ಮರೆಯಾದ ಸುರಪುರಿನ ರಾಜಾವೆಂಕಟಪ್ಪ ನಾಯಕರು; ಅಗಲಿದ ಚೇತನಕ್ಕೆ ಅಭಿಮಾನಿಗಳ ಕಣ್ಣೀರಧಾರೆ

Raja Venkatappa Naik: ಕಲ್ಯಾಣ ಕರ್ನಾಟಕ ಭಾಗದಲ್ಲಿ ʼರಾಜಾʼ ಮನೆತನದಲ್ಲಿ ಗುರುತಿಸಿಕೊಂಡು ಜನಸೇವೆಯ ಮೂಲಕ ಜನರ ಮನಗೆದ್ದ ಸುರಪುರದ ಶಾಸಕ ರಾಜಾ ವೆಂಕಟಪ್ಪ ನಾಯಕರ ಕಥೆಯೇ ಬಲು ರೋಚಕವಾಗಿದೆ. ​

Written by - Zee Kannada News Desk | Last Updated : Feb 25, 2024, 05:57 PM IST
  • ಸುರಪುರದ ರಾಜಾ ಮನೆತನದ ನಾಯಕರು ಇನ್ನು ನೆನಪು ಮಾತ್ರ
  • ಅಗಲಿದ ಚೇತನಕ್ಕೆ ಅಭಿಮಾನಿಗಳ ಕಣ್ಣೀರಧಾರೆ
  • ಸ್ವಾತಂತ್ರ್ಯ ಹೋರಾಟಗಾರರ ಮನೆತನದ ರಾಜಕೀಯ ಮುತ್ಸದಿ ರಾಜಾ ವೆಂಕಟಪ್ಪ ನಾಯಕ
ಮರೆಯಾದ ಸುರಪುರಿನ ರಾಜಾವೆಂಕಟಪ್ಪ ನಾಯಕರು; ಅಗಲಿದ ಚೇತನಕ್ಕೆ ಅಭಿಮಾನಿಗಳ ಕಣ್ಣೀರಧಾರೆ title=
ಅಗಲಿದ ಚೇತನಕ್ಕೆ ಅಭಿಮಾನಿಗಳ ಕಣ್ಣೀರಧಾರೆ

ಯಾದಗಿರಿ: ಯಾದಗಿರಿ ಜಿಲ್ಲೆಯ ಸುರಪುರದ ಹಾಲಿ ಕಾಂಗ್ರೆಸ್‌ ಶಾಸಕ ರಾಜಾ ವೆಂಕಟಪ್ಪ ನಾಯಕ(೬೭) ಹೃದಯಘಾತದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದ ೨೦ ದಿನಗಳಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ರಾಜಾ ವೆಂಕಟಪ್ಪ ನಾಯಕ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. 

ರಾಜಾ ವೆಂಕಟಪ್ಪ ನಾಯಕ ಅವರು ನಾಲ್ಕು ಬಾರಿ ಸುರಪುರ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ೧೯೯೪ರಲ್ಲಿ ಕರ್ನಾಟಕ ಕಾಂಗ್ರೆಸ್‌ ಪಾರ್ಟಿ(KCP), ೧೯೯೯, ೨೦೧೩ ಮತ್ತು ೨೦೨೩ರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಯ್ಕೆಯಾಗಿದ್ದರು. ಕರ್ನಾಟಕ ಉಗ್ರಾಣ ನಿಗಮ ಅಧ್ಯಕ್ಷರಾಗಿ ಕೆಲ ದಿನಗಳ ಹಿಂದಷ್ಟೇ ಅವರು ಅಧಿಕಾರ ಸ್ವೀಕರಿಸಿದ್ದರು. 

ಇದನ್ನೂ ಓದಿ: ಶಾಸಕ ವೆಂಕಟಪ್ಪ ನಾಯಕ ಅವರ ಅಂತಿಮ ದರ್ಶನ ಪಡೆದ ಸಿಎಂ

ಜನಸೇವೆ ಮೂಲಕ ಜನರ ಮನಗೆದ್ದ ನಾಯಕ!

