ನಾವಿಕನಿಲ್ಲದೆ ಮುಳುಗುತ್ತಿರುವ ಬಿಜೆಪಿ ಹಡಗಿನಿಂದ ಎಲ್ಲರೂ ಹೊರ ಜಿಗಿಯುವವರೇ?: ಕಾಂಗ್ರೆಸ್

ಬಿಜೆಪಿಯಲ್ಲಿ ಸಮರ್ಥ ನಾಯಕತ್ವ ಇಲ್ಲದ ಕಾರಣ, ಪಕ್ಷದ ಕೆಲವು ಮಾಜಿ ಸಚಿವರು ಹಾಗೂ ಮಾಜಿ ಶಾಕಸರು ನನ್ನೊಂದಿಗೆ ದೂರವಾಣಿ ಕರೆ ಮಾಡಿ ಪಕ್ಷ ಬಿಡುವ ಬಗ್ಗೆ ಮಾತನಾಡಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿಕೆ ನೀಡಿದ್ದರು.

Written by - Puttaraj K Alur | Last Updated : Oct 29, 2023, 06:08 PM IST
  • ನಾಯಕತ್ವವಿಲ್ಲದ ಬಿಜೆಪಿ ನಾವಿಕನಿಲ್ಲದೆ ಮುಳುಗುತ್ತಿರುವ ಹಡಗು ಆಗಿದೆ
  • ಮುಳುಗುವ ಹಡಗಿನಿಂದ ಎಲ್ಲರೂ ಹೊರ ಜಿಗಿಯುವವರೇ? ಎಂದು ಪ್ರಶ್ನಿಸಿದ ಕಾಂಗ್ರೆಸ್
  • ರೇಣುಕಾಚಾರ್ಯ ಹೇಳುವಂತೆ ಬಿಜೆಪಿ ತನ್ನ ಅಸಾಮರ್ಥ್ಯ ಬಹಿರಂಗವಾಗಿ ಒಪ್ಪಿಕೊಳ್ಳುವುದೇ..?
ನಾವಿಕನಿಲ್ಲದೆ ಮುಳುಗುತ್ತಿರುವ ಬಿಜೆಪಿ ಹಡಗಿನಿಂದ ಎಲ್ಲರೂ ಹೊರ ಜಿಗಿಯುವವರೇ?: ಕಾಂಗ್ರೆಸ್ title=
ಬಿಜೆಪಿ ನಾವಿಕನಿಲ್ಲದೆ ಮುಳುಗುತ್ತಿರುವ ಹಡಗು!

ಬೆಂಗಳೂರು: ನಾಯಕತ್ವವಿಲ್ಲದ ಬಿಜೆಪಿ ನಾವಿಕನಿಲ್ಲದೆ ಮುಳುಗುತ್ತಿರುವ ಹಡಗು, ಮುಳುಗುವ ಹಡಗಿನಿಂದ ಎಲ್ಲರೂ ಹೊರ ಜಿಗಿಯುವವರೇ...? ಎಂದು ಕಾಂಗ್ರೆಸ್ ಪ್ರಶ್ನಿಸಿದೆ. #BJPvsBJP ಹ್ಯಾಶ್‍ಟ್ಯಾಗ್ ಬಳಸಿ ಭಾನುವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ಎಂ.ಪಿ.ರೇಣುಕಾಚಾರ್ಯ ಹೇಳಿಕೆ ಉಲ್ಲೇಖಿಸಿ ಬಿಜೆಪಿ ವಿರುದ್ಧ ಕಿಡಿಕಾರಿದೆ.

‘ಬಿಜೆಪಿಯಲ್ಲಿ ಸಮರ್ಥ ನಾಯಕತ್ವ ಇಲ್ಲದ ಕಾರಣ, ಪಕ್ಷದ ಕೆಲವು ಮಾಜಿ ಸಚಿವರು ಹಾಗೂ ಮಾಜಿ ಶಾಕಸರು ನನ್ನೊಂದಿಗೆ ದೂರವಾಣಿ ಕರೆ ಮಾಡಿ ಪಕ್ಷ ಬಿಡುವ ಬಗ್ಗೆ ಮಾತನಾಡಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿಕೆ ನೀಡಿದ್ದರು. ಎಂ.ಪಿ.ರೇಣುಕಾಚಾರ್ಯ ಹೇಳಿಕೆ ವಿಚಾರವಾಗಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ‘ಬಿಜೆಪಿಯಲ್ಲಿ ಸೃಷ್ಟಿಯಾಗಿರುವ ಆಂತರಿಕ ಕಲಹದ ಬಗ್ಗೆ ವ್ಯಂಗ್ಯವಾಡಿದೆ. ‘ಒಂದೆಡೆ ರಾಜ್ಯ ಬಿಜೆಪಿಯನ್ನು ದ್ವೇಷಿಸುತ್ತಿರುವ ಹೈಕಮಾಂಡ್, ಮತ್ತೊಂದೆಡೆ ಬಿ.ಎಸ್.ಯಡಿಯೂರಪ್ಪ ಬಣವನ್ನು ಹಣಿಯುತ್ತಿರುವ ಸಂತೋಷ ಕೂಟ, ಇನ್ನೊಂದೆಡೆ ಆಂತರಿಕ ಕಿತ್ತಾಟ!’ವೆಂದು ಕಾಂಗ್ರೆಸ್ ಕುಟುಕಿದೆ.

