ಚೇರ್‌ನಲ್ಲಿ ಕುಳಿತ ನಾಲ್ವರ ಶವಗಳು: ಇದು ಸಂಶೋಧನೆಯಂತೆ!

ಬೆಂಗಳೂರಿನ ಆಕ್ಸ್‌ಫರ್ಡ್ ಕಾಲೇಜಿನ ವಿಧಿವಿಜ್ಞಾನ ತಜ್ಞ ಡಾ. ದಿನೇಶ್ ರಾವ್ ಎಂಬವರು ಈ ಸಂಶೋಧನೆಯನ್ನು ಮಾಡಿದ್ದು, ರಾಸಾಯನಿಕಗಳನ್ನು ಬಳಸಿ ನೂರಾರು ವರ್ಷಗಳ ಕಾಲ ಮೃತದೇಹಗಳನ್ನು ಸುರಕ್ಷಿತವಾಗಿಡಬಹುದು ಎಂಬುದನ್ನು ತಿಳಿದಿಕೊಟ್ಟಿದ್ದಾರೆ.   

Written by - Bhavishya Shetty | Last Updated : May 8, 2022, 11:39 AM IST
  • ರಾಸಾಯನಿಕ ಬಳಸಿ ಶವಗಳ ಸಂಸ್ಕರಣೆ
  • ಬೆಂಗಳೂರಿನಲ್ಲಿ ನಡೆದ ವಿಶೇಷವಾದ ಪ್ರಯೋಗ
  • ವಿಶ್ವದ ಮೊದಲ ವಿಶೇಷ ಸಂಶೋಧನೆ
 ಚೇರ್‌ನಲ್ಲಿ ಕುಳಿತ ನಾಲ್ವರ ಶವಗಳು: ಇದು ಸಂಶೋಧನೆಯಂತೆ!  title=
Anekal Oxford Medical College

ಶವಗಳನ್ನು ಕೆಲ ದಿನಗಳವರೆಗೆ ಇಟ್ಟರೆ ಕೊಳೆಯುತ್ತದೆ ಎಂಬುದು ನಮಗೆ ತಿಳಿದ ಸಂಗತಿ. ಆದರೆ ರಾಸಾಯನಿಗಳನ್ನು ಬಳಸಿ ನೂರಾರು ವರ್ಷಗಳ ಕಾಲ ಸುರಕ್ಷಿತವಾಗಿರಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಸಂಶೋಧನೆಯೊಂದು ಉತ್ತರ ನೀಡಿದೆ. ಇದು ಬೆಂಗಳೂರಿನಲ್ಲಿ ನಡೆದ ವಿಶೇಷವಾದ ಪ್ರಯೋಗ. 

ಇದನ್ನು ಓದಿ: Motherʼs Day 2022: ವಿಶ್ವ ತಾಯಂದಿರ ದಿನಕ್ಕೆ ಗೂಗಲ್‌ನಿಂದ ವಿಶೇಷ ಗೌರವ

ಬೆಂಗಳೂರಿನ ಆಕ್ಸ್‌ಫರ್ಡ್ ಕಾಲೇಜಿನ ವಿಧಿವಿಜ್ಞಾನ ತಜ್ಞ ಡಾ. ದಿನೇಶ್ ರಾವ್ ಎಂಬವರು ಈ ಸಂಶೋಧನೆಯನ್ನು ಮಾಡಿದ್ದು, ರಾಸಾಯನಿಕಗಳನ್ನು ಬಳಸಿ ನೂರಾರು ವರ್ಷಗಳ ಕಾಲ ಮೃತದೇಹಗಳನ್ನು ಸುರಕ್ಷಿತವಾಗಿಡಬಹುದು ಎಂಬುದನ್ನು ತಿಳಿದಿಕೊಟ್ಟಿದ್ದಾರೆ. 

ಚೇರ್‌ನಲ್ಲಿ ಕುಳಿತ ಮೃತದೇಹಗಳು: 
ವ್ಯಕ್ತಿಯ ಮರಣದ ಬಳಿಕ ಕೆಲವು ಸಂಶೋಧಿತ ರಾಸಾಯನಿಕಗಳನ್ನು ಬಳಸಿ ಜೀವಂತವಾಗಿ ಕಾಣುವ ರೀತಿಯಲ್ಲೇ ಆ ಶವಗಳನ್ನು ಸಂಗ್ರಹಿಸಿಡಬಹುದಾಗಿದೆ. ಇನ್ನು ಈ ರೀತಿ ಸಂಗ್ರಹಿಸಲ್ಪಟ್ಟ ಮೃತದೇಹಗಳು ಕೊಳೆಯುವುದಿಲ್ಲ ಜೊತೆಗೆ ದುರ್ವಾಸನೆಯೂ ಬೀರುವುದಿಲ್ಲ ಎಂಬುದು ಸಂಶೋಧನೆಯಲ್ಲಿ ದೃಢವಾಗಿದೆ. ಇನ್ನು ಚೇರ್‌ನಲ್ಲಿ ಕುಳಿತ ನಾಲ್ಕು ಶವಗಳು ಪ್ರಾಯೋಗಿಕವಾಗಿದ್ದು, ಇದು ವೈದ್ಯಲೋಕವೇ ಅಚ್ಚರಿ ಪಡುವ ಸಂಶೋಧನೆ ಎನ್ನಬಹುದು. 

ಇದನ್ನು ಓದಿ: Leopard: ಪೊಲೀಸ್ ಠಾಣೆ ಹಿಂದೆ ಓಡಾಡಿದ ಚಿರತೆ, ಸ್ಥಳೀಯರಲ್ಲಿ ಆತಂಕ!

ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನ ಆಕ್ಸ್‌ಫರ್ಡ್ ವೈದ್ಯಕೀಯ ಕಾಲೇಜಿನಲ್ಲಿ ಈ ಸಂಶೋಧನೆ ನಡೆದಿದ್ದು, ಡಾ. ದಿನೇಶ್ ರಾವ್‌ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಚೇರ್‌ನಲ್ಲಿ ಸದ್ಯ ಮಗುವಿನ ಮೃತದೇಹ ಸೇರಿ ನಾಲ್ವರು ವ್ಯಕ್ತಿಗಳ ಶವಗಳನ್ನು ಇಡಲಾಗಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News