ರಾಜ್ಯದ ಎಲ್ಲ 46,829 ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ 1,234 ಪದವಿಪೂರ್ವ ಕಾಲೇಜುಗಳಿಗೆ ಉಚಿತವಾಗಿ ವಿದ್ಯುತ್ ಕಲ್ಪಿಸಲು ಶಾಲಾ ಶಿಕ್ಷಣ ಇಲಾಖೆ ಆಯುಕ್ತೆ ಬಿ.ಬಿ.ಕಾವೇರಿ ಸುತ್ತೋಲೆ ಹೊರಡಿಸಿದ್ದಾರೆ.
ಮನೇಲಿ ಬಚ್ಚಿಟ್ಟಿರೋ ಲಕ್ಷ ಲಕ್ಷ ಹಣ, ಚಿನ್ನಾಭರಣ ಸಿಕ್ಬಿಡುತ್ತೋ ಅಂತಾ ಒದ್ದಾಡ್ತಿತ್ತು. ಅವ್ರ ಮಗ್ಳು ಒಂದು ಹೆಜ್ಜೆ ಮುಂದೆ ಹೋಗಿ ಮನೇಲಿದ್ದ 2kg 200gm ಚಿನ್ನವನ್ನ ಬ್ಯಾಗ್ ವೊಂದರಲ್ಲಿ ಕಟ್ಟಿದ್ದಾಕೆ ಸೀದಾ ಪಕ್ಕದಮನೆಗೆ ಎಸೆದಿದ್ಳು. ಅಲ್ಲೂ ಅದೃಷ್ಟ ಕೈಕೊಟ್ಟು ಕಾಂಪೌಂಡ್ ಗೆ ಬ್ಯಾಗ್ ಬಿದ್ದಿದೆ.. ಕೂಡಲೇ ಅಲರ್ಟ್ ಆದ ಕೋಕಾ ಟೀಂ ಬ್ಯಾಗ್ ಚೆಕ್ ಮಾಡ್ದಾಗ ಚಿನ್ನಾಭರಣ ನೋಡಿ ಶಾಕ್ ಆಗಿದ್ರು.
ರಾತ್ರಿ ಆತನ ಪೇಸ್ ಬುಕ್ ನಲ್ಲಿ ಲೈವಿಗೆ ಬಂದು ಕೆಲವು ವಿಚಾರಗಳ ಹಂಚಿಕೊಂಡಿದ್ದು ಇದಾದ ನಂತರ ರಾತ್ರಿ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಅರಣ್ಯದಲ್ಲಿ ಸ್ಕೂಟರ್ ನಿಲ್ಲಿಸಿ ನೀಲಗಿರಿ ಮರಕ್ಕೆ ನೇಣು ಹಾಕಿಕೊಂಡಿದ್ದಾನೆ.ಮೃತಪಟ್ಟಿರುವ ವ್ಯಕ್ತಿಯನ್ನು ಟಿ. ದಾಸರಹಳ್ಳಿಯ ಮಂಜುನಾಥನಗರದ ನಿವಾಸಿ ಮಂಜುನಾಥ್ ಎಂದು ಗುರುತಿಸಲಾಗಿದ್ದು, ಈಗ ನೆಲಮಂಗಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ಯುವಕ-ಯುವತಿ ಪರಸ್ಪರ ಪ್ರೀತಿಸುತ್ತಿದ್ದು, ಕಾಲಕ್ರಮೇಣ ಇಬ್ಬರ ನಡುವಿನ ಪ್ರೀತಿ ಕ್ಷೀಣಿಸಿದೆ ಎಂದ ಮಾತ್ರಕ್ಕೆ ಅವರ ನಡುವಿನ ಒಮ್ಮತದ ದೈಹಿಕ ಸಂಬಂಧವನ್ನು ಅತ್ಯಾಚಾರವೆಂದು ಪರಿಗಣಿಸಲಾಗದು ಎಂದು ಹೈಕೋರ್ಟ್ ಪುನರುಚ್ಚರಿಸಿದೆ.
ಖಾಸಗಿ ಉದ್ಯಮಗಳಲ್ಲಿ ಕೂಡಾ ಕನ್ನಡಿಗರಿಗೆ ಕೆಲವು ಶ್ರೇಣಿಯ ಹುದ್ದೆಗಳನ್ನು ನೂರಕ್ಕೆ ನೂರರಷ್ಟು ಮೀಸಲಿಡಲಾಗುವುದು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.
ಬೆಂಗಳೂರು: ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ವಿಧಾನ ಮಂಡಲ ಅಧಿವೇಶನಕ್ಕೆ ಪೂರ್ವಭಾವಿಯಾಗಿ ಎಲ್ಲ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಸಭೆ ನಡೆಸಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.