ಯಡಿಯೂರಪ್ಪರ ಕೋಟ್ಯಾಂತರ ರೂ. ಹಗರಣದ ದಾಖಲೆ ಬಿಡುಗಡೆ ಮಾಡಿದ ಕಾಂಗ್ರೆಸ್

ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ  RNSIL ಇನ್ಫಾಸ್ಟಕ್ಚರ್ ನಿಂದ ಭದ್ರಾ ಮೇಲ್ದಂಡೆ ಯೋಜನೆಗೆ ಲಂಚ ತೆಗೆದುಕೊಂಡಿರುವುದನ್ನು ಐಟಿ ಇಲಾಖೆ ತೋರಿಸುತ್ತಿದೆ ಎಂದ ಕಾಂಗ್ರೆಸ್.

Last Updated : Apr 6, 2018, 03:58 PM IST
ಯಡಿಯೂರಪ್ಪರ ಕೋಟ್ಯಾಂತರ ರೂ. ಹಗರಣದ ದಾಖಲೆ ಬಿಡುಗಡೆ ಮಾಡಿದ ಕಾಂಗ್ರೆಸ್ title=

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಸಂಬಂಧಿಸಿದಂತೆ ಬಹುಕೋಟಿ ಹಗರಣದ ಆರೋಪ ಮಾಡಿರುವ ರಾಜ್ಯ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ಆ ಸಂಬಂಧ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ  RNSIL ಇನ್ಫಾಸ್ಟಕ್ಚರ್ ನಿಂದ ಭದ್ರಾ ಮೇಲ್ದಂಡೆ ಯೋಜನೆಗೆ 2009-10 ರಲ್ಲಿ  ಒಂದು ಕೋಟಿ,  2010-11 ರಲ್ಲಿ ಒಂದು ಕೋಟಿ ಹಾಗೂ 2011-12 ರಲ್ಲಿ ಎರಡು ಕೋಟಿ ಲಂಚ ಪಡೆದಿರುವುದನ್ನು ಆದಾಯ ತೆರಿಗೆ ಇಲಾಖೆ ದಾಖಲೆಗಳು ತೋರಿಸುತ್ತಿವೆ ಎಂದು ಎಂಎಲ್ ಸಿ ಉಗ್ರಪ್ಪ ಯಡಿಯೂರಪ್ಪ ವಿರುದ್ಧದ ಹಗರಣದ ಬಗ್ಗೆ ತಿಳಿಸಿದ್ದಾರೆ.

ಬಿ.ಎಸ್. ಯಡಿಯೂರಪ್ಪನವರೇ ಇಷ್ಟೊಂದು ಹಣ ಪಡೆದಿದ್ದಾರೆಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಈ ಬಗ್ಗೆ ಯಡಿಯೂರಪ್ಪ ವಿರುದ್ಧ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ಉಗ್ರಪ್ಪ ಪ್ರಶ್ನಿಸಿದ್ದಾರೆ.

Trending News