ಇದನ್ನೂ ಓದಿ: ಆದಾಯದ ಮೂಲ ಹೆಚ್ಚಿಸಲು KSRTCಯಿಂದ ಹೊಸ ಹೊಸ ಪ್ಲ್ಯಾನ್!

‘ಎಲ್ಲರೂ ಹೊರಹೋದ ಮೇಲೆ ಹಾಳೂರಿಗೆ ಉಳಿದವನೇ ಗೌಡ ಎಂಬಂತೆ ನಾನೇ ನಾಯಕ ಎಂದು ಎನಿಸಿಕೊಳ್ಳಲು ಬಿ.ಎಲ್.ಸಂತೋಷ್ ಕಾಯುತ್ತಿದ್ದಾರೆ. ಎಂ.ಪಿ.ರೇಣುಕಾಚಾರ್ಯ ಹೇಳುವಂತೆ ಬಿಜೆಪಿ ತನ್ನ ಅಸಾಮರ್ಥ್ಯ ಬಹಿರಂಗವಾಗಿ ಒಪ್ಪಿಕೊಳ್ಳುವುದೇ ಅಥವಾ ರೇಣುಕಾಚಾರ್ಯರನ್ನು ಕಿಕ್ ಔಟ್ ಮಾಡುವುದೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಪ್ರಧಾನಿ ಮೋದಿಯದ್ದೂ ನಕಲಿತನ ಅಲ್ಲವೇ?

‘ಜನರ ಕಿವಿ ಮೇಲೆ ಹೂವು ಇಡುವುದು ಬಿಜೆಪಿಗೆ ಕರಗತವಾದ ವಿಧ್ಯೆ. ಚುನಾವಣೆ ಗಿಮಿಕ್ ಗಾಗಿ ಪ್ರಧಾನಿ ಮೋದಿ ಕೈಯಲ್ಲಿ ಮಾನ್ಯತೆ ಇಲ್ಲದ ಹಕ್ಕುಪತ್ರ ವಿತರಿಸಿ ಜನರನ್ನು ಮೂರ್ಖರನ್ನಾಗಿಸುವ ಕೆಲಸ ಮಾಡಿದೆ ಬಿಜೆಪಿ. ತಾಂಡಾಗಳು, ಹಟ್ಟಿಗಳ ಕಂದಾಯ ಗ್ರಾಮ ಘೋಷಣೆಗೆ ಅಧಿಸೂಚನೆ ಹೊರಡಿಸದೆಯೇ ಹಕ್ಕುಪತ್ರ ವಿತರಿಸಿದ ಹಿಂದಿನ ಬಿಜೆಪಿ ಸರ್ಕಾರ ಬಡ ಜನರನ್ನು ಅಣಕಿಸುವ ಕೆಲಸ ಮಾಡಿದೆ. ಇಂತಹ ನಕಲಿ ಹಕ್ಕುಪತ್ರವನ್ನು ವಿತರಿಸಲು ಮೋದಿಯಂತಹ ಸೂಕ್ತ ವ್ಯಕ್ತಿಯನ್ನೇ ಆಯ್ದುಕೊಂಡಿದೆ ಬಿಜೆಪಿ! ಅವರದ್ದೂ ನಕಲಿತನ ಅಲ್ಲವೇ!’ ಎಂದು ಕಾಂಗ್ರೆಸ್ ಟೀಕಿಸಿದೆ.

ಇದನ್ನೂ ಓದಿ: ಪ್ರತಿಬಾರಿಯಂತೆ ಈ ಬಾರಿಯೂ ‘ಅಪ್ಪು’ಗೆ ಕಡ್ಲೆಪುರಿ ಹಾರ ಅರ್ಪಿಸಿದ ಅಜ್ಜಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News