ಸೇವಾ ನ್ಯೂನ್ಯತೆಗೈದ ಗೋಲ್ಡನ್ ಹೋಮ್ಸ್ ಬಿಲ್ಡರ್ಸ್‍ಗೆ ಖರೀದಿ ಪತ್ರ ಬರೆದುಕೊಡಲು ಕೋರ್ಟ್ ಆದೇಶ

ಗದಗದ ನಿವಾಸಿಗಳಾದ ಬಸವರಾಜ ಕಲ್ಯಾಣಿ ಮತ್ತು ಅಶೋಕ ಜೈನ್‍ರವರು 2010ನೇ ಇಸವಿಯಲ್ಲಿ ಹುಬ್ಬಳ್ಳಿಯ ಗೋಲ್ಡನ್ ಹೋಮ್ಸ್ ಬಿಲ್ಡರ್ಸ್ ಕಡೆಯಿಂದ ರೂ.20 ಲಕ್ಷ 80 ಸಾವಿರ ರೂಪಾಯಿಗಳಿಗೆ ಒಂದರಂತೆ ತಲಾ ಒಂದು ಪ್ಲ್ಯಾಟ ಖರೀದಿಸಿದ್ದರು.ಈ ಬಗ್ಗೆ ಹಣ ಪಡೆದು ಗೋಲ್ಡನ್ ಹೋಮ್ಸ್‍ನವರು ಖರೀದಿ ಒಪ್ಪಂದ ಪತ್ರ ಮಾಡಿಕೊಟ್ಟಿದ್ದರು.

Written by - Manjunath N | Last Updated : Dec 11, 2023, 10:32 PM IST
  • ದೂರುದಾರ ಪೂರ್ತಿ ಹಣಕೊಟ್ಟ ಮೇಲೆ ಗೋಲ್ಡನ್ ಹೋಮ್ಸ್ ಬಿಲ್ಡ್‍ರ್ಸ್‍ರವರು ಪ್ಲ್ಯಾಟ ನಿರ್ಮಿಸಿ ಸ್ವಾಧೀನತೆ ಕೊಟ್ಟಿದ್ದಾರೆ.
  • ಆದರೆ ಅವರು ನೋಂದಾಯಿತ ಕ್ರಯಪತ್ರ ಬರೆದುಕೊಡದೇ ಇರಲು ಯಾವುದೇ ಸಕಾರಣಗಳು ಇಲ್ಲ.
 ಸೇವಾ ನ್ಯೂನ್ಯತೆಗೈದ ಗೋಲ್ಡನ್ ಹೋಮ್ಸ್ ಬಿಲ್ಡರ್ಸ್‍ಗೆ ಖರೀದಿ ಪತ್ರ ಬರೆದುಕೊಡಲು ಕೋರ್ಟ್ ಆದೇಶ title=

ಧಾರವಾಡ : ಗದಗದ ನಿವಾಸಿಗಳಾದ ಬಸವರಾಜ ಕಲ್ಯಾಣಿ ಮತ್ತು ಅಶೋಕ ಜೈನ್‍ರವರು 2010ನೇ ಇಸವಿಯಲ್ಲಿ ಹುಬ್ಬಳ್ಳಿಯ ಗೋಲ್ಡನ್ ಹೋಮ್ಸ್ ಬಿಲ್ಡರ್ಸ್ ಕಡೆಯಿಂದ ರೂ.20 ಲಕ್ಷ 80 ಸಾವಿರ ರೂಪಾಯಿಗಳಿಗೆ ಒಂದರಂತೆ ತಲಾ ಒಂದು ಪ್ಲ್ಯಾಟ ಖರೀದಿಸಿದ್ದರು.ಈ ಬಗ್ಗೆ ಹಣ ಪಡೆದು ಗೋಲ್ಡನ್ ಹೋಮ್ಸ್‍ನವರು ಖರೀದಿ ಒಪ್ಪಂದ ಪತ್ರ ಮಾಡಿಕೊಟ್ಟಿದ್ದರು.

