ಕಾವೇರಿ ವಿಚಾರವಾಗಿ ದೆಹಲಿಯಲ್ಲಿ ದೇವೇಗೌಡರಿಂದ ಕೇಂದ್ರ ಸಚಿವ ಗಡ್ಕರಿ ಭೇಟಿ

     

Last Updated : Mar 8, 2018, 04:27 PM IST
ಕಾವೇರಿ ವಿಚಾರವಾಗಿ ದೆಹಲಿಯಲ್ಲಿ ದೇವೇಗೌಡರಿಂದ ಕೇಂದ್ರ ಸಚಿವ ಗಡ್ಕರಿ ಭೇಟಿ title=

ನವದೆಹಲಿ: ಇತ್ತೀಚಿಗೆ ಸುಪ್ರಿಂಕೋರ್ಟ್ ನೀಡಿದ ತೀರ್ಪಿನ ವಿಚಾರವಾಗಿ ಚರ್ಚಿಸಲು ದೆಹಲಿಗೆ ಆಗಮಿಸಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಇಂದು ಶ್ರಮ ಶಕ್ತಿ ಭವನದಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಯವರನ್ನು ಭೇಟಿ ಮಾಡಿದರು.

ಭೇಟಿಯ ವೇಳೆ ಸುಪ್ರಿಂ ಕೋರ್ಟಿನ ವಿಷಯಗಳ ಕುರಿತಾಗಿ ಚರ್ಚಿಸಿದ ದೇವೇಗೌಡರು, ಕಾವೇರಿ ನಿರ್ವಹಣಾ ಮಂಡಳಿಯ ವಿಚಾರಾಗಿ ಎರಡು ರಾಜ್ಯಗಳಿಗೆ ನ್ಯಾಯ ಒದಗಿಸುವಂತೆ ಸಚಿವರ ಬಳಿ ಮನವಿ ಮಾಡಿಕೊಂಡರು. ಅಲ್ಲದೆ ಇತ್ತೀಚಿಗೆ ಮಂಡಳಿಯ ರಚನೆಯನ್ನು ತುರ್ತಾಗಿ ಮಾಡಲು ನಿರಾಕರಿಸಿದ್ದ ಸಚಿವರಿಗೆ, ಮಂಡಳಿ ರಚನೆಯ ವೇಳೆ ಈ ಭಾಗದ ಕುಡಿಯುವ ನೀರಿನ ಅಗತ್ಯತೆಯನ್ನು ಪರಿಗಣಿಸುವುದಲ್ಲದೆ ಅದಕ್ಕಿರುವ  ನ್ಯೂನ್ಯತೆಗಳನ್ನು ಸರಿಪಡಿಸಿ ಸುಪ್ರಿಂಕೋರ್ಟ್ ತೀರ್ಪಿನ ಅನುಸಾರವಾಗಿ  ಮಂಡಳಿ ರಚಿಸಬೇಕೆಂದು ಸಚಿವ ನಿತಿನ್ ಗಡ್ಕರಿಯವರಿಗೆ ಮನವಿಮಾಡಿಕೊಂಡರು.

Trending News