ಕಲ್ಯಾಣ ಕರ್ನಾಟಕ ಭಾಗದಲ್ಲಿ ʼರಾಜಾʼ ಮನೆತನದಲ್ಲಿ ಗುರುತಿಸಿಕೊಂಡು ಜನಸೇವೆಯ ಮೂಲಕ ಜನರ ಮನಗೆದ್ದ ಸುರಪುರದ ಶಾಸಕ ರಾಜಾ ವೆಂಕಟಪ್ಪ ನಾಯಕರ ಕಥೆಯೇ ಬಲು ರೋಚಕವಾಗಿದೆ. ಸುರಪುರ ಎಂದಾಕ್ಷಣ ನೆನಪಿಗೆ ಬರೋದೇ ʼರಾಜಾʼ ಮನೆತನದ ಆಡಳಿತ. 1857ರಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಹೋರಾಟಗಾರರ ಮನೆತನದಲ್ಲಿ ಜನಿಸಿದ ʼರಾಜಾʼ ನಾಯಕರು ಮೊದಲಿನಿಂದಲೂ ಜನಸೇವೆ ಮೂಲಕ ಜನರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದುಕೊಂಡು ಕಾಂಗ್ರೆಸ್‌ನಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದವರು. ಕಳೆದ ೪ ಭಾರಿ ಶಾಸಕರಾಗಿ ಕಾಂಗ್ರೆಸ್‌ ಪಕ್ಷದಿಂದ ಚುನಾಹಿತರಾಗಿ ಕ್ಷೇತ್ರದಲ್ಲಿ ತಮ್ಮದೆ ಛಾಪು ಹೊಂದಿದ್ದ ಹಿರಿಯ ರಾಜಕಾರಿಣಿಯಾಗಿದ್ದರು.

ಸಿಎಂ ಸಿದ್ದರಾಮಯ್ಯ ಹಾಗೂ ಎಐಸಿಸಿ ಮಲ್ಲಿಕಾರ್ಜುನ್‌ ಖರ್ಗೆಯವರ ಆಪ್ತ ಬಳಗದ ಪಕ್ಷನಿಷ್ಠ ಶಾಸಕರಾಗಿ ಗುರುತಿಸಿಕೊಂಡವರು. 1994ರಲ್ಲಿ ಮೊದಲ ಬಾರಿಗೆ ಚುನಾವಣೆ ಎದುರಿಸಿ ಶಾಸಕರಾಗುವ ಮೂಲಕ ವಿಧಾನಸೌಧ ಪ್ರವೇಶಿಸಿದರು. ಘಟಾನುಘಟಿ ರಾಜಕೀಯ ನಾಯಕರ ನಡುವೆ ಒಡಾನಾಟ ಹೊಂದಿದ್ದ ಅವರು ಕ್ಷೇತ್ರದ ಅಭಿವೃದ್ಧಿಗೆ ಉತ್ತಮ ಕೆಲಸ ಮಾಡುವ ಮೂಲಕ 1999 ಹಾಗೂ ಸಿದ್ದರಾಮಯ್ಯರು ಮುಖ್ಯಮಂತ್ರಿಯಾದ 2013ರಲ್ಲಿ ೩ನೇ ಅವಧಿಗೆ ಶಾಸಕರಾಗಿದ್ದರು. ಈ ಬಾರಿಯೂ ಅಂದರೆ 2023ರಲ್ಲಿ ಮರು ಆಯ್ಕೆಯಾಗುವ ಮೂಲಕ ಸೋಲು ಕಾಣದ ಸರ್ದಾರನಂತೆ ಆಡಳಿತ ನಡೆಸಿದರು. ಎದುರಾಳಿಗಳಿಲ್ಲದೆ ಅಜಾತಶತ್ರುನಂತೆ ರಾಜಕೀಯದಲ್ಲಿ ದಿಟ್ಟ ಹೆಚ್ಚೆಯನ್ನಿಟ್ಟು ತಮ್ಮದೇ ವರ್ಚಿಸ್ಸಿನ ಮೂಲಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ಖರ್ಗೆಯವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಬಲಗೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾ ಬಂದವರು.

ಇದನ್ನೂ ಓದಿ: ಮಹಾದಾಯಿ ಯೋಜನೆ ಹಿನ್ನಡೆಗೆ ಕಾಂಗ್ರೆಸ್ ನೇರ ಕಾರಣ: ಬಸವರಾಜ ಬೊಮ್ಮಾಯಿ

ಸುರಪುರದ ಶಾಸಕ ರಾಜಾ ವೆಂಕಟಪ್ಪ ನಾಯಕರನ್ನು ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯರ ಸಂಪುಟದಲ್ಲಿ ಉಗ್ರಾಣ ನಿಗಮದ ಅಧ್ಯಕ್ಷರಾಗಿ ನೇಮಕಗೊಳಿಸಲಾಗಿತ್ತು. ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಆಸ್ಪತ್ರೆಗೆ ದಾಖಲಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದು ಕ್ಷೇತ್ರದ ಜನರು ದುಃಖತೃಪ್ತರಾಗಿದ್ದಾರೆ. ಅಗಲಿದ ಚೇತನನಿಗೆ ಅಭಿಮಾನಿಗಳು ಕಣ್ಣೀರಿನ ವಿದಾಯ ಅರ್ಪಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News