ಗಂಡ್ರು ಕುಡುದು ಬಸ್ಟ್ಯಾಂಡ್ ನ್ಯಾಗ ಬೀಳ್ತಾರಿ ಸರ : ಸಿಎಂ ಮುಂದೆ ಸ್ತ್ರೀಯರ ಅಳಲು

ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮಹಿಳೆಯರು ಪಾಠ ಮಾಡಿದ ಘಟನೆ ನಡೆದಿದ್ದು, ಸಾರಾಯಿ ಬಂದ್‌ ಮಾಡಿಸುವಂತೆ ಸಿಎಂಗೆ ಸ್ತ್ರೀಯರು ಒತ್ತಾಯ ಮಾಡಿದ್ದಾರೆ.

Written by - Krishna N K | Last Updated : Jul 25, 2023, 07:54 PM IST
  • ಹಾವೇರಿ ಜಿಲ್ಲಾಸ್ಪತ್ರೆಗೆ ಇಂದು ಸಿಎಂ ಸಿದ್ದರಾಮಯ್ಯ ಅವರು ಭೇಟಿ ನೀಡಿದರು.
  • ಈ ವೇಳೆ ಅವರನ್ನು ಸುತ್ತುವರೆದ ಮಹಿಳೆಯರು, ಮಧ್ಯಪಾನ‌ ನಿಷೇಧಿಸುವಂತೆ ಕಣ್ಣೀರು ಹಾಕಿದರು.
  • ಆಯ್ತು ಆಯ್ತು ಎನ್ನುತ್ತಲೇ ಸಿಎಂ ಸಿದ್ದರಾಮಯ್ಯನವರು ಹೊರ ನಡೆದರು.
ಗಂಡ್ರು ಕುಡುದು ಬಸ್ಟ್ಯಾಂಡ್ ನ್ಯಾಗ ಬೀಳ್ತಾರಿ ಸರ : ಸಿಎಂ ಮುಂದೆ ಸ್ತ್ರೀಯರ ಅಳಲು title=

ಹಾವೇರಿ : ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮಹಿಳೆಯರು ಪಾಠ ಮಾಡಿದ ಘಟನೆ ನಡೆದಿದ್ದು, ಸಾರಾಯಿ ಬಂದ್‌ ಮಾಡಿಸುವಂತೆ ಸಿಎಂಗೆ ಸ್ತ್ರೀಯರು ಒತ್ತಾಯ ಮಾಡಿದ್ದಾರೆ.

ನಗರದ ಜಿಲ್ಲಾಸ್ಪತ್ರೆಗೆ ಇಂದು ಸಿಎಂ ಸಿದ್ದರಾಮಯ್ಯ ಅವರು ಭೇಟಿ ನೀಡಿದರು. ಈ ವೇಳೆ ಅವರನ್ನು ಸುತ್ತುವರೆದ ಮಹಿಳೆಯರು, ಮಧ್ಯಪಾನ‌ ನಿಷೇಧ ಮಾಡುವಂತೆ ಕಣ್ಣೀರು ಹಾಕಿದರು. ಈ ವೇಳೆ ಮದ್ಯ ಪ್ರವೇಶಿಸಿದ ಡೆಪ್ಯೂಟಿ ಸ್ಪೀಕರ್‌ ಓಹ್ ಎಣ್ಣೇನಾ.. ವಿಧಾನಸೌಧದಲ್ಲಿ ಚರ್ಚೆ ಮಾಡ್ತಿವಿ ಬಿಡುವ್ವಾ.. ಎಂದು ಸಮಾಧಾನ ಮಾಡಲು ಮುಂದಾದರು.

ಇದನ್ನೂ ಓದಿ: ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರಿದ ವರ್ಷಧಾರೆ

ಆದರೆ ಸಿದ್ದರಾಮಯ್ಯನವರ ಕೈ ಹಿಡಿದು ಗೋಗರೆದ ಮಹಿಳೆಯರು, ಗಂಡ್ರು ಕುಡುದು ಬಸ್ಟ್ಯಾಂಡ್ ನ್ಯಾಗ ಬೀಳ್ತಾರಿ ಸರ, ಕುಡುದ್ರು ಅಂದ್ರ ಹೆಂಡ್ರ ಮಕ್ಕಳನ್ನು ನೋಡೋದಯಿಲ್ಲಾ. ಸಾರಾಯಿ ಬಂದ್ ಮಾಡಿಸಿದ್ರಂದ ನೀವು ಹುಟ್ಟಿದ್ದೂ ಸಾರ್ಥಕ ಆಕೈತಿ ನೋಡ್ರಿ ಎಂದ ನಾರಿ ಸಿಎಂಗೆ ಮನವಿ ಮಾಡಿದರು.

ಇನ್ನು ಮಹಿಳೆಯರ ಮಾತಿಗೆ ಉಪಸಭಾಪತಿ ರುದ್ರಪ್ಪ ಲಮಾಣಿ ಮತ್ತು ಸ್ಥಳಿಯ ಶಾಸಕರು ವಾವ್.. ವಾವ್.. ಅಂದ್ರೆ, ಆಯ್ತು ಆಯ್ತು ಎನ್ನುತ್ತಲೇ ಸಿಎಂ ಸಿದ್ದರಾಮಯ್ಯನವರು ಹೊರ ನಡೆದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News