸಾಧ್ಯ. ಅದನ್ನು ಉಳಿಸಿ ಬೆಳೆಸಿಕೊಂಡು ಹೋದಾಗ ಈ ದೇಶದ ಅಂತಃಸ್ವತ ಉಳಿಯುತ್ತದೆ. ನಮ್ಮ ದೇಶದ  ಅಸ್ಮಿತೆ ಉಳಿಯುತ್ತದೆ ನಮ್ಮ ಸಂಸ್ಕೃತಿಯಿಂದಲೇ ನಾವು ವಿಶ್ವದಲ್ಲಿಯೇ  ಭಿನ್ನವಾಗಿ ನಿಲ್ಲುತ್ತೇವೆ.ಅದಕ್ಕಾಗಿ ಇದನ್ನು ಕಾಪಾಡಿಕೊಂಡು ಹೋಗಬೇಕು. ಚಿತ್ರಸಂತೆ ಯಶ್ವಸ್ವಿಯಾಗಲಿ ಎಂದು ಹಾರೈಸಿದರು. ಕನ್ನಡದ ಜಗತ್ತನ್ನೇ ಚಿತ್ರಸಂತೆ ತೆರೆದಿದೆ. ಸ್ವಾತಂತ್ರೋತ್ಸವದ 75ನೇ ವರ್ಷಾಚರಣೆಯಲ್ಲಿ ಇದನ್ನು ಆಯೋಜಿಸಿರುವುದು ಆತ್ಮಾವಲೋಕವನ್ನು ಮಾಡಿಕೊಳ್ಳಲು ಸಕಾಲ ಎಂದರು.

ಚಿತ್ರಕಲಾ.ಪರಿಷತ್ತಿನ ಬೆಳವಣಿಗೆ

ಬಿ.ಎಲ್ ಶಂಕರ್ ಏನೇ ಮಾಡಿದರೂ ಅರ್ಥಪೂರ್ಣವಾಗಿ, ಅದರ ಹಿಂದೆ ಒಂದು ನೀತಿಯನ್ನು ಇಟ್ಟುಕೊಂಡು ಮಾಡಿಕೊಂಡು ಬಂದಿದ್ದಾರೆ. ಚಿತ್ರ ಕಲಾ ಪರಿಷತ್ತು ಅವರ ನೇತೃತ್ವದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ ವಲಯದಲ್ಲಿ ಬೆಳೆಯುತ್ತಿದೆ. ಕೆಲವೇ ಕೆಲವು ಜನರಿಗೆ ಸೀಮಿತವಾಗಿದ್ದ ಚಿತ್ರಕಲಾ ಪರಿಷತ್ತಿನ ಬಾಗಿಲನ್ನು ಸಾರ್ವಜನಿಕರಿಗೆ  ತೆರೆದು ಮುಕ್ತ ಗೊಳಿಸಿದ ಶ್ರೇಯಸ್ಸು ಬಿ.ಎಲ್.ಶಂಕರ್ ಹಾಗೂ ಅವರ ತಂಡದ ಸದಸ್ಯರಿಗೆ ಸೇರುತ್ತದೆ ಎಂದರು.

ಇದನ್ನೂ ಓದಿ: ರಾಜ್ಯದ ಪ್ರಪ್ರಥಮ 'ಡಾ.ಪುನೀತ್ ರಾಜ್‍ಕುಮಾರ್' ಕಂಚಿನ ಪ್ರತಿಮೆ ಲೋಕಾರ್ಪಣೆ

ವಿಂಡ್ಸರ್ ಮ್ಯಾನರ್ ವೃತ್ತದಿಂದ ಶಿವಾನಂದ ವೃತ್ತದವರೆಗೆ ಆಯೋಜಿಸಲಾಗಿದ್ದ ಚಿತ್ರಸಂತೆ ಯಲ್ಲಿ ದೇಶ-ವಿದೇಶದ ಕಲಾವಿದರು ಪ್ರದರ್ಶಿಸಿದ ಕಲಾಕೃತಿಗಳನ್ನು ಮುಖ್ಯಮಂತ್ರಿಗಳು ವೀಕ್ಷಿಸಿ ಕಲಾವಿದರಿಗೆ ಪ್ರೋತ್ಸಾಹಿಸಿದರು.ಈ ಸಂದರ್ಭದಲ್ಲಿ ಐಸ್ ಕ್ರೀಮ್ ಮಾರಾಟಮಾಡುತ್ತಿರುವುದನ್ನು ಗಮನಿಸಿದ ಅವರು, ತಮಗೆ ಬಾಲ್ಯದಿಂದಲೂ ಇಷ್ಟವಾದ ಜಾಯ್ ಮ್ಯಾಂಗೋ ಕ್ರೀಮ್ ಐಸ್ ಕ್ಯಾಂಡಿಯನ್ನು ತಾವೇ ಹಣ ಪಾವತಿಸುವ ಮೂಲಕ ಖರೀದಿಸಿ  ಸಂತೋಷದಿಂದ ಸವಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿತ್ರಸಂತೆ - 2022  ಕಾರ್ಯಕ್ರಮಕ್ಕೆ ಭಾರತಾಂಬೆ ಕಲಾಕೃತಿ ಪಕ್ಕ ಹಸ್ತಾಕ್ಷರ ಹಾಕುವ ಮೂಲಕ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಸಚಿವರಾದ ಡಾ. ಅಶ್ವತ್ಥನಾರಾಯಣ, ಎಸ್ ಟಿ ಸೋಮಶೇಖರ್, ಶಾಸಕ ರಿಜ್ವಾನ್ ಅರ್ಷದ್, ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿಎಲ್ ಶಂಕರ್ , ಮಾಜಿ ಸಚಿವೆ ರಾಣಿ ಸತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News