Karnataka assembly elections 2023 : ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ : ವರುಣಾದಿಂದ ಸಿದ್ದರಾಮಯ್ಯ ಕಣಕ್ಕೆ

Congress announces names of 124 candidates : ವರುಣಾ ಮತ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡುತ್ತಿತ್ತಿರುವುದು ಸ್ಪಷ್ಟವಾಗಿದೆ. ಅಲ್ಲದೆ, ಮೊದಲ ಪಟ್ಟಿಯಲ್ಲಿ ಕೋಲಾರ ಹಾಗೂ ಬಾದಾಮಿ ಕ್ಷೇತ್ರದ ಅಭ್ಯರ್ಥಿ ಹೆಸರಿಲ್ಲ. ಸಿದ್ದರಾಮಯ್ಯ 2 ಕ್ಷೇತ್ರ ಸ್ಪರ್ಧೆ ಸುಳಿವು ಬೆನ್ನಲ್ಲೇ ಮೊದಲ ಪಟ್ಟಿಯಲ್ಲಿ ಕೋಲಾರ, ಬಾದಾಮಿಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಿಸಿರದಿರುವುದು ಕುತೂಹಲ ಮೂಡಿಸಿದೆ.

Written by - Channabasava A Kashinakunti | Last Updated : Mar 25, 2023, 01:43 PM IST
  • 2023 ರ ಕರ್ನಾಟಕ ವಿಧಾನ ಸಭೆ ಚುನಾವಣೆ
  • ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ
  • ಒಟ್ಟು 124 ಅಭ್ಯರ್ಥಿಗಳ ಹೆಸರನ್ನುಅಂತಿಮ
Karnataka assembly elections 2023 : ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ : ವರುಣಾದಿಂದ ಸಿದ್ದರಾಮಯ್ಯ ಕಣಕ್ಕೆ title=

ಬೆಂಗಳೂರು : 2023 ರ ಕರ್ನಾಟಕ ವಿಧಾನ ಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಮೊದಲ ಪಟ್ಟಿಯಲ್ಲಿ ಒಟ್ಟು 124 ಅಭ್ಯರ್ಥಿಗಳ ಹೆಸರನ್ನುಅಂತಿಮಗೊಳಿಸಿ ಪಟ್ಟಿ ಬಿಡುಗಡೆ ಮಾಡಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಳೆದು ತೂಗಿ 124 ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ವರುಣಾ ಮತ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡುತ್ತಿರುವುದು ಸ್ಪಷ್ಟವಾಗಿದೆ. ಅಲ್ಲದೆ, ಮೊದಲ ಪಟ್ಟಿಯಲ್ಲಿ ಕೋಲಾರ ಹಾಗೂ ಬಾದಾಮಿ ಕ್ಷೇತ್ರದ ಅಭ್ಯರ್ಥಿ ಹೆಸರಿಲ್ಲ. ಸಿದ್ದರಾಮಯ್ಯ 2 ಕ್ಷೇತ್ರ ಸ್ಪರ್ಧೆ ಸುಳಿವು ಬೆನ್ನಲ್ಲೇ ಮೊದಲ ಪಟ್ಟಿಯಲ್ಲಿ ಕೋಲಾರ, ಬಾದಾಮಿಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಿಸಿರದಿರುವುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ : Karnataka Covid Cases: ಕರ್ನಾಟಕದಲ್ಲಿ ಏರುತ್ತಲೇ ಇದೆ ಕೊರೊನಾ ಸೋಂಕಿತರ ಸಂಖ್ಯೆ, ಆತಂಕದಲ್ಲಿ ಆರೋಗ್ಯ ಇಲಾಖೆ

