" ರಾಜಕೀಯ ಬೇಕಿದ್ರೆ ಬಿಡ್ತೀನಿ, ಮಂಡ್ಯ ಬಿಡಲ್ಲ "

ನಾನು ರಾಜಕೀಯಕ್ಕೆ ಬಂದಿರುವುದೇ ಮಂಡ್ಯದ ಜನರಿಗಾಗಿ. ಹಾಗಾಗಿ ರಾಜಕೀಯ ಬೇಕಾದರೆ ಬಿಡುತ್ತೇನೆ ಆದರೆ ಮಂಡ್ಯ ಬಿಡುವುದಿಲ್ಲ ಎಂದು ಸಂಸದೆ ಸುಮಲತಾ ಮದ್ದೂರಿನಲ್ಲಿ ತಿಳಿಸಿದ್ದಾರೆ.  

Written by - Ranjitha R K | Last Updated : Nov 17, 2022, 03:23 PM IST
  • ಮಂಡ್ಯ ಬಿಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ ಸುಮಲತಾ
  • ನಾನು ರಾಜಕೀಯಕ್ಕೆ ಬಂದಿರುವುದೇ ಮಂಡ್ಯದ ಜನರಿಗಾಗಿ ಎಂದ ಸಂಸದೆ
  • ಚುನಾವಣೆಯಲ್ಲಿ ತಟಸ್ಥವಾಗಿರುವುದಾಗಿ ಹೇಳಿಕೆ
" ರಾಜಕೀಯ ಬೇಕಿದ್ರೆ ಬಿಡ್ತೀನಿ, ಮಂಡ್ಯ ಬಿಡಲ್ಲ " title=
Sumalatha

ಮಂಡ್ಯ : ರಾಜಕೀಯ ಬೇಕ್ಕಿದ್ದರೆ ಬಿಡುತ್ತೇನೆ ಆದರೆ, ಮಂಡ್ಯ ಬಿಡುವುದಿಲ್ಲ ಎಂದು ಸಂಸದೆ ಸುಮಲತಾ ಮದ್ದೂರಿನಲ್ಲಿ  ಹೇಳಿದ್ದಾರೆ. ನಾನು ರಾಜಕೀಯಕ್ಕೆ ಬಂದಿರೋದೆ ಮಂಡ್ಯಕ್ಕೋಸ್ಕರ. ಏನೂ ಆಗಬೇಕು ಎನ್ನುವ ದೃಷ್ಟಿಯಿಂದ ರಾಜಕೀಯಕ್ಕೆ ಬಂದಿಲ್ಲ. ರಾಜಕೀಯದಲ್ಲಿ ಬೇಕಾದರೆ ಇಂದು‌  ಇರುತ್ತೇನೆ, ನಾಳೆ  ಬಿಡುತ್ತೇನೆ. ಆದರೆ ಮಂಡ್ಯ ಬಿಡಲ್ಲ ಎಂದು ಸುಮಲಾತಾ ತಿಳಿಸಿದ್ದಾರೆ. 

ನಾನು ರಾಜಕೀಯಕ್ಕೆ ಬಂದಿರುವುದೇ ಮಂಡ್ಯದ ಜನರಿಗಾಗಿ. ಹಾಗಾಗಿ ರಾಜಕೀಯ ಬೇಕಾದರೆ ಬಿಡುತ್ತೇನೆ ಆದರೆ ಮಂಡ್ಯ ಬಿಡುವುದಿಲ್ಲ ಎಂದು ಸಂಸದೆ ಸುಮಲತಾ ಮದ್ದೂರಿನಲ್ಲಿ ತಿಳಿಸಿದ್ದಾರೆ. ಹೊಸ ಕ್ಷೇತ್ರ ಹುಡುಕುತ್ತಿರುವುದು ಯಾರ ಕನಸು ಅನ್ನುವುದು ಗೊತ್ತಿಲ್ಲ. ಆದರೆ ಹಾಗೇನಾದರೂ ಮಾಡುತ್ತಿದ್ದರೆ, ಅವರ ಕನಸಿಗೆ ನೀರು ಚೆಲ್ಲಿದ ಹಾಗೇನೆ ಎಂದಿದ್ದಾರೆ.  ನಾನು ರಾಜಕೀಯ ಬೇಕಾದರೆ ಬಿಡುತ್ತೇನೆ. ಆದರೆ ಯಾವುದೇ ಕಾರಣಕ್ಕೂ ಮಂಡ್ಯ ಬಿಡುವುದಿಲ್ಲ ಎಂದು ಖಡಾ ಖಂಡಿತವಾಗಿ ಹೇಳಿದ್ದಾರೆ. 

ಇದನ್ನೂ ಓದಿ : Arecanut Price Today: ಇಂದು ಯಾವ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಎಷ್ಟಿದೆ..?
 
ಚುನಾವಣೆಗೂ ಮುನ್ನವೆ ತಟಸ್ಥ ನೀತಿಯನ್ನು ಸುಮಲತಾ ಅನುಸರಿಸಿದ್ದಾರೆ. ಯಾರಿಗೂ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ. ಇನ್ನೂ ಕೂಡ ಅಭ್ಯರ್ಥಿಗಳು ಯಾರು ಅಂತ ಗೊತ್ತಿಲ್ಲ. ಹೀಗಾಗಿ ಯಾರಿಗೆ ಅಂತ ಬೆಂಬಲ ಕೊಡಲಿ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಎಲ್ಲರೂ ನನ್ನ ಪರ ಇದ್ದಾರೆ.
ಚುನಾವಣೆಯಲ್ಲಿ ನನಗೆ ಬೆಂಬಲವನ್ನೂ ಕೂಡ ಕೊಟ್ಟಿದ್ದಾರೆ. ಹಾಗಾಗಿ ಯಾರಿಗೂ ಬೆಂಬಲ ಕೊಡದೆ ತಟಸ್ಥವಾಗಿರುವುದಾಗಿ ಹೇಳಿದ್ದಾರೆ. 
ಕಳೆದ ಬಾರಿಯೂ  ಸುಮಲತಾ ತಟಸ್ಥ ನೀತಿಯನ್ನೇ ಅನುಸರಿಸಿದ್ದರು. 

ಇದನ್ನೂ ಓದಿ : ಅತಿವೇಗದ ಪರಿಣಾಮ ನಿಯಂತ್ರಣಕ್ಕೆ ಸಿಗದೆ ರಸ್ತೆಯಲ್ಲೇ ಪಲ್ಟಿಯಾದ ಟಾಟಾ ಏಸ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News