ಕೆಳಗಿನ ಮನೆಯಲ್ಲಿ ವಾಸವಿದ್ದ ವಿವಾಹಿತ ಮಹಿಳೆಯನ್ನು ಪಟಾಯಿಸಿದ ಭೂಪ...!

ಅಚ್ಚರಿಯ ಘಟನೆಯೊಂದರಲ್ಲಿ ಕೆಳಗಿನ ಮನೆಯ ವಿವಾಹಿತ ಮಹಿಳೆಯು ಮೇಲ್ಮನೆ ಪರ ಪುರುಷನ ಜೊತೆ ಓಡಿ ಹೋಗಿರುವ ಘಟನೆ ಬೆಂಗಳೂರಿನ ಜ್ಞಾನ ಭಾರತಿ ಪೋಲಿಸ್ ವ್ಯಾಪ್ತಿಯಲ್ಲಿ ನಡೆದಿದೆ.

Written by - Zee Kannada News Desk | Last Updated : Jan 20, 2023, 01:03 PM IST
  • ಈ ಕುರಿತಾಗಿ ತನ್ನ ಹೆಂಡತಿ ಕಾಣೆಯಾಗಿದ್ದಾಳೆ ಎಂದು ಮುಬಾರಕ್ ಪೊಲೀಸರಿಗೆ ದೂರು ನೀಡಿದ್ದಾರೆ.
  • ಮುಬಾರಕ್ ಮತ್ತು ಶಾಜೀಯಾ ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದರು
  • ನವೀದ್ ಅವರ ಜೊತೆಯೇ ಶಾಜಿಯಾ ಓಡಿ ಹೋಗಿದ್ದಾರೆ ಎಂದು ಅವರು ಸಂಶಯ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ
ಕೆಳಗಿನ ಮನೆಯಲ್ಲಿ ವಾಸವಿದ್ದ ವಿವಾಹಿತ ಮಹಿಳೆಯನ್ನು ಪಟಾಯಿಸಿದ ಭೂಪ...! title=
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಚ್ಚರಿಯ ಘಟನೆಯೊಂದರಲ್ಲಿ ಕೆಳಗಿನ ಮನೆಯ ವಿವಾಹಿತ ಮಹಿಳೆಯು ಮೇಲ್ಮನೆ ಪರ ಪುರುಷನ ಜೊತೆ ಓಡಿ ಹೋಗಿರುವ ಘಟನೆ ಬೆಂಗಳೂರಿನ ಜ್ಞಾನ ಭಾರತಿ ಪೋಲಿಸ್ ವ್ಯಾಪ್ತಿಯಲ್ಲಿ ನಡೆದಿದೆ.

ಈ ಕುರಿತಾಗಿ ತನ್ನ ಹೆಂಡತಿ ಕಾಣೆಯಾಗಿದ್ದಾಳೆ ಎಂದು ಮುಬಾರಕ್ ಪೊಲೀಸರಿಗೆ ದೂರು ನೀಡಿದ್ದಾರೆ.ಮುಬಾರಕ್ ಮತ್ತು ಶಾಜೀಯಾ ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದರು.ಈಗ ಏಕಾಏಕಿ ಮುಬಾರಕನ್ ಪತ್ನಿ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರು ನವೀದ್ ಅವರ ಜೊತೆಯೇ ಶಾಜಿಯಾ ಓಡಿ ಹೋಗಿದ್ದಾರೆ ಎಂದು ಅವರು ಸಂಶಯ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.  

ಇದನ್ನೂ ಓದಿ: ಚಿಕ್ಕಬಳ್ಳಾಪುರ: ರಾಮಪಟ್ಟಣ ಸರ್ಕಲ್‌ನಲ್ಲಿ ನವಜಾತ ಶಿಶು ಪತ್ತೆ

ಇಬ್ಬರು ಡಿಸೆಂಬರ್ 9 ,2022 ರಂದು ಕಾಣೆಯಾಗಿದ್ದಾರೆ, ಅಂದು ಮನೆ ಬಿಟ್ಟು ಹೋದವರು ಇದುವರೆಗೆ ವಾಪಸ್ ಬಂದೆ ಇಲ್ಲ ಜೊತೆಗೆ ಶಾಜಿಯಾ ತನ್ನ ಜೊತೆ ಪುಟ್ಟ ಮಗುವನ್ನು ಸಹ ಕರೆದ್ದಾಳೆ ಎಂದು ಪತಿ ಮುಬಾರಕ್ ಕಣ್ಣೀರಿಟ್ಟಿದ್ದಾರೆ.ಈಗ ಝೀನತ್ ಮತ್ತು ಮುಬಾರಕ್ ತಮ್ಮ ಪತಿ ಪತ್ನಿ ಇಬ್ಬರೂ ಕಾಣೆಯಾಗಿದ್ದಾರೆ ಎಂದು ಪ್ರತ್ಯೇಕವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಠೇವಣಿ ಹಣ ಮರಳಿಸದ ಅಂಚೆ ಇಲಾಖೆಗೆ ಗ್ರಾಹಕರ ಆಯೋಗದಿಂದ ದಂಡ

ಈ ಕುರಿತಾಗಿ ಇಬ್ಬರಿಂದ ಜ್ಙಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ‌ ದೂರು ದಾಖಲಾಗಿದೆ.ದೂರು ದಾಖಲಾಗಿ ಒಂದು ತಿಂಗಳು ಕಳೆದರು ಕೂಡ ಪೋಲಿಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಸಿ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ ನಿಂಬರಗಿ ಭೇಟಿ ಮಾಡಿ ಮನವಿ ಜ್ಞಾನಭಾರತಿ‌ ಠಾಣೆ ಇನ್ಸ್ ಪೆಕ್ಟರ್ ಮೇಲೆ ಮೌಖಿಕ ದೂರು ದಾಖಲಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

 

Trending News