ಮದರಸದಲ್ಲಿ ಶಿಕ್ಷಣ ಇಲಾಖೆಯ ಪಠ್ಯ ಬೇಡಿಕೆ.. ಆಧಾರವಿಲ್ಲದ ಟಿಪ್ಪು ಸಂಗತಿಗಳಿಗೆ ಕೊಕ್!

ಮದರಸಗಳಿಂದ ಕಲಿತ ಮಕ್ಕಳಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪೋಷಕರು ತಿಳಿಸಿರುವುದಾಗಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು. 

Written by - Prashobh Devanahalli | Edited by - Chetana Devarmani | Last Updated : Apr 19, 2022, 12:50 PM IST
  • ಮದರಸಗಳಿಂದ ಕಲಿತ ಮಕ್ಕಳಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆ ಮಾಡಲು ಸಾಧ್ಯವಾಗುತ್ತಿಲ್ಲ
  • ಮದರಸದಲ್ಲಿ ಸ್ಪರ್ಧಾತ್ಮಕ ಜಗತ್ತಿಗೆ ಬೇಕಾದ ಶಿಕ್ಷಣ ಸಿಗುತ್ತಿಲ್ಲ ಎಂದು ಮದರಸಕ್ಕೆ ಹೋಗುವ ಮಕ್ಕಳ ಪೋಷಕರೇ ಹೇಳಿದ್ದಾರೆ
  • ಆದರೆ ಮದರಸಗಳಿಂದ ನಿಮ್ಮ ಶಿಕ್ಷಣ ನೀಡಿ ಎಂದು ಬೇಡಿಕೆ ಬಂದಿಲ್ಲ
  • ಆ ರೀತಿ ಮನವಿ ಬಂದರೆ ಮುಂದೆ ನೋಡೋಣ
  • ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆ
ಮದರಸದಲ್ಲಿ ಶಿಕ್ಷಣ ಇಲಾಖೆಯ ಪಠ್ಯ ಬೇಡಿಕೆ.. ಆಧಾರವಿಲ್ಲದ ಟಿಪ್ಪು ಸಂಗತಿಗಳಿಗೆ ಕೊಕ್! title=
ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಬೆಂಗಳೂರು: ಮದರಸಗಳಿಂದ ಕಲಿತ ಮಕ್ಕಳಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪೋಷಕರು ತಿಳಿಸಿರುವುದಾಗಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು. ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ಮದರಸದಲ್ಲಿ ಸ್ಪರ್ಧಾತ್ಮಕ ಜಗತ್ತಿಗೆ ಬೇಕಾದ ಶಿಕ್ಷಣ ಸಿಗುತ್ತಿಲ್ಲ ಎಂದು ಮದರಸಕ್ಕೆ ಹೋಗುವ ಮಕ್ಕಳ ಪೋಷಕರೇ ಹೇಳಿದ್ದಾರೆ. ಮದರಸಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಆದರೆ ಮದರಸಗಳಿಂದ ನಿಮ್ಮ ಶಿಕ್ಷಣ ನೀಡಿ ಎಂದು ಬೇಡಿಕೆ ಬಂದಿಲ್ಲ. ಆ ರೀತಿ ಮನವಿ ಬಂದರೆ ಮುಂದೆ ನೋಡೋಣ ಎಂದು ಸ್ಪಷ್ಟಪಡಿಸಿದರು. 

ಇದನ್ನೂ ಓದಿ: "ಆಪರೇಷನ್ ಕಮಲವೆಂಬ ಅನೈತಿಕ ಕೂಸಿನ ಬೇನಾಮಿ ಅಪ್ಪ"

ಟಿಪ್ಪು ಸುಲ್ತಾನ್ ಸಂಗತಿ ಪಠ್ಯದಲ್ಲಿ ಪರಿಷ್ಕರಣೆ:

