ಪಾರಂಪರಿಕ ಕಟ್ಟಡಗಳ ಮೇಲೆ ಜಂಬೂಸವಾರಿ ವೀಕ್ಷಿಸದಂತೆ ಪಾಲಿಕೆ ಆಯುಕ್ತರ ಮನವಿ

ದಸರಾ ವೇಳೆ ಸ್ವಚ್ಛತಾ ಮತ್ತು ಸುರಕ್ಷತೆ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ.

Last Updated : Oct 18, 2018, 01:31 PM IST
ಪಾರಂಪರಿಕ ಕಟ್ಟಡಗಳ ಮೇಲೆ ಜಂಬೂಸವಾರಿ ವೀಕ್ಷಿಸದಂತೆ ಪಾಲಿಕೆ ಆಯುಕ್ತರ ಮನವಿ title=

ಮೈಸೂರು:  ಮೈಸೂರು ದಸರಾ ಮಹೋತ್ಸವ ಹಿನ್ನೆಲೆ, ರಾಜ ಮಾರ್ಗದಲ್ಲಿ ಪಾರಂಪರಿಕ ಕಟ್ಟಡಗಳ ಮೇಲೆ ಜಂಬೂಸವಾರಿ ವೀಕ್ಷಿಸದಂತೆ ಪಾಲಿಕೆ ಆಯುಕ್ತ ಜಗದೀಶ್ ಮನವಿ ಮಾಡಿದ್ದಾರೆ.

ಈ ಬಗ್ಗೆ ಸುದ್ಧಿಗೋಷ್ಠಿ ನಡೆಸಿ ಬುಧವಾರ ಮಾತನಾಡಿದ ಪಾಲಿಕೆ ಆಯುಕ್ತ ಜಗದೀಶ್, ದಸರಾ ವೇಳೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ, ಸೌಹಾರ್ದಯುತವಾಗಿ ವರ್ತಿಸಿ ಎಂದರಲ್ಲದೆ ದೇವರಾಜ ಮಾರುಕಟ್ಟೆ ಕಾವೇರಿ ಎಂಪೋರಿಯಂ ಕಟ್ಟಡ ಸೇರಿದಂತೆ  ಜಂಬೂಸವಾರಿ ತೆರಳುವ ರಾಜಮಾರ್ಗದಲ್ಲಿ  ದುಸ್ಥಿಯಲ್ಲಿರುವ ಕಟ್ಟಡಗಳಿವೆ ಹಾಗಾಗಿ ಸಾರ್ವಜನಿಕರು, ಪ್ರವಾಸಿಗರು ಹಳೆಯ ಕಟ್ಟಡಗಳ ಮೇಲೆ ನಿಂತು ಜಂಬೂಸವಾರಿ ವೀಕ್ಷಿಸ ಬೇಡಿ ಎಂದು ಮನವಿ ಮಾಡಿದರು. ಪಾಲಿಕೆ ವತಿಯಿಂದ ಈಗಾಗಲೇ ಸೂಚನಾ ಫಲಕಗಳನ್ನೂ ಅಳವಡಿಸಿದೆ ಎಂದರು.

Trending News