'ಅಹಿಂದ'ಗೆ ಮುಖ್ಯಮಂತ್ರಿಯ ಬಿಗ್ ಗಿಫ್ಟ್

                            

Last Updated : Oct 31, 2017, 04:30 PM IST
'ಅಹಿಂದ'ಗೆ ಮುಖ್ಯಮಂತ್ರಿಯ ಬಿಗ್ ಗಿಫ್ಟ್ title=

ಬೆಂಗಳೂರು: ದಲಿತ ಮತ್ತು ಹಿಂದುಳಿದ ವರ್ಗಗಳ ಮಠಾಧೀಶರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಗ್ ಗಿಫ್ಟ್ ನೀಡಿದ್ದಾರೆ.

ಹಿಂದುಳಿದ ವರ್ಗದ ಸ್ವಾಮೀಜಿಗಳ ನಿಯೋಗದಿಂದ ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ ‌ನೇತೃತ್ವದಲ್ಲಿ, ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಲಾಗಿತ್ತು. ಚಿತ್ರದುರ್ಗ ಜಿಲ್ಲೆಯಿಂದ ಬಂದಿದ್ದ 40 ಸ್ವಾಮೀಜಿಗಳು ಸಿಎಂ ಬಳಿ ಜಮೀನಿಗೆ ಬೇಡಿಕೆ ಇಟ್ಟಿದ್ದರು.

ಮಠಾಧೀಶರ ಜೊತೆ ಸಮಾಲೋಚನೆ ನಡೆಸಿದ ಸಿಎಂ ಸಿದ್ದರಾಮಯ್ಯ 40 ಸ್ವಾಮಿಜಿಗಳಿಗೆ ಬೆಂಗಳೂರಿನಲ್ಲಿ ಭೂಮಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಅಹಿಂದ ಮಠಾಧೀಶರಿಗೆ ಈ ರಿತಿಯ ಒಂದು ಭಾರಿ ಗಿಫ್ಟ್ ನೀಡುವ ಮೂಲಕ ಅಹಿಂದ ಮತಗಳಿಗೆ ಸಿಎಂ ಬಲೆ ಬೀಸಿದ್ದಾರೆ.

ಸಿಎಂ ಭೇಟಿ ಬಳಿಕ ಸಚಿವ ಎಚ್. ಆಂಜನೇಯ ಮನೆಯಲ್ಲಿ ಮಠಾಧೀಶರಿಗೆ ಅದ್ದೂರಿ ಭೋಜನ ವ್ಯವಸ್ಥೆ ಮಾಡಲಾಗಿದೆ. ಸಚಿವ ಆಂಜನೇಯರ ಮನೆಗೆ ಸಿಎಂ ಸಿದ್ದರಾಮಯ್ಯ ಜೊತೆ ಸ್ವಾಮೀಜಿಗಳೂ ಸಹ ತೆರಳಲಿದ್ದಾರೆ. 

Trending News