ಟಿಪ್ಪು ಬಗ್ಗೆ ಅಪ್ಪಚ್ಚು ರಂಜನ್ ಡಿಮ್ಯಾಂಡ್ ಇದೆ. ಟಿಪ್ಪು ಪಾಠವನ್ನ ಕೈ ಬಿಡಿ ಎಂದು ಹೇಳಿದ್ದಾರೆ. ಕೈ ಬಿಡದೇ ಹೋದರೆ ಅವರ ಎಲ್ಲ ಮುಖ ತೋರಿಸಿ ಎಂದು ಮನವಿ ಮಾಡಿದ್ದಾರೆ. ಜೊತೆಗೆ ಕೂರ್ಗ್ ದೌರ್ಜನ್ಯದ ಬಗ್ಗೆ ಮತ್ತು ಕನ್ನಡ ವಿರೋಧಿತನವನ್ನ ತೋರಿಸಿ ಎಂದಿದ್ದಾರೆ. ಈಗ ಸದ್ಯಕ್ಕೆ ನಾವು ಪಠ್ಯದಲ್ಲಿ ಆಧಾರವಿಲ್ಲದ ಅಂಶಗಳನ್ನ ತೆಗೆದಿದ್ದೇವೆ. ಆದರೆ ಟಿಪ್ಪು ಪಾಠವನ್ನ ನಾವು ತೆಗೆದಿಲ್ಲ ಎಂದರು.

2022-23 ಶೈಕ್ಷಣಿಕ ವರ್ಷದಿಂದ ನೀತಿ ಪಾಠದಲ್ಲಿ ಮಹಾಭಾರತ ಅಳವಡಿಕೆ:

2022-23 ಶೈಕ್ಷಣಿಕ ವರ್ಷದಿಂದ ನೀತಿ ಪಾಠದಲ್ಲಿ ರಾಮಾಯಣ, ಭಗವದ್ಗೀತೆ, ಮಹಾಭಾರತ ಸೇರಿಸಲಾಗುವುದು. ಇದರ ಜೊತೆಗೆ ಯಾವುದೇ ಧರ್ಮ ಆಗಿರಲಿ ಅದರ ಉತ್ತಮ ನೈತಿಕ ವಿಚಾರಗಳನ್ನ ನೀತಿ ಪಠ್ಯದಲ್ಲಿ ಸೇರಿಸುತ್ತೇವೆ. ಆದರೆ ಯಾವ ಧರ್ಮದ ಮಕ್ಕಳು ಶಾಲೆಗೆ ಬರುತ್ತಾರೆ ಹಾಗೂ ಯಾವ ವಿಷಯಗಳ ಬೇಡಿಕೆ ಇಡುತ್ತಾರೆ ಅದನ್ನು ನೀತಿ ಪಾಠದಲ್ಲಿ ಸೇರಿಸುತ್ತೇವೆ ಎಂದು ಬಿ.ಸಿ.ನಾಗೇಶ್‌ ಹೇಳಿದರು. 

ದ್ವಿತೀಯ ಪಿಯುಸಿ ಪರೀಕ್ಷೆ ವೇಳೆ ಸೂಚಕ ವಸ್ತ್ರ ಧರಿಸಲು ಅವಕಾಶ ಇಲ್ಲ:

ದ್ವಿತೀಯ ಪಿಯುಸಿ ಪರೀಕ್ಷೆ ಇದೇ 22ರಿಂದ ಆರಂಭವಾಗಲಿದ್ದು, ಹಿಜಾಬ್ ಸೇರಿ ಯಾವುದೇ ಧಾರ್ಮಿಕ ಸೂಚಕ ವಸ್ತ್ರ ಧರಿಸಲು ಅವಕಾಶ ಇಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು. ಒಟ್ಟು 1076 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 68,42,255 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದಾರೆ. 

ಇದನ್ನೂ ಓದಿ: "ಹುಬ್ಬಳ್ಳಿಯಲ್ಲಿ ಕಿಡಿಗೇಡಿಗಳ ಜತೆ ಅಮಾಯಕರನ್ನೂ ಬಂಧಿಸಿರುವ ಬಗ್ಗೆ ನನಗೆ ಮಾಹಿತಿ ಇದೆ"

ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗಟ್ಟಲು ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ಈ ಹಿಂದಿನ ಅನುಭವಗಳ ಆಧಾರದಲ್ಲಿ ಸೋರಿಕೆ ತಡೆಗೆ ಕ್ರಮ ತೆಗೆದುಕೊಂಡಿದ್ದೇವೆ. ಅಲ್ಲದೇ ಕಾಪಿ ಮಾಡುವುದನ್ನು ತಡೆಯಲು ತಡೆಯಲು 2152 ಜಾಗೃತದಳ, 858 ತಾಲ್ಲೂಕು ಜಾಗೃತ ದಳ ಮತ್ತು 64 ಜಿಲ್ಲಾ ಜಾಗೃತ ದಳ ಕಾರ್ಯ ನಿರ್ವಹಿಸಲಿವೆ. ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ಪ್ರದೇಶದಲ್ಲಿ 144ನೇ ಸೆಕ್ಷನ್ ವಿಧಿಸಲಾಗುವುದು ಎಂದು  ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News