Holi 2024: ಬೆಂಗಳೂರಿನಲ್ಲಿ ಹೋಳಿಗೆ ರೇನ್‌ ಡ್ಯಾನ್ಸ್‌ ಹಾಗೂ ಪೂಲ್ ಪಾರ್ಟಿಗೆ ತಡೆ: ಸಿಎಂ ಹೇಳಿದ್ದೇನು?

CM About Holi 2024 Rules: ಬೆಂಗಳೂರಿನಲ್ಲಿ ಈ ವರ್ಷ ನೀರಿನ ಅಭಾವವಿರುವ ಕಾರಣ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹೊಳಿ ಹಬ್ಬದಂದು ಪೂಲ್ ಪಾರ್ಟಿಗಳು ಅಥವಾ ರೇನ್‌ ಡ್ಯಾನ್ಸ್‌ಗೆ ಕಾವೇರಿ ಅಥವಾ ಬೋರ್‌ವೆಲ್ ನೀರನ್ನು ಬಳಸದಂತೆ ಮನವಿ ಮಾಡಿದೆ.  

Written by - Zee Kannada News Desk | Last Updated : Mar 21, 2024, 01:09 PM IST
  • ಹೋಳಿ ಹಬ್ಬವನ್ನು ಆಚರಿಸಲು ಪೂಲ್ ಪಾರ್ಟಿಗಳು ಅಥವಾ ಮಳೆ ರೇನ್‌ ಡ್ಯಾನ್ಸ್‌ಗೆ ಕಾವೇರಿ ಅಥವಾ ಬೋರ್‌ವೆಲ್ ನೀರನ್ನು ಬಳಸದಂತೆ ವಾಣಿಜ್ಯ ಮತ್ತು ಮನರಂಜನಾ ಕೇಂದ್ರಗಳನ್ನು ಮನವಿ ಮಾಡಿದೆ.
  • ಸಾರ್ವಜನಿಕ ಹಿತಾಸಕ್ತಿಯಿಂದ ಕಾವೇರಿ ನೀರು ಮತ್ತು ಬೋರ್‌ವೆಲ್ ನೀರನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಹಿಂದೂ ಸಂಸ್ಕೃತಿ ಹೋಳಿ ಹಬ್ಬವನ್ನು ಮನೆಯಲ್ಲಿ ಆಚರಿಸಲು ಯಾವುದೇ ನಿರ್ಬಂಧಗಳನ್ನು ವಿಧಿಸಲಾಗಿಲ್ಲ.
  • ಸಿಲಿಕಾನ್‌ ಸಿಟಿಯು ದಿನಕ್ಕೆ ಸುಮಾರು 500 ಮಿಲಿಯನ್ ಲೀಟರ್ ನೀರಿನ (ಎಂಎಲ್‌ಡಿ) ಕೊರತೆಯನ್ನು ಎದುರಿಸುತ್ತಿದೆ ಮತ್ತು 2,600 ಎಂಎಲ್‌ಡಿಗಳ ಅಗತ್ಯತೆ ಇದೆ.
Holi 2024: ಬೆಂಗಳೂರಿನಲ್ಲಿ ಹೋಳಿಗೆ ರೇನ್‌ ಡ್ಯಾನ್ಸ್‌ ಹಾಗೂ ಪೂಲ್ ಪಾರ್ಟಿಗೆ ತಡೆ: ಸಿಎಂ ಹೇಳಿದ್ದೇನು? title=

Bengaluru Water Crisis: ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟಿನ ಸಮಸ್ಯೆ ಇರುವುದರಿಂದ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸದ್ಯ  ಮಾರ್ಚ್ 25 ರಂದು ಹೋಳಿ ಆಚರಣೆಗೆ ಕೆಲವು ನಿಯಮಗಳನ್ನು ವಿಧಿಸಿದೆ. ಹೋಳಿ ಹಬ್ಬವನ್ನು ಆಚರಿಸಲು ಪೂಲ್ ಪಾರ್ಟಿಗಳು ಅಥವಾ ಮಳೆ ನೃತ್ಯಗಳಿಗೆ (ರೇನ್‌ ಡ್ಯಾನ್ಸ್‌) ಕಾವೇರಿ ಅಥವಾ ಬೋರ್‌ವೆಲ್ ನೀರನ್ನು ಬಳಸದಂತೆ ವಾಣಿಜ್ಯ ಮತ್ತು ಮನರಂಜನಾ ಕೇಂದ್ರಗಳನ್ನು ಮನವಿ ಮಾಡಿದೆ.

