ಗದುಗಿನ ಶ್ರೀ ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿ ಹೃದಯಾಘಾತದಿಂದ ವಿಧಿವಶ

ಗದುಗಿನ ತೋಂಟದಾರ್ಯ ಸ್ವಾಮೀಜಿಗಳು ಹೃದಯಾಘಾತದಿಂದ  ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ

Last Updated : Oct 20, 2018, 12:53 PM IST
ಗದುಗಿನ ಶ್ರೀ ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿ ಹೃದಯಾಘಾತದಿಂದ ವಿಧಿವಶ  title=

ಬೆಂಗಳೂರು:ಗದುಗಿನ ತೋಂಟದಾರ್ಯ ಸ್ವಾಮೀಜಿಗಳು ಹೃದಯಾಘಾತದಿಂದ  ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ತೀವ್ರ ಹೃದಯಾಘಾತ ಅನುಭವಿಸಿದ ಶ್ರೀಗಳು ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಜಂಟಿ ಸುದ್ದಿಗೋಷ್ಠಿಯಲ್ಲಿ ಸುದ್ದಿ ತಿಳಿದ ತಕ್ಷಣ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ ದೇವೇಗೌಡ "ಸಿದ್ದಲಿಂಗ ಸ್ವಾಮೀಜಿಗಳು ನೇರ ನುಡಿಯ ಶ್ರೀಗಳಾಗಿದ್ದರು ಅವರ ನಿಧನ ದಿಗ್ಬ್ರಮೆ ಉಂಟು ಮಾಡಿದೆ" ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ. ಇದೆ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಸಹಿತ ಶ್ರೀಗಳ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. 

ಶ್ರೀಗಳ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಹೆಚ್.ಕೆ.ಪಾಟೀಲ್ "ಒಂದು ವಿಶ್ವವಿದ್ಯಾನಿಲಯ ಮಾಡುವ ಕೆಲಸವನ್ನು ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿಗಳು ಮಾಡಿ ತೋರಿಸುತ್ತಿದ್ದರು.ಈಗ ಅವರ ಸಾವಿನಿಂದಾಗಿ ಕರ್ನಾಟಕಕ್ಕೇ ದೊಡ್ಡ ಹಾನಿಯಾಗಿದೆ" ಎಂದು  ಕಂಬನಿ ಮಿಡಿದಿದ್ದಾರೆ.

Trending News