ನಿಗದಿತ ಅವಧಿಯಲ್ಲಿ ಪ್ಲ್ಯಾಟ್ ಕೊಡದ ಬಿಲ್ಡರ್‍ಗೆ ರೂ.36.50 ಲಕ್ಷ ಪರಿಹಾರ ಮತ್ತು ದಂಡ

ಹುಬ್ಬಳ್ಳಿ ಜೆ.ಸಿ.ನಗರದ ನಿವಾಸಿಗಳಾದ ಪ್ರದೀಪ್, ಸವಿತಾ, ಸಮರ್ಥ ಹುಬ್ಬಳಿಕರ್ ಎಂಬುವವರು ಹುಬ್ಬಳ್ಳಿಯ ವೈಷ್ಣವಿ ಪ್ರೋಜೆಕ್ಟ್‍ನವರು ಪುರುಷೋತ್ತಮ ನಗರದಲ್ಲಿ ಅಭಿವೃದ್ಧಿ ಪಡಿಸುತ್ತಿದ್ದ ನೂತನ ಅಪಾರ್ಟಮೆಂಟ್‍ನಲ್ಲಿ ಪ್ಲ್ಯಾಟ್ ನಂ.402, ಖರೀದಿಸುವ ಕುರಿತು ಮುಂಗಡ ರೂ.36.50 ಲಕ್ಷ ಹಣಕೊಟ್ಟು 2015 ರಲ್ಲಿ ಒಪ್ಪಂದ ಮಾಡಿಕೊಂಡಿದ್ದರು.

Written by - Zee Kannada News Desk | Last Updated : Feb 1, 2023, 05:40 PM IST
  • ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿರುತ್ತಾರೆ ಅಂತಾ ಅಭಿಪ್ರಾಯಪಟ್ಟು ತೀರ್ಪು ನೀಡಿದೆ
  • ಕ್ರಮ ಕೈಗೊಳ್ಳುವಂತೆ ಫಿರ್ಯಾದಿದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು
  • ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಸಂದಾಯ ಮಾಡುವಂತೆ ಆಯೋಗ ಆದೇಶಿಸಿದೆ
ನಿಗದಿತ ಅವಧಿಯಲ್ಲಿ ಪ್ಲ್ಯಾಟ್ ಕೊಡದ ಬಿಲ್ಡರ್‍ಗೆ ರೂ.36.50 ಲಕ್ಷ ಪರಿಹಾರ ಮತ್ತು ದಂಡ title=
ಸಾಂದರ್ಭಿಕ ಚಿತ್ರ

ಧಾರವಾಡ: ಹುಬ್ಬಳ್ಳಿ ಜೆ.ಸಿ.ನಗರದ ನಿವಾಸಿಗಳಾದ ಪ್ರದೀಪ್, ಸವಿತಾ, ಸಮರ್ಥ ಹುಬ್ಬಳಿಕರ್ ಎಂಬುವವರು ಹುಬ್ಬಳ್ಳಿಯ ವೈಷ್ಣವಿ ಪ್ರೋಜೆಕ್ಟ್‍ನವರು ಪುರುಷೋತ್ತಮ ನಗರದಲ್ಲಿ ಅಭಿವೃದ್ಧಿ ಪಡಿಸುತ್ತಿದ್ದ ನೂತನ ಅಪಾರ್ಟಮೆಂಟ್‍ನಲ್ಲಿ ಪ್ಲ್ಯಾಟ್ ನಂ.402, ಖರೀದಿಸುವ ಕುರಿತು ಮುಂಗಡ ರೂ.36.50 ಲಕ್ಷ ಹಣಕೊಟ್ಟು 2015 ರಲ್ಲಿ ಒಪ್ಪಂದ ಮಾಡಿಕೊಂಡಿದ್ದರು.

ಒಪ್ಪಂದವಾದ 24 ತಿಂಗಳ ಒಳಗಾಗಿ ಪ್ಲ್ಯಾಟ್ ಕಟ್ಟಿಕೊಡಲು ಕರಾರು ಇತ್ತು. ಆದರೆ ಬಿಲ್ಡರ ನಿಗದಿತ ಅವಧಿಯಲ್ಲಿ ತನ್ನ ಪ್ಲ್ಯಾಟ್‍ಕಟ್ಟಿ ಸ್ವಾಧೀನತೆ ನೀಡದೆ ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿದ್ದಾರೆ ಅಂತಾ ಬಿಲ್ಡರವರ ಮೇಲೆ ಕ್ರಮ ಕೈಗೊಳ್ಳುವಂತೆ ಫಿರ್ಯಾದಿದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಇದನ್ನೂ ಓದಿ: ʼನಾನು ಎನ್ನುವ ಅಹಂನ್ನು ಬಿಟ್ಟು ದೇವರಿಗೆ ತಲೆ ಬಾಗಬೇಕುʼ

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಸದಸ್ಯರಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಪ್ರಬು.ಸಿ ಹಿರೇಮಠ ದೂರುದಾರರಿಂದ ಮುಂಗಡವಾಗಿ ಪಡೆದ ಹಣವನ್ನು ಡೆವಲಪರ್ ತಮ್ಮ ವೈಯಕ್ತಿಕ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡು ಅವರಿಗೆ ಕರಾರಿನ ಪ್ರಕಾರ ನಿಗದಿತ ಅವಧಿಯಲ್ಲಿ ಪ್ಲ್ಯಾಟ್ ಕಟ್ಟಿ ಸ್ವಾಧೀನತೆ ಕೊಡದೇ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿರುತ್ತಾರೆ ಅಂತಾ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.

ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಗೆ ರೂ. 5300 ಕೋಟಿ ಅನುದಾನ: ಸಿಎಂ ಬೊಮ್ಮಾಯಿ ಹರ್ಷ

ಈ ಬಗ್ಗೆ ವೈಷ್ಣವಿ ಪ್ರೋಜೆಕ್ಟ್ ಪಾಲುದಾರರಾದ ರಾಜೇಂದ್ರ ಹಳ್ಳಿಕೇರಿಯವರು ದೂರುದಾರರಿಂದ ಪಡೆದ ಮುಂಗಡ ಹಣ ರೂ.36.50 ಲಕ್ಷಗಳನ್ನು ದಿ:01/01/2017 ರಿಂದ ಶೇ.8% ರಂತೆ ಬಡ್ಡಿ ಲೆಕ್ಕ ಹಾಕಿ ಕೊಡುವಂತೆ ತಿಳಿಸಿದೆ. ಜೊತೆಗೆ ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗೆ ರೂ.50,000/- ಪರಿಹಾರ ಹಾಗೂ ಪ್ರಕರಣದ ಖರ್ಚು ವೆಚ್ಚ ರೂ.10,000/-ಗಳನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಸಂದಾಯ ಮಾಡುವಂತೆ ಆಯೋಗ ಆದೇಶಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News