ಹಾಗೆ, ದೇವನಹಳ್ಳಿ ಕ್ಷೇತ್ರದಿಂದ ಕೆ ಎಚ್ ಮುನಿಯಪ್ಪ ಸ್ಪರ್ಧಿಸಲಿದ್ದಾರೆ. ರಾಜಾಜಿನಗರದಿಂದ ಪುಟ್ಟಣ್ಣ ಅವರಿಗೆ ಟಿಕೆಟ್ ನೀಡಲಾಗಿದೆ. ಕನಕಪುರ ಮತ ಕ್ಷೇತ್ರದಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಟಿಕೆಟ್‌ ಘೋಷಿಸಲಾಗಿದ್ದು, ದರ್ಶನ್‌ ಧ್ರುವನಾರಾಯಣಗೆ ನಂಜನಗೂಡು ಕ್ಷೇತ್ರದಿಂದ. ಇನ್ನು, ರಾಜಕೀಯ ನಿವೃತ್ತಿ ಘೋಷಿಸಿದ್ದ ತನ್ವೀರ್‌ ಸೇಠ್‌ಗೆ ಮತ್ತೆ ಟಿಕೆಟ್‌ ಘೋಷಿಸಿರುವುದು ಅಚ್ಚರಿ ಮೂಡಿಸಿದೆ. 

ಬಸವನಗುಡಿಯಿಂದ ಹಾಲಿ ಎಂಎಲ್ ಸಿ ಯುಬಿ ವೆಂಕಟೇಶಗೆ ಟಿಕೇಟ್ ನೀಡಲಾಗಿದೆ. ಸಾಗರ ಕ್ಷೇತ್ರದಲ್ಲಿ ಬೇಳೂರು ಗೋಪಾಲಕೃಷ್ಣಗೆ, ಕೊರಟಗೆರೆಗೆ ಜಿ. ಪರಮೇಶ್ವರ್, ಟಿ.ನರಸೀಪುರ ಕ್ಷೇತ್ರಕ್ಕೆ  
ಪುತ್ರನ ಬದಲಿಗೆ ಮಹಾದೇವಪ್ಪಗೆ ಟಿಕೆಟ್ ನೀಡಲಾಗಿದೆ. ಬೀದರ್ ದಕ್ಷಿಣ ಕ್ಷೇತ್ರ ಆಶೋಕ್ ಖೇಣಿ, ರಾಮನಗರ ಕ್ಷೇತ್ರದಲ್ಲಿ ಮತ್ತೆ ಇಕ್ಬಾಲ್ ಹುಸೇನ್‌ ನೀಡಲಾಗಿದೆ. ಆದ್ರೆ, ಸಂಸದ ಡಿ.ಕೆ. ಸುರೇಶ್ ಸ್ಪರ್ಧೆ ಇಲ್ಲ.

