ಗೋಲ್ಡ್ ಕ್ರೌನ್ ಸಬಲೈಮ್ ಬಿಲ್ಡರ್ಸ್ ಗೆ ದಂಡ ಮತ್ತು ಪರಿಹಾರದ ಆದೇಶ

ಧಾರವಾಡದ ಟೋಲ್ ನಾಕಾದ ವಾಸಿ ಹೆರಾಲ್ಡ್ ಜೋಷೆಫ್ ಎಂಬುವವರು ಇಮ್ರಾನ್ ಕಳ್ಳಿಮನಿ ಎಂಬುವವರ ಜಾಹೀರಾತಿನ ಮೇರೆಗೆ ಕೆಲಗೇರಿಯಲ್ಲಿ ಅಭಿವೃದ್ಧಿ ಪಡಿಸುತ್ತಿರುವ ಫಾರ್ಮ್ ಹೌಸ್‍ನ್ನು ರೂ.40 ಲಕ್ಷ ರೂಪಾಯಿಗೆ ದಿ:25/01/2021 ರಂದು ಖರೀದಿಸಿದ್ದರು.

Written by - Manjunath N | Last Updated : Aug 5, 2023, 07:03 AM IST
  • ಈ ಬಗ್ಗೆ ಉಭಯತರ ಮಧ್ಯೆ ಖರೀದಿ ಕರಾರು ಪತ್ರ ಆಗಿತ್ತು. ದೂರುದಾರರು ರೂ.35 ಲಕ್ಷ ಮುಂಗಡ ಹಣವನ್ನು ಪಾವತಿಸಿದ್ದರು.
  • ಎದುರುದಾರ/ ಬಿಲ್ಡ್‍ರ್ ಕರಾರಿನಂತೆ ನಿಗದಿತ ಅವಧಿಯಲ್ಲಿ ಲೇಔಟ್ ಮಾಡಿ ಫಾರ್ಮ ಹೌಸ್ ಖರೀದಿಗೆ ಕೊಡಲಿಲ್ಲ.
  • ಅಂತಹವರ ನಡಾವಳಿಯಿಂದ ತನಗೆ ಮೋಸವಾಗಿದೆ ಮತ್ತು ಅವರು ಸೇವಾ ನ್ಯೂನ್ಯತೆ ಎಸಗಿದ್ದಾರೆ
ಗೋಲ್ಡ್ ಕ್ರೌನ್ ಸಬಲೈಮ್ ಬಿಲ್ಡರ್ಸ್ ಗೆ ದಂಡ ಮತ್ತು ಪರಿಹಾರದ ಆದೇಶ title=

ಧಾರವಾಡ : ಧಾರವಾಡದ ಟೋಲ್ ನಾಕಾದ ವಾಸಿ ಹೆರಾಲ್ಡ್ ಜೋಷೆಫ್ ಎಂಬುವವರು ಇಮ್ರಾನ್ ಕಳ್ಳಿಮನಿ ಎಂಬುವವರ ಜಾಹೀರಾತಿನ ಮೇರೆಗೆ ಕೆಲಗೇರಿಯಲ್ಲಿ ಅಭಿವೃದ್ಧಿ ಪಡಿಸುತ್ತಿರುವ ಫಾರ್ಮ್ ಹೌಸ್‍ನ್ನು ರೂ.40 ಲಕ್ಷ ರೂಪಾಯಿಗೆ ದಿ:25/01/2021 ರಂದು ಖರೀದಿಸಿದ್ದರು.

ಇದನ್ನೂ ಓದಿ: ಆ.06 ರಂದು 508 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ

ಈ ಬಗ್ಗೆ ಉಭಯತರ ಮಧ್ಯೆ ಖರೀದಿ ಕರಾರು ಪತ್ರ ಆಗಿತ್ತು. ದೂರುದಾರರು ರೂ.35 ಲಕ್ಷ ಮುಂಗಡ ಹಣವನ್ನು ಪಾವತಿಸಿದ್ದರು. ಎದುರುದಾರ/ ಬಿಲ್ಡ್‍ರ್ ಕರಾರಿನಂತೆ ನಿಗದಿತ ಅವಧಿಯಲ್ಲಿ ಲೇಔಟ್ ಮಾಡಿ ಫಾರ್ಮ ಹೌಸ್ ಖರೀದಿಗೆ ಕೊಡಲಿಲ್ಲ. ಅಂತಹವರ ನಡಾವಳಿಯಿಂದ ತನಗೆ ಮೋಸವಾಗಿದೆ ಮತ್ತು ಅವರು ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತ ಹೇಳಿ ಬಿಲ್ಡರ ವಿರುದ್ಧ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.

ಇದನ್ನೂ ಓದಿ: ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಚಾಲನೆ : ಫೋಟೋಸ್‌ ನೋಡಿ

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷ ಈಶಪ್ಪ.ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ದೂರುದಾರನಿಂದ ರೂ.35 ಲಕ್ಷ ಹಣ ಪಡೆದುಕೊಂಡು ಎದುರುದಾರ ಲೇಔಟ್ ಅಭಿವೃದ್ಧಿಪಡಿಸಿ ಅವರಿಗೆ ಫಾರ್ಮ ಹೌಸ್ ನೋಂದಣಿ ಮಾಡಿಕೊಡಲು ವಿಫಲರಾಗಿರುವುದು ಮತ್ತು ದೂರುದಾರನಿಗೆ ಹಣವನ್ನು ಹಿಂತಿರುಗಿಸದೆ ಇರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.

ದೂರುದಾರರು ಸಂದಾಯ ಮಾಡಿದ ರೂ.35 ಲಕ್ಷ ಮತ್ತು ಅದರ ಮೇಲೆ ದಿ:25/01/2021 ರಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ.8 ರಂತೆ ವಾರ್ಷಿಕ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ ಎದುರುದಾರರಿಗೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ.50,000/- ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000/- ನೀಡುವಂತೆ ಎದುರುದಾರನಿಗೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News