ಇದನ್ನೂ ಓದಿ: ಶಾಸಕರನ್ನ ಖರೀದಿ ವಸ್ತುಗಳನ್ನಾಗಿ ಮಾಡುವ ವಾತಾವರಣ ಸೃಷ್ಟಿ ಮಾಡ್ತಾ ಇದ್ದಾರೆ- ಕಾನೂನು ಸಚಿವ ಎಚ್‌ಕೆ‌ಪಿ

ಪ್ಲ್ಯಾಟ ಕಟ್ಟಿಸಿ ಸ್ವಾಧೀನತೆಯನ್ನೂ ಕೊಟ್ಟಿದ್ದರು. ಆದರೆ ಸದರಿ ಬಿಲ್ಡ್‍ರ್ಸ್‍ರವರು ದೂರುದಾರರಿಗೆ ನೋಂದಾಯಿತ ಕ್ರಯಪತ್ರ ಮಾಡಿಕೊಟ್ಟಿರಲಿಲ್ಲ. ಹಲವಾರು ಬಾರಿ ಇಬ್ಬರೂ ದೂರುದಾರರು ವಿನಂತಿಸಿದರೂ ಏನೂ ಪ್ರಯೋಜನ ಆಗಿರಲಿಲ್ಲ ಅಂತಹ ಗೋಲ್ಡನ್ ಹೋಮ್ಸ್‍ರವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಮತ್ತು ತಮಗೆ ಎದುರುದಾರರು ಮೋಸ ಮಾಡಿದ್ದಾರೆ ಅಂತಾ ಹೇಳಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:16/08/2023 ರಂದು ದೂರು ಸಲ್ಲಿಸಿದ್ದರು.

ಇದನ್ನೂ ಓದಿ: ಬಗೆ ಬಗೆಯ ಕಡಲೆಕಾಯಿ..ಕೆಜಿಗೆ 80 ರೂಪಾಯಿ

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ  ಈಶಪ್ಪ.ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಅವರು ದೂರುದಾರ ಪೂರ್ತಿ ಹಣಕೊಟ್ಟ ಮೇಲೆ ಗೋಲ್ಡನ್ ಹೋಮ್ಸ್ ಬಿಲ್ಡ್‍ರ್ಸ್‍ರವರು ಪ್ಲ್ಯಾಟ ನಿರ್ಮಿಸಿ ಸ್ವಾಧೀನತೆ ಕೊಟ್ಟಿದ್ದಾರೆ. ಆದರೆ ಅವರು ನೋಂದಾಯಿತ ಕ್ರಯಪತ್ರ ಬರೆದುಕೊಡದೇ ಇರಲು ಯಾವುದೇ ಸಕಾರಣಗಳು ಇಲ್ಲ. ಆದರೆ ನೋಂದಾಯಿತ ಕ್ರಯಪತ್ರ ಬರೆದುಕೊಡದ ಅವರ ನಡಾವಳಿಕೆ ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ತೀರ್ಪು ನೀಡಿದ 30 ದಿವಸಗಳ ಒಳಗಾಗಿ ದೂರುದಾರರ ಪರವಾಗಿ ನೋಂದಾಯಿತ ಕ್ರಯಪತ್ರ ಮಾಡಿಕೊಡುವಂತೆ ಎದುರುದಾರರಿಗೆ ಆದೇಶಿಸಿದೆ. ಅದಕ್ಕೆ ತಪ್ಪಿದ್ದಲ್ಲಿ ಕೋರ್ಟ್ ಕಮೀಷನರ್ ಮೂಲಕ ದೂರುದಾರರು ತನ್ನ ಸ್ವಂತ ಖರ್ಚಿನಲ್ಲಿ ನೋಂದಾಯಿತ ಕ್ರಯಪತ್ರ ಪಡೆಯಲು ಅರ್ಹರಿದ್ದಾರೆಂದು ಆಯೋಗ ತನ್ನ ತೀರ್ಪಿನಲ್ಲಿ ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News