ಗೃಹಜ್ಯೋತಿ ಯೋಜನೆ ಸಕ್ಸಸ್: ರಾಜ್ಯದಲ್ಲಿ 97 ಲಕ್ಷಕ್ಕೂ ಅಧಿಕ ಗ್ರಾಹಕರಿಂದ ಅರ್ಜಿ ಸಲ್ಲಿಕೆ

Griha Jyoti Scheme: ದಿನದಿಂದ ‌ದಿನಕ್ಕೆ‌ ಅರ್ಜಿದಾರರ‌ ಸಂಖ್ಯೆಯಲ್ಲಿ ಏರಿಕೆ‌ ಆಗುತ್ತಿದ್ದು, ಇದುವರೆಗೆ ಒಟ್ಟು 97, 09, 259 ಜನರಿಂದ ಅರ್ಜಿ ಸಲ್ಲಿಕೆಯಾಗಿದೆ. ಇಂದು ಈ ಅರ್ಜಿ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದ್ದು, ಸಂಜೆ ವೇಳೆಗೆ ಒಂದು ಕೋಟಿ ಮೀರುವ ಸಂಭವವಿದೆ.

Written by - Bhavishya Shetty | Last Updated : Jul 5, 2023, 09:10 AM IST
    • 97,09,259 ಗ್ರಾಹಕರಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ನೊಂದಣಿ ಮಾಡಲಾಗಿದೆ
    • ಈ ಅರ್ಜಿ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ
    • ಹೊಸ ಲಿಂಕ್ ‌ಮೂಲಕ ಅರ್ಜಿ ಸಲ್ಲಿಕೆ ಮಾಡಲಾಗಿದ್ದು. ರಾಕೆಟ್ ವೇಗದಲ್ಲಿರುವ ಸರ್ವರ್ ಕೆಲಸ ಮಾಡುತ್ತಿದೆ
ಗೃಹಜ್ಯೋತಿ ಯೋಜನೆ ಸಕ್ಸಸ್: ರಾಜ್ಯದಲ್ಲಿ 97 ಲಕ್ಷಕ್ಕೂ ಅಧಿಕ ಗ್ರಾಹಕರಿಂದ ಅರ್ಜಿ ಸಲ್ಲಿಕೆ title=
Griha Jyoti Scheme

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ಭರ್ಜರಿ ಯಶಸ್ಸು ಸಿಕ್ಕಿದ್ದು, ಈಗಾಗಲೇ ರಾಜ್ಯಾದ್ಯಂತ 97,09,259 ಗ್ರಾಹಕರಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ನೊಂದಣಿ ಮಾಡಲಾಗಿದೆ.

ದಿನದಿಂದ ‌ದಿನಕ್ಕೆ‌ ಅರ್ಜಿದಾರರ‌ ಸಂಖ್ಯೆಯಲ್ಲಿ ಏರಿಕೆ‌ ಆಗುತ್ತಿದ್ದು, ಇದುವರೆಗೆ ಒಟ್ಟು 97, 09, 259 ಜನರಿಂದ ಅರ್ಜಿ ಸಲ್ಲಿಕೆಯಾಗಿದೆ. ಇಂದು ಈ ಅರ್ಜಿ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದ್ದು, ಸಂಜೆ ವೇಳೆಗೆ ಒಂದು ಕೋಟಿ ಮೀರುವ ಸಂಭವವಿದೆ.

ಇದನ್ನೂ ಓದಿ: ಇನ್ನೇಕೆ ಹೇರ್ ಡೈ..? ಈ 3 ಎಲೆಗಳ ಪೇಸ್ಟ್ ಹಚ್ಚಿದರೆ ಬಿಳಿಕೂದಲು ಬುಡದಿಂದಲೇ ಕಪ್ಪಾಗುತ್ತೆ!

 ಹೊಸ ಲಿಂಕ್ ‌ಮೂಲಕ ಅರ್ಜಿ ಸಲ್ಲಿಕೆ ಮಾಡಲಾಗಿದ್ದು. ರಾಕೆಟ್ ವೇಗದಲ್ಲಿರುವ ಸರ್ವರ್ ಕೆಲಸ ಮಾಡುತ್ತಿದೆ. ಇನ್ನು ಯಾವ ಯಾವ ಎಸ್ಕಾಂಗಳಲ್ಲಿ ಎಷ್ಟು ಅರ್ಜಿ ನೊಂದಣಿ ಆಗಿದೆ ಎಂದು ನೋಡುವುದಾದರೆ;

ಬೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 39,80,901 ಗ್ರಾಹಕರಿಂದ ಅರ್ಜಿ ಸಲ್ಲಿಕೆ‌

  • ಚೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 14,95,545 ಜನರಿಂದ ಅರ್ಜಿ ಸಲ್ಲಿಕೆ
  • ಜೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 10,17,080 ಜನರಿಂದ ಅರ್ಜಿ ಸಲ್ಲಿಕೆ
  • ಹೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 20,39,277 ಗ್ರಾಹಕರಿಂದ‌ ಅರ್ಜಿ ಸಲ್ಲಿಕೆ
  • ಮೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 11,29,020ಲಕ್ಷ ಗ್ರಾಹಕರಿಂದ ಅರ್ಜಿ ಸಲ್ಲಿಕೆ
  • HRECS ವ್ಯಾಪ್ತಿಯಲ್ಲಿ ಒಟ್ಟು 48.436 ಜನರಿಂದ ಅರ್ಜಿ ಸಲ್ಲಿಕೆ

ಇನ್ನು ರಾಜ್ಯಾದ್ಯಂತ ಒಟ್ಟು 97,09,259 ಗ್ರಾಹಕರು ಅರ್ಜಿ ನೊಂದಣಿ ಮಾಡಿಕೊಂಡಿದ್ದಾರೆ.

ಇಂದಾದರೂ ಘೋಷಣೆ ಆಗುತ್ತಾ  ವಿಪಕ್ಷ ನಾಯಕನ‌ ಹೆಸರು?

ಕರ್ನಾಟಕದಲ್ಲಿ ಸದ್ಯ ವಿಧಾನಸಭೆ ಬಜೆಟ್ ಅಧಿವೇಶನ ನಡೆಯುತ್ತಿದೆ. ಆದರೆ ಈ ಸೆಷನ್’ನಲ್ಲಿ ಬಿಜೆಪಿ ಮಾತ್ರ ತನ್ನ ಮುಂದಾಳತ್ವ ವಹಿಸಿಕೊಳ್ಳಲು ನಾಯಕನ ನೇಮಕ ಮಾಡದೆ ಭಾಗವಹಿಸಿದೆ. ಇನ್ನು ವಿಪಕ್ಷ ನಾಯಕನ ಆಯ್ಕೆಯನ್ನು ಬಿಜೆಪಿ ಹೈಕಮಾಂಡ್ ಮಾಡಲಿದೆ ಎಂದು ಹೇಳಲಾಗುತ್ತಿದೆ. ನಿನ್ನೆ ಕೇಂದ್ರದ ಇಬ್ಬರು ವೀಕ್ಷಕರ ಸಮ್ಮುಖದಲ್ಲಿ ಅಭಿಪ್ರಾಯ ಸಂಗ್ರಹ ಮಾಡಲಾಗಿದ್ದು, ಸದ್ಯ ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ ಯತ್ನಾಳ್, ಆರಗ ಜ್ಞಾನೇಂದ್ರ ರೇಸ್ ನಲ್ಲಿದ್ದಾರೆ.

ಇದನ್ನೂ ಓದಿ: Ajit Agarkar: ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಜಿತ್ ಅಗರ್ಕರ್ ನೇಮಕ

ಒಂದು ವೇಳೆ ಲಿಂಗಾಯತ ಸಮುದಾಯಕ್ಕೆ ವಿಪಕ್ಷನಾಯಕನ ಪಟ್ಟ ನೀಡುವುದಾದರೆ ಯತ್ನಾಳ್ ಈ ಬಾರಿ ಪ್ರತಿಪಕ್ಷದ ಗದ್ದುಗೆ ಏರಲಿದ್ದಾರೆ. ಈಗಾಗಲೇ ಅಭಿಪ್ರಾಯ ಸಂಗ್ರಹದೊಂದಿಗೆ ದೆಹಲಿಗೆ ವೀಕ್ಷಕರು ಹಿಂತಿರುಗಿದ್ದಾರೆ. ಈ ಹಿನ್ನಲೆಯಲ್ಲಿ ಇಂದು ಮಧ್ಯಾಹ್ನದೊಳಗೆ ಬಿಜೆಪಿ ತನ್ನ ನಾಯಕ ಯಾರು ಎಂಬುದನ್ನು ರಿವೀಲ್ ಮಾಡಲಿದೆಯೋ ಎಂದು ತಿಳಿದುಬರಬೇಕಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News