ಬಿಎಂಟಿಸಿ ಚಾಲಕನ ಮೇಲೆ ಕಿಡಿಗೇಡಿಯೊಬ್ಬನಿಂದ ಮಾರಣಾಂತಿಕ ಹಲ್ಲೆ

               

Last Updated : Nov 16, 2017, 01:07 PM IST
ಬಿಎಂಟಿಸಿ ಚಾಲಕನ ಮೇಲೆ ಕಿಡಿಗೇಡಿಯೊಬ್ಬನಿಂದ ಮಾರಣಾಂತಿಕ ಹಲ್ಲೆ title=

ಬೆಂಗಳೂರು: ಕರ್ತವ್ಯ ನಿರತ ಬಿಎಂಟಿಸಿ ಚಾಲಕನ ಮೇಲೆ ಕಿಡಿಗೇಡಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬುಧವಾರ ನಡೆದಿದೆ.

ನಗರದ ಪೀಣ್ಯ ಬಳಿ 27 ವರ್ಷದ ಭೂಪಾಲ್ ಎಂಬಾತ ಬಿಎಂಟಿಸಿ ಚಾಲಕ ಮಹೇಶ್ ಜೋರಾಗಿ ಹಾರ್ನ್ ಮಾಡಿದನೆಂದು ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಗಂಭೀರ ಸ್ಥತಿಯಲ್ಲಿದ್ದ ಚಾಲಕ ಮಹೇಶ್ ಮಲ್ಲೇಶ್ವರಂನ ನಾರಾಯಣ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳಿಯರು ಹಲ್ಲೆ ಮಾಡಿದ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ರಾಜಗೋಪಾಲನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇವಲ ಹಾರ್ನ್ ವಿಷಯಕ್ಕೆ ಒಬ್ಬ ವ್ಯಕ್ತಿಯ ಮೇಲೆ ಈ ರೀತಿ ಮಾರಣಾಂತಿಕ ಹಲ್ಲೆ ನಡೆಸಿರುವುದು ಅಮಾನವೀಯ ಸಂಗತಿಯಾಗಿದೆ.

Trending News