ಇಲ್ಲಿದೆ ಅಭ್ಯರ್ಥಿಗಳ ಫುಲ್ ಲಿಸ್ಟ್

ಚಿಕ್ಕೋಡಿ-ಸದಲಗ: ಗಣೇಶ್ ಹುಕ್ಕೇರಿ

ಕಾಗವಾಡ: ಭರಮಗೌಡ ಎ. ಕಗೆ

ಕುಡಚಿ: ಮಹೇಂದ್ರ ಕೆ ತಮ್ಮನ್ನವರ್

ಹುಕ್ಕೇರಿ: ಎಬಿ ಪಾಟೀಲ್

ಯಮಕನಕರಡಿ: ಸತೀಶ್ ಜಾರಕಿಹೊಳಿ

ಬೆಳಗಾವಿ ಗ್ರಾಮೀಣ: ಲಕ್ಷ್ಮಿ ಹೆಬ್ಬಾಳ್ಕರ್

ಖಾನಾಪುರ: ಡಾ.ಅಂಜಲಿ ನಿಂಬಾಳ್ಕರ್

ಬೈಲಹೊಂಗಲ: ಮಹಾಂತೇಶ್ ಶಿವಾನಂದ ಕೌಜಲಗಿ

ರಾಮದುರ್ಗ: ಅಶೋಕ್ ಎಂ ಪಟ್ಟಣ

ಜಮಖಂಡಿ: ಅನಂದ ಸಿದ್ದು ನ್ಯಾಮಗೌಡ

ಹುನಗುಂದ: ವಿಜಯನಾಂದ ಕಾಶಪ್ಪನವರ್

ಮುದ್ದೇಬಿಹಾಳ: ಸಿಎಸ್​ ನಾಡಗೌಡ

ಬಸವನ ಬಾಗೇವಾಡಿ: ಶಿವಾನಂದ ಪಾಟೀಲ್

ಬಬಲೇಶ್ವರ: ಎಂಬಿ ಪಾಟೀಲ್

ಇಂಡಿ: ಯಶವಂತರಾಯಗೌಡ ಪಾಟೀಲ್

ಜೇವರ್ಗಿ: ಅಜಯ್ ಧರಂಸಿಂಗ್

ಸುರಪುರ: ರಾಜಾವೆಂಕಟಪ್ಪ ನಾಯಕ್

ಶಹಪುರ: ಶರಣಬಸಪ್ಪ ಗೌಡ

ಚಿತಾಪುರ: ಪ್ರಿಯಾಂಕ್ ಖರ್ಗೆ

ಸೇಡಂ: ಶಂಕರಪ್ರಕಾಶ್ ಪಾಟೀಲ್

ಚಿಂಚೊಳ್ಳಿ: ಸುಭಾಶ್ ವಿ ರಾಥೋಡ್

ಗುಲ್ಬರ್ಗಾ ಉತ್ತರ: ಖನೀಜ ಫಾತಿಮಾ

ಆಳಂದ: ಬಿಆರ್ ಪಾಟೀಲ್

ಹುಮ್ನಾಬಾದ್: ರಾಜಶೇಖರ್ ಬಿ ಪಾಟೀಲ್

ಬೀದರ್ ದಕ್ಷಿಣ: ಅಶೋಕ್ ಖೇಣಿ

ಬೀದರ್: ರಹೀಂ ಖಾನ್

ಭಾಲ್ಕಿ: ಈಶ್ವರ್ ಖಂಡ್ರೆ

ರಾಯಚೂರು ಗ್ರಾಮೀಣ: ಬಸನಗೌಡ ದದ್ದಲ್

ಮಸ್ಕಿ: ಬಸನಗೌಡ ತುರ್ವಿಹಾಳ

ಕುಷ್ಟಗಿ: ಅಮರೇಗೌಡ ಪಾಟೀಲ್ ಬಯ್ಯಾಪುರ

ಕನಕಗಿರಿ: ಶಿವರಾಜ್ ತಂಗಡಗಿ

ಯಲಬುರ್ಗ: ಬಸವರಾಜ್ ರಾಯರೆಡ್ಡಿ

ಕೊಪ್ಪಳ: ಕೆ.ರಾಘವೇಂದ್ರ

ಗದಗ: ಹೆಚ್ ಕೆ ಪಾಟೀಲ್

ರೋಣ: ಜಿಎಸ್ ಪಾಟೀಲ್

ಹುಬ್ಬಳ್ಳಿ-ಧಾರವಾಡ (ಪೂರ್ವ): ಪ್ರಸಾದ್ ಅಬ್ಬಯ್ಯ

ಹಳಿಯಾಳ: ಆರ್ ವಿ ದೇಶಪಾಂಡೆ

ಕಾರವಾರ: ಸತೀಶ್ ಸೈಲ್

ಭಟ್ಕಳ: ಎಂ ಸುಬ್ಬವೈದ್ಯ

ಹಾನಗಲ್: ಶ್ರೀನಿವಾಸ್ ಮಾನೆ

ಹಾವೇರಿ:  ರುದ್ರಪ್ಪ ಲಮಾಣಿ

