ಮನ್ಸೂರ್ ಅಲಿಖಾನ್ ಅಪ್ಪಟ ಜಾತ್ಯತೀತ ವ್ಯಕ್ತಿ, ಶಿಕ್ಷಣ ದಾನಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಅವರ ಪರವಾಗಿ ರಾಜಾಜಿನಗರ, ತಿಮ್ಮಯ್ಯ ರಸ್ತೆ ಸೇರಿ ಹಲವು ಕಡೆ ಬಿರುಸಿನ ಪ್ರಚಾರ ಮಾಡಿ ಮಾತನಾಡಿದರು.

Written by - Prashobh Devanahalli | Last Updated : Apr 8, 2024, 08:13 PM IST
    • ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿಖಾನ್
    • ತಿಮ್ಮಯ್ಯ ರಸ್ತೆ ಸೇರಿ ಹಲವು ಕಡೆ ಬಿರುಸಿನ ಪ್ರಚಾರ
    • ರಾಜ್ಯದ ಎಲ್ಲಾ ಕಡೆ ಬದಲಾವಣೆಯ ಗಾಳಿ ಜೋರಾಗಿ ಬೀಸುತ್ತಿದೆ
ಮನ್ಸೂರ್ ಅಲಿಖಾನ್ ಅಪ್ಪಟ ಜಾತ್ಯತೀತ ವ್ಯಕ್ತಿ, ಶಿಕ್ಷಣ ದಾನಿ: ಸಿಎಂ ಸಿದ್ದರಾಮಯ್ಯ title=
File Photo

ಬೆಂಗಳೂರು: ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಪಿ.ಸಿ.ಮೋಹನ್ ಮೂರು ಬಾರಿ ಗೆದ್ದರೂ ಕ್ಷೇತ್ರಕ್ಕೆ, ಬೆಂಗಳೂರಿಗೆ ಮೂರು ಕಾಸಿನ ಕೆಲಸ ಮಾಡಿಲ್ಲ. ಹೀಗಾಗಿ ಇವರಿಗೆ ಈ ಬಾರಿ ಮನೆಗೆ ಕಳಿಸಿ ವಿಶ್ರಾಂತಿ ಕೊಡಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.

ಇದನ್ನೂ ಓದಿ: ವಿರಾಟ್, ರೋಹಿತ್ ಅಲ್ಲ, ಈತನೇ ಅತ್ಯಂತ ಯಶಸ್ವಿ ನಾಯಕ: ಗೌತಮ್ ಗಂಭೀರ್ ಕೊಂಡಾಡಿದ್ದು ಯಾರನ್ನು?

ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಅವರ ಪರವಾಗಿ ರಾಜಾಜಿನಗರ, ತಿಮ್ಮಯ್ಯ ರಸ್ತೆ ಸೇರಿ ಹಲವು ಕಡೆ ಬಿರುಸಿನ ಪ್ರಚಾರ ಮಾಡಿ ಮಾತನಾಡಿದರು.

ಪಿ.ಸಿ ಮೋಹನ್ ಮೂರು ಬಾರಿ ಇಲ್ಲಿಂದ ಗೆದ್ದಿದ್ದಾರೆ. ಪಾರ್ಲಿಮೆಂಟಿನಲ್ಲಿ ಮೂರು ದಿನವಾದರೂ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಮಾತಾಡಿದ್ದಾರಾ? ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯವನ್ನು ಒಂದು ದಿನವೂ ಪ್ರಶ್ನಿಸಿಲ್ಲ. ಬೆಂಗಳೂರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಬಗ್ಗೆ, ಅಭಿವೃದ್ಧಿಯ ಬಗ್ಗೆ ಪಿ.ಸಿ.ಮೋಹನ್ ಒಂದೇ  ಒಂದು ದಿನವಾದರೂ ಮಾತಾಡಿದ್ದಾರಾ ಎಂದು ಪ್ರಶ್ನಿಸಿದರು, ನೆರೆದಿದ್ದ ಜನ ಸಮುದಾಯ ಇಲ್ಲ ಇಲ್ಲ ಎಂದು ಕೂಗಿತು.

ಇದನ್ನೂ ಓದಿ: ಈ ಸೊಪ್ಪು ನೆನೆಹಾಕಿದ ನೀರಷ್ಟೇ ಸಾಕು: ಹಳಸಿದ ಬಾಯಿಗೆ ಕುಡಿದರೆ ಸೊಂಟದ ಹಠಮಾರಿ ಬೊಜ್ಜು 5 ದಿನದಲ್ಲಿ ಸರಾಗವಾಗಿ ಇಳಿಯುತ್ತೆ!

ರಾಜ್ಯದ ಎಲ್ಲಾ ಕಡೆ ಬದಲಾವಣೆಯ ಗಾಳಿ ಜೋರಾಗಿ ಬೀಸುತ್ತಿದೆ. ಮೋದಿ ಗಾಳಿ ಎಲ್ಲೂ ಇಲ್ಲ. ಹೀಗಾಗಿ ಈ ಬಾರಿ ಮನ್ಸೂರ್ ಅಲಿ ಖಾನ್ ಅವರು ಗೆಲ್ಲುತ್ತಾರೆ. ನಿಮ್ಮ ಆಶೀರ್ವಾದ ಇರಲಿ ಎಂದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News