Fire Accident : ಕಟ್ಟಿಗೆ ಅಡ್ಡೆಯಲ್ಲಿ ಕಾಣಿಸಿಕೊಂಡ ಭಾರೀ ಪ್ರಮಾಣದ ಬೆಂಕಿ! ಸತತ 6 ಗಂಟೆ ನಂದಿಸುವ ಕಾರ್ಯ 

ನಾಗರಾಜ್ ಎಂಬುವರಿಗೆ ಸೇರಿದ ಸಾಮಿಲ್ ನಲ್ಲಿ ನಿನ್ನೆ ರಾತ್ರಿ‌ 11ಕ್ಕೆ  ಬೆಂಕಿ ಕಾಣಿಸಿಕೊಂಡಿದೆ. ಆದ್ರೆ ಅದೃಷ್ಟವಶಾತ ಯಾವುದೇ ಸಾವು ನೋವು ಸಂಭವಿಸಿಲ್ಲ.

Written by - Channabasava A Kashinakunti | Last Updated : Jan 6, 2022, 01:30 PM IST
  • ಮಂಜುನಾಥ ಸಾಮಿಲ್ ನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ
  • ಜಿಲ್ಲೆಯ ಭದ್ರಾವತಿ ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ಮಂಜುನಾಥ ಸಾಮಿಲ್
  • ಬೆಂಕಿಗೆ ಭಾರೀ ಪ್ರಮಾಣದ ಮರಮುಟ್ಟು ಆಹುತಿಯಾಗಿವೆ
Fire Accident : ಕಟ್ಟಿಗೆ ಅಡ್ಡೆಯಲ್ಲಿ ಕಾಣಿಸಿಕೊಂಡ ಭಾರೀ ಪ್ರಮಾಣದ ಬೆಂಕಿ! ಸತತ 6 ಗಂಟೆ ನಂದಿಸುವ ಕಾರ್ಯ  title=

ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ಮಂಜುನಾಥ ಸಾಮಿಲ್ ನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ನಾಗರಾಜ್ ಎಂಬುವರಿಗೆ ಸೇರಿದ ಸಾಮಿಲ್ ನಲ್ಲಿ ನಿನ್ನೆ ರಾತ್ರಿ‌ 11ಕ್ಕೆ  ಬೆಂಕಿ ಕಾಣಿಸಿಕೊಂಡಿದೆ. ಆದ್ರೆ ಅದೃಷ್ಟವಶಾತ ಯಾವುದೇ ಸಾವು ನೋವು ಸಂಭವಿಸಿಲ್ಲ.

ಬೆಂಕಿಗೆ(Fire Acciden) ಭಾರೀ ಪ್ರಮಾಣದ ಮರಮುಟ್ಟು ಆಹುತಿಯಾಗಿವೆ. ಭಾರಿ ಪ್ರಮಾಣದ ಬೆಂಕಿ ನಂದಿಸಲು ತರೀಕೆರೆ, ಚೆನ್ನಗಿರಿ, ಶಿವಮೊಗ್ಗ ಭದ್ರಾವತಿ, ವಿಐಎಸ್ಎಲ್, ಎಂಪಿಎಂ ಹಾಗೂ ಕಡೂರಿನಿಂದ 10ಕ್ಕೂ ಹೆಚ್ಚು ಫೈರ್ ಎಂಜಿನ್ ಗಳು ಗಮಿಸಿದ್ದವು. ಸತತ 6 ಗಂಟೆಗೂ ಹೆಚ್ಚು ಕಾಲ ಬೆಂಕಿ ನಂದಿಸುವ ಕಾರ್ಯಚರಣೆ ನಡೆಯಿತು. 

ಇದನ್ನೂ ಓದಿ : ಸಿದ್ದರಾಮಯ್ಯ ನಮ್ಮ ಆಸ್ತಿ, ಅವರು ಚೆನ್ನಾಗಿರಲಿ ಎಂದು ಪಾದಯಾತ್ರೆ ಮಾಡಬೇಡಿ ಎಂದಿದ್ದು: ಸಚಿವ ಈಶ್ವರಪ್ಪ

ಸಾಮಿಲ್ ನಿಂದ ಸ್ಕಂದ ಸ್ಯಾನಿಟರಿ, ಜಿಎಸ್ ಆಟೋಮೊಬೈಲ್, ಎಸ್ ಎಲ್ ವಿ ಪವರ್ ಸಿಸ್ಟಮ್, ಆಫ್ರಿನ್ ಪ್ಲೈ ವುಡ್ ಅಂಗಡಿ ಸೇರಿದಂತೆ ಅಕ್ಕಪಕ್ಕದ ಅಂಗಡಿಗಳಿಗೆ ಬೆಂಕಿ(Fire) ತಗುಲಿದೆ. ಹೀಗಾಗಿ ರಾತ್ರಿ ಇಡೀ ಪ್ರದೇಶದಲ್ಲಿ ಕರೆಂಟ್ ಕಡಿತ ಮಾಡಲಾಗಿತ್ತು. 50ಕ್ಕೂ ಹೆಚ್ಚು ಅಗ್ನಿ ಶಾಮಕ ಸಿಬ್ಬಂದಿ ಯಿಂದ ಬೆಂಕಿ ನಂದಿಸುವ ಕಾರ್ಯ ನಡೆಯಿತು, ಕಡೆಗೂ ಬೆಂಕಿ ನಂದಿಸುವ ಕಾರ್ಯದಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News