BWSSB ಬಿಡುಗಡೆ ಮಾಡಿದ ಆದೇಶದಲ್ಲಿ, "ಈ ಸಮಯದಲ್ಲಿ ವಾಣಿಜ್ಯ ಉದ್ದೇಶಗಳಿಗಾಗಿ ಮಳೆ ನೃತ್ಯಗಳು ಮತ್ತು ಪೂಲ್ ಪಾರ್ಟಿಗಳಂತಹ ಮನರಂಜನೆಯನ್ನು ಆಯೋಜಿಸುವುದು ಸೂಕ್ತವಲ್ಲ. ಸಾರ್ವಜನಿಕ ಹಿತಾಸಕ್ತಿಯಿಂದ ಕಾವೇರಿ ನೀರು ಮತ್ತು ಬೋರ್‌ವೆಲ್ ನೀರನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಹಿಂದೂ ಸಂಸ್ಕೃತಿ ಹೋಳಿ  ಹಬ್ಬವನ್ನು ಮನೆಯಲ್ಲಿ ಆಚರಿಸಲು ಯಾವುದೇ ನಿರ್ಬಂಧಗಳನ್ನು ವಿಧಿಸಲಾಗಿಲ್ಲ" ಎಂದು ತಿಳಿಸಿದೆ.

ಇದನ್ನೂ ಓದಿ: ಚುನಾವಣಾ ಚೆಕ್ ಪೋಸ್ಟ್: ಬಿಸಿಲಿಗೆ ಬೆಂಡಾದ ಚುನಾವಣಾ ಸಿಬ್ಬಂದಿ

ಈಗಾಗಲೇ ಬೆಂಗಳೂರಿನ ಅನೇಕ ಹೋಟೆಲ್‌ಗಳು ಹೋಳಿ ಆಚರಣೆಗಾಗಿ ಆಯೋಜಿಸಲಾದ ಪೂಲ್ ಪಾರ್ಟಿಯ ಟಿಕೆಟ್‌ಗಳನ್ನು ಮಾರಾಟ ಮಾಡಲು ಪ್ರಾರಂಭಿಸಿವೆ. ಆದರಿಂದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೀರಿನ ಕೊರತೆಯನ್ನು ನಿಭಾಯಿಸಿ ಎಂದು ಕೇಳಿಕೊಂಡಿದ್ದಾರೆ. ಹಾಗೆಯೇ ಸಿಎಂ "ಸಿಲಿಕಾನ್‌ ಸಿಟಿಯು ದಿನಕ್ಕೆ ಸುಮಾರು 500 ಮಿಲಿಯನ್ ಲೀಟರ್ ನೀರಿನ (ಎಂಎಲ್‌ಡಿ) ಕೊರತೆಯನ್ನು ಎದುರಿಸುತ್ತಿದೆ ಮತ್ತು 2,600 ಎಂಎಲ್‌ಡಿಗಳ ಅಗತ್ಯತೆ ಮತ್ತು ಪ್ರತಿದಿನ ಸಭೆ ನಡೆಸಿ ಕ್ರಿಯಾ ಯೋಜನೆಯನ್ನು ರೂಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ " ಎಂದು ಹೇಳಿದರು. 

ಸಿಎಂ ಹೇಳಿಕೆಯ ಪ್ರಕಾರ, "ಕಾವೇರಿ ನದಿಯಿಂದ 1,470 ಎಂಎಲ್‌ಡಿ ನೀರು ಬರುತ್ತಿದ್ದು, 650 ಎಂಎಲ್‌ಡಿ ಬೋರ್‌ವೆಲ್‌ನಿಂದ ಪಡೆಯಲಾಗುತ್ತದೆ. ಬೆಂಗಳೂರಿನಲ್ಲಿ 14,000 ಬೋರ್‌ವೆಲ್‌ಗಳಿದ್ದು, 6,900 ಬತ್ತಿ ಹೋಗಿವೆ. ಜಲಮೂಲಗಳು ಅತಿಕ್ರಮಿಸಲ್ಪಟ್ಟಿವೆ. ಬೆಂಗಳೂರಿಗೆ 2,600 ಎಂಎಲ್‌ಡಿ ನೀರು ಬೇಕು. ಇದರಲ್ಲಿ 1,470 ಎಂಎಲ್‌ಡಿ ಕಾವೇರಿ ನದಿಯಿಂದ ಮತ್ತು 650 ಎಂಎಲ್‌ಡಿ ಬೋರ್‌ವೆಲ್‌ನಿಂದ ಬರುತ್ತದೆ. ನಮ್ಮಲ್ಲಿ ಸುಮಾರು 500 ಎಂಎಲ್‌ಡಿ ಕೊರತೆಯಿದೆ," ಎಂದು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News