ಕೊಡಗಿನ ಕೊಡ್ಲಿಪೇಟೆ ಬಳಿ ಭಾರೀ ಭೂಕುಸಿತ : ಕೊಚ್ಚಿ ಹೋದ ಕಾಫಿ ತೋಟ

ಮಡಿಕೇರಿಯ ಹಲವು ಕಡೆಗಳಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ. ಕೊಡ್ಲಿಪೇಟೆ ಹೋಬಳಿಯ ಊರುಗುತ್ತಿಯಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ಊರುಗುತ್ತಿಯಲ್ಲಿ  ಕಾಫಿ ತೋಟ ಕೊಚ್ಚಿಹೋಗಿದೆ.

Written by - Zee Kannada News Desk | Last Updated : Aug 11, 2022, 11:50 AM IST
  • ಕೊಡಗಿನಲ್ಲಿ ಮತ್ತೆ ಭೂಕುಸಿತ
  • ಕೊಚ್ಚಿ ಹೋಯಿತು ಕಾಫಿ ತೋಟ
  • ಆತಂಕದಲ್ಲಿ ಸ್ಥಳೀಯರು
ಕೊಡಗಿನ ಕೊಡ್ಲಿಪೇಟೆ ಬಳಿ ಭಾರೀ ಭೂಕುಸಿತ : ಕೊಚ್ಚಿ ಹೋದ ಕಾಫಿ ತೋಟ title=
landslide in Kodagu

ಮಡಿಕೇರಿ : ಮಡಿಕೇರಿಯಲ್ಲಿ ಮಳೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಸೋಮವಾರಪೇಟೆ ತಾಲೂಕಿನಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಮಳೆ ಹೆಚ್ಚಾಗುತ್ತಿದ್ದಂತೆಯೇ ಕೊಡ್ಲಿಪೇಟೆ ಹೋಬಳಿಯ ಊರುಗುತ್ತಿಯಲ್ಲಿ ಭಾರೀ ಭೂಕುಸಿತ ಸಂಭವಿಸಿದೆ. ಭೂಕುಸಿತದ ಪರಿಣಾಮ ಕಾಫಿ ತೋಟ ಕೊಚ್ಚಿಹೋಗಿದೆ. 

ಮಡಿಕೇರಿಯ ಹಲವು ಕಡೆಗಳಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ. ಕೊಡ್ಲಿಪೇಟೆ ಹೋಬಳಿಯ ಊರುಗುತ್ತಿಯಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ಊರುಗುತ್ತಿಯಲ್ಲಿ  ಕಾಫಿ ತೋಟ ಕೊಚ್ಚಿಹೋಗಿದೆ.  ವೆಂಕಟೇಶ್ ಎಂಬವರಿಗೆ ಸೇರಿದ ಕಾಫಿ ತೋಟ ಇದಾಗಿದೆ. 

ಇದನ್ನೂ ಓದಿ : ನಾಳೆಯಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಆರಂಭ

ನಿನ್ನೆ ಹರಪಳ್ಳಿಯಲ್ಲಿ ಭಾರೀ ಭೂಕುಸಿತವಾಗಿದ್ದು, ಸ್ಥಳೀಯರನ್ನು ಅಲ್ಲಿಂದ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿತ್ತು. ಇಂದು ಮತ್ತೆ ಊರುಗುತ್ತಿಯಲ್ಲಿ ಸಂಭವಿಸಿದ ಭೂಕುಸಿತದಿಂದ ಸೋಮವಾರಪೇಟೆ ಭಾಗದಲ್ಲಿ ಆತಂಕ ಮನೆ ಮಾಡಿದೆ. ಇದೇ ಮೊದಲ ಬಾರಿಗೆ ಸೋಮವಾರಪೇಟೆ ಭಾಗದಲ್ಲಿ ಭೂಕುಸಿತ  ಸಂಭವಿಸುತ್ತಿದೆ. ಇದು ಸ್ಥಳೀಯರ ಆತಂಕ ಹೆಚ್ಚಿಸಿದೆ. 

ಸೋಮವಾರಪೇಟೆಯ ಪುಷ್ಪಗಿರಿ ತಪ್ಪಲಲ್ಲಿ ಅತೀ ಹೆಚ್ಚು ಮಳೆ‌ ಬೀಳುವ ಪ್ರದೇಶಗಳಾ ಗಿದ್ದರೂ, ಇಲ್ಲಿ ಭೂಕುಸಿತ ಸಂಭವಿಸಿರಲಿಲ್ಲ. ಆದರೆ ಇದೀಗ ಭಾರೀ ಭುಉಕುಸಿತ ಸಂಭವಿಸಿದೆ.  ಕಳೆದ ಕೆಲ ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಸಂಭವಿಸಿದ ಭೂ ಕುಸಿತದಿಂದ ಭಾರೀ ಸಾವು ನೋವು ಸಂಭವಿಸಿತ್ತು. 

ಇದನ್ನೂ ಓದಿ : ಅಬ್ಬಬ್ಬಾ ..! ಬರೋಬ್ಬರಿ 19 ಲಕ್ಷಕ್ಕೆ ಮಾರಾಟವಾದ ಆದ ಹೋರಿ...!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News