ಬ್ಯಾಡಗಿ: ಬಸವರಾಜ್ ಎನ್ ಶಿವಣ್ಣನ್ನರ್

ಹಿರೇಕೆರೂರು: ಯುಬಿ ಬಣಕರ್

ರಾಣೇಬೆನ್ನೂರು: ಪ್ರಕಾಶ್ ಕೆ ಕೋಳಿವಾಡ

ಹಡಗಲಿ: ಪಿಟಿ ಪರಮೇಶ್ವರ್ ನಾಯಕ್

ಹಗರಿಬೊಮ್ಮನಹಳ್ಳಿ: ಭೀಮಾ ನಾಯಕ್​

ವಿಜಯನಗರ: ಹೆಚ್ ಆರ್ ಗವಿಯಪ್ಪ

ಕಂಪ್ಲಿ: ಜೆಎನ್ ಗಣೇಶ್

ಬಳ್ಳಾರಿ: ಬಿ ನಾಗೇಂದ್ರ

ಸಂಡೂರು: ಇ ತುಕಾರಾಂ

ಚಳ್ಳಕೆರೆ: ಟಿ ರಘುಮೂರ್ತಿ

ಹಿರಿಯೂರು: ಡಿ ಸುಧಾಕರ್

ಹೊಸದುರ್ಗ: ಗೋವಿಂದಪ್ಪ ಬಿ.ಜಿ

ದಾವಣಗೆರೆ ಉತ್ತರ: ಎಸ್ ಎಸ್ ಮಲ್ಲಿಕಾರ್ಜುನ್

ದಾವಣಗೆರೆ ದಕ್ಷಿಣ: ಶಾಮನೂರು ಶಿವಶಂಕರಪ್ಪ

ಮಾಯಕೊಂಡ: ಕೆಎಸ್ ಬಸವರಾಜು

ಭದ್ರಾವತಿ: ಸಂಗಮೇಶ್ವರ್ ಬಿಕೆ

ಸೊರಬ: ಮಧು ಬಂಗಾರಪ್ಪ

ಸಾಗರ: ಗೋಪಾಲಕೃಷ್ಣ

ಬೈಂದೂರು: ಕೆ ಗೋಪಾಲ ಪೂಜಾರಿ

ಕುಂದಾಪುರ: ದಿನೇಶ್ ಹೆಗಡೆ

ಕಾಪು: ವಿನಯ ಕುಮಾರ್ ಸೊರಕೆ

ಶೃಂಗೇರಿ: ಟಿಡಿ ರಾಜೇಗೌಡ

ಚಿಕ್ಕನಾಯಕನಹಳ್ಳಿ: ಕಿರಣ್ ಕುಮಾರ್

ತಿಪಟೂರು: ಕೆ ಷಡಕ್ಷರಿ

ತುರುವೆಕೆರೆ: ಕಾಂತರಾಜ್ ಬಿಎಂ

ಕುಣಿಗಲ್: ಹೆಚ್​ ಡಿ ರಂಗನಾಥ್

ಕೊರಟಗೆರೆ: ಜಿ ಪರಮೇಶ್ವರ್

ಶಿರಾ: ಟಿಬಿ ಜಯಚಂದ್ರ

ಪಾವಗಡ: ಹೆಚ್​ ವಿ ವೆಂಕಟೇಶ್

ಮಧುಗಿರಿ: ಕೆಎನ್ ರಾಜಣ್ಣ

ಗೌರಿಬಿದನೂರು: ಶಿವಶಂಕರ್ ರೆಡ್ಡಿ

ಬಾಗೇಪಲ್ಲಿ: ಎಸ್ ಎನ್ ಸುಬ್ಬಾರೆಡ್ಡಿ

ಚಿಂತಾಮಣಿ: ಎಂ ಸಿ ಸುಧಾಕರ್

ಶ್ರೀನಿವಾಸಪುರ: ಕೆಆರ್ ರಮೇಶ್ ಕುಮಾರ್

ಕೆಜಿಎಫ್​: ರೂಪಕಲಾ ಎಂ

ಬಂಗಾರಪೇಟೆ: ಎಸ್ ಎನ್ ನಾರಾಯಣಸ್ವಾಮಿ

ಮಾಲೂರು: ಕೆವೈ ನಂಜೇಗೌಡ

ಬ್ಯಾಟರಾಯನಪುರ: ಕೃಷ್ಣ ಬೈರೇಗೌಡ

ಆರ್ ಆರ್ ನಗರ: ಕುಸುಮಾ

ಮಲ್ಲೇಶ್ವರಂ - ಅನೂಪ್ ಅಯ್ಯಂಗಾರ್

ಹೆಬ್ಬಾಳ - ಸುರೇಶ್ ಬಿ.ಎಸ್

ಸರ್ವಜ್ಞ ನಗರ - ಕೆ. ಜೆ. ಜಾರ್ಜ್

ಶಿವಾಜಿನಗರ - ರಿಜ್ವಾನ್ ಆರ್ಷದ್

ಶಾಂತಿನಗರ - ಎನ್. ಎ. ಹ್ಯಾರಿಸ್

ಗಾಂಧಿನಗರ - ದಿನೇಶ್ ಗುಂಡೂರಾವ್

ರಾಜಾಜಿನಗರ - ಪುಟ್ಟಣ್ಣ

ಗೋವಿಂದರಾಜ ನಗರ- ಪ್ರಿಯಾಕೃಷ್ಣಾ

ವಿಜಯ ನಗರ - ಎಂ. ಕೃಷ್ಣಪ್ಪ

ಚಾಮರಾಜಪೇಟೆ - ಜಮೀರ್ ಅಹ್ಮದ್ ಖಾನ್

ಬಸವನಗುಡಿ - ಯು. ಬಿ. ವೆಂಕಟೇಶ್

ಬಿಟಿಎಂ ಲೇಔಟ್ - ರಾಮಲಿಂಗಾ ರೆಡ್ಡಿ

ಜಯನಗರ - ಶ್ರೀಮತಿ ಸೌಮ್ಯ ಆರ್

ಮಹದೇವಪುರ - ನಾಗೇಶ್ ಟಿ

ಆನೇಕಲ್ - ಬಿ ಶಿವಣ್ಣ

ಹೊಸಕೋಟೆ - ಶರತ್ ಕುಮಾರ್ ಬಚ್ಚೇಗೌಡ

ದೇವನಹಳ್ಳಿ - ಕೆ. ಎಚ್. ಮುನಿಯಪ್ಪ

ದೊಡ್ಡಬಳ್ಳಾಪುರ - ಟಿ. ವೆಂಕಟರಾಮಯ್ಯ

ನೆಲಮಂಗಲ - ಶ್ರೀನಿವಾಸಯ್ಯ ಎನ್

ಮಾಗಡಿ - ಎಚ್. ಸಿ. ಬಾಲಕೃಷ್ಣ

ರಾಮನಗರ-ಇಕ್ಬಾಲ್ ಹುಸೈನ್ ಎಚ್​.ಎ

ಕನಕಪುರ-ಡಿ.ಕೆ. ಶಿವಕುಮಾರ್

ಮಳವಳ್ಳಿ ಎಸ್​.ಸಿ- ಪಿ.ಎಂ. ನರೇಂದ್ರಸ್ವಾಮಿ

ಶ್ರೀರಂಗಪಟ್ಟಣ-ಎ.ಬಿ. ರಮೇಶ್ ಬಂಡಿಸಿದ್ದೇಗೌಡ

ನಾಗಮಂಗಲ-ಎನ್. ಚೆಲುವರಾಯಸ್ವಾಮಿ

ಹೊಳೆನರಸೀಪುರ-ಶ್ರೇಯಸ್ ಎಂ.ಪಟೇಲ್

ಸಕಲೇಶಪುರ(ಎಸ್​ಸಿ)-ಮುರಳಿ ಮೋಹನ್

ಬೆಳ್ತಂಗಡಿ-ರಕ್ಷಿತ್ ಶಿವರಾಮ್

ಮೂಡಬಿದಿರೆ-ಮಿಥುನ್ ಎಮ್. ರೈ.

ಮಂಗಳೂರು-ಯು.ಟಿ. ಅಬ್ದುಲ್ ಖಾದರ್ ಅಲಿ ಫರೀದ್

ಬಂಟ್ವಾಳ-ರಮನಾಥ್ ರೈ ಬಿ

ಸುಳ್ಯ- ಎಸ್​ಸಿ- ಕೃಷ್ಣಪ್ಪ ಜಿ

ಬವಿರಾಜಪೇಟೆ - ಎ.ಎಸ್ ಪೊನ್ನಣ್ಣ

ಪಿರಿಯಾಪಟ್ಟಣ-ಕೆ. ವೆಂಕಟೇಶ್

ಕೃಷ್ಣರಾಜನಗರ-ಡಿ. ರವಿಶಂಕರ್

ಹುಣಸೂರು-ಎಚ್​.ಪಿ ಮಂಜುನಾಥ್

ಎಚ್​ಡಿ ಕೋಟೆ-ಎಸ್​ಟಿ-ಅನಿಲ್ ಕುಮಾರ್. ಸಿ

ನಂಜನಗೂರು-ಎಸ್​ಸಿ-ದರ್ಶನ್ ಧ್ರುವನಾರಾಯಣ

ನರಸಿಂಹರಾಜ-ತನ್ವೀರ್ ಸೇಠ್

ವರುಣ-ಸಿದ್ಧರಾಮಯ್ಯ

ಇದನ್ನೂ ಓದಿ : "ಸಮುದಾಯಗಳ ನಡುವೆ ವೈಮನಸ್ಸು ಬೆಳೆಯುವಂತೆ ಮಾಡುವುದು ಬಿಜೆಪಿಯ ದುರುದ್ದೇಶ"

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News