HD Kumaraswamy : ಸಿದ್ದರಾಮಯ್ಯಗೆ ಭರ್ಜರಿ ಟಾಂಗ್ ಕೊಟ್ಟ ಕುಮಾರಸ್ವಾಮಿ!

ನಮ್ಮ ಪಕ್ಷದ ಬಗ್ಗೆ ಒಂದೂ ಸೀಟು ಗೆಲ್ಲಲ್ಲ ಅನ್ನೋದು ರಾಜಕೀಯವಾಗಿ ಏನೇನೂ ತಿಳಿವಳಿಕೆ ಇಲ್ಲದ ವ್ಯಕ್ತಿ ಹೇಳುವ ಮಾತು. ನಾವುಗಳೆಲ್ಲ ತಂತ್ರಗಾರಿಕೆ ಮಾಡಿ ಸೋಲಿಸುತ್ತೇವೆ ಎಂಬ ಭಯ ಇದ್ದರೆ ಅವರು ಕೊನೆವರೆಗೂ ಕ್ಷೇತ್ರವನ್ನು ಸೀಕ್ರೆಟ್ ಆಗಿ ಇಟ್ಟುಕೊಂಡು ಚುನಾವಣೆ ಮಾಡಲಿ ಎಂದು ಸವಾಲು ಹಾಕಿದ್ದಾರೆ. 

Written by - Zee Kannada News Desk | Last Updated : Apr 27, 2022, 07:22 PM IST
  • ಐದು ವರ್ಷ ಮುಖ್ಯಮಂತ್ರಿ ಆಗಿ ಯಾವ ಕ್ಷೇತ್ರದಲ್ಲಿ ನಿಲ್ಲಬೇಕು ಅನ್ನೋದು ತೀರ್ಮಾನ ಮಾಡಿಕೊಂಡಿಲ್ಲ
  • ಫೋಟೋ ಜೊತೆ‌ ಬಿಜೆಪಿ ಅವರ ಬರಹ ಅವರ ಕೀಳು ಅಭಿರುಚಿ ತೋರಿಸುತ್ತದೆ
  • ಪಿಎಸ್ ಐ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳನ್ನ ಸಸ್ಪೆಂಡ್ ಅಲ್ಲ.. ಡಿಸ್ಮಿಸ್ ಮಾಡಬೇಕು
HD Kumaraswamy : ಸಿದ್ದರಾಮಯ್ಯಗೆ ಭರ್ಜರಿ ಟಾಂಗ್ ಕೊಟ್ಟ ಕುಮಾರಸ್ವಾಮಿ! title=

ತುಮಕೂರು : ಸಿದ್ದರಾಮಯ್ಯ ತಾನು ಮೊದಲು  ಗೆಲ್ತಾರಾ ಅನ್ನೋದನ್ನು ನೋಡಿಕೊಳ್ಳಲಿ. ಮೈಸೂರು ಭಾಗದಲ್ಲಿ ಕಳೆದ ಬಾರಿ ಏನಾಗಿದೆ ಅವರಿಗೆ ಗೊತ್ತಲ್ವಾ. ಅವರು ಇನ್ನೂ ಕ್ಷೇತ್ರದ ಹುಡುಕಾಟದಲ್ಲಿ ಇದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ. 

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ, ಐದು ವರ್ಷ ಮುಖ್ಯಮಂತ್ರಿ ಆಗಿ ಯಾವ ಕ್ಷೇತ್ರದಲ್ಲಿ ನಿಲ್ಲಬೇಕು ಅನ್ನೋದು ತೀರ್ಮಾನ ಮಾಡಿಕೊಂಡಿಲ್ಲ. ನಮ್ಮ ಪಕ್ಷದ ಬಗ್ಗೆ ಒಂದೂ ಸೀಟು ಗೆಲ್ಲಲ್ಲ ಅನ್ನೋದು ರಾಜಕೀಯವಾಗಿ ಏನೇನೂ ತಿಳಿವಳಿಕೆ ಇಲ್ಲದ ವ್ಯಕ್ತಿ ಹೇಳುವ ಮಾತು. ನಾವುಗಳೆಲ್ಲ ತಂತ್ರಗಾರಿಕೆ ಮಾಡಿ ಸೋಲಿಸುತ್ತೇವೆ ಎಂಬ ಭಯ ಇದ್ದರೆ ಅವರು ಕೊನೆವರೆಗೂ ಕ್ಷೇತ್ರವನ್ನು ಸೀಕ್ರೆಟ್ ಆಗಿ ಇಟ್ಟುಕೊಂಡು ಚುನಾವಣೆ ಮಾಡಲಿ ಎಂದು ಸವಾಲು ಹಾಕಿದ್ದಾರೆ. 

ಇದನ್ನೂ ಓದಿ : Mandya BJP : ಬಿಜೆಪಿ ನಾಯಕರ ದಿಢೀರ್ ಸಭೆ : ಕಮಲ ಸೇರ್ತಾರಾ ಸಂಸದೆ ಸುಮಲತಾ?

ಡಿಕೆ ಶಿವಕುಮಾರ ಜೊತೆ ದಿವ್ಯಾ ಹಾಗರಗಿ ಫೋಟೋ ‌ವಿಚಾರವಾಗಿ ಮಾತನಾಡಿದ ಅವರು, ಫೋಟೋ ಜೊತೆ‌ ಬಿಜೆಪಿ ಅವರ ಬರಹ ಅವರ ಕೀಳು ಅಭಿರುಚಿ ತೋರಿಸುತ್ತದೆ. ಅವರು ನಿಜಕ್ಕೂ ಹಿಂದೂ ಸಂಸ್ಕೃತಿಯನ್ನು ಉಳಿಸುವವರಾದರೆ, ಕೀಳು ಮಟ್ಟದ ಪದಗಳಾದ ಬಾದಾಮಿ.. ಗೋಡಂಬಿ.. ಎಂದು ಹೇಳುತ್ತಿರಲಿಲ್ಲ. ಪಿಎಸ್ ಐ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳನ್ನ ಸಸ್ಪೆಂಡ್ ಅಲ್ಲ.. ಡಿಸ್ಮಿಸ್ ಮಾಡಬೇಕು ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News