Shivamogga Lokasabha Election Result 2024 :ಶಿವಮೊಗ್ಗದಲ್ಲಿ ಬಿ ವೈ ರಾಘವೇಂದ್ರ ಭರ್ಜರಿ ಜಯಭೇರಿ : ನಾಲ್ಕನೇ ಬಾರಿಗೆ ಸಂಸದರಾಗಿ ಆಯ್ಕೆ

Shivamogga Lokasabha Election Result 20204 :ಅಂಚೆ ಮತಗಳ ಎಣಿಕೆ ಕಾರ್ಯ ಆರಂಭವಾಗಿದ್ದು, ಅಂಚೆ ಮತಗಳ ಎಣಿಕೆಯಲ್ಲಿ  ಬಿ.ವೈ ರಾಘವೇಂದ್ರ ಮುನ್ನಡೆ ಕಾಯ್ದುಕೊಂಡಿದ್ದಾರೆ.

Written by - Ranjitha R K | Last Updated : Jun 4, 2024, 01:31 PM IST
  • ಶಿವಮೊಗ್ಗ ಕ್ಷೇತ್ರದಲ್ಲಿ ಪ್ರಾಬಲ್ಯ ಯಾರದ್ದು ?
  • 2009ರಿಂದ ಬಿಜೆಪಿಯದ್ದೇ ಮೇಲುಗೈ
  • ಎರಡು ಕುಟುಂಬಗಳ ನಡುವಿನ ಹಣಾಹಣಿ
Shivamogga Lokasabha Election Result 2024 :ಶಿವಮೊಗ್ಗದಲ್ಲಿ ಬಿ ವೈ ರಾಘವೇಂದ್ರ ಭರ್ಜರಿ ಜಯಭೇರಿ : ನಾಲ್ಕನೇ ಬಾರಿಗೆ ಸಂಸದರಾಗಿ ಆಯ್ಕೆ title=

Shivamogga Lokasabha Election Result 20204 :ಶಿವಮೊಗ್ಗದಲ್ಲಿ ಮತ್ತೆ ಕಮಲಾ ಅರಳಿದೆ.ನಾಲ್ಕನೇ ಬಾರಿಗೆ ಸಂಸದರಾಗಿ ಬಿ ವೈ ರಾಘವೇಂದ್ರ ಜಯಭೇರಿ ಬಾರಿಸಿದ್ದಾರೆ. ಎರಡನೇ ಬಾರಿ ಬಿವೈಆರ್ ಎದುರು ಸ್ಪರ್ಧಿಸಿರುವ ಗೀತಾ ಶಿವರಾಜ್ ಕುಮಾರ್ ಸೋಲು ಅನುಭವಿಸಿದ್ದಾರೆ. ಬಿ ವೈ ರಾಘವೇಂದ್ರ 181,000ಕ್ಕೂ ಅಧಿಕ‌ ಮತಗಳಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಭಾರೀ ಅಂತರದಿಂದ ಬಿ. ವೈ ರಾಘವೇಂದ್ರ ಜಯಭೇರಿ ಬಾರಿಸಿದ್ದು ಕ್ಷೇತ್ರದಲ್ಲಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ.   ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರಗೆ ಕೊಬ್ಬರಿ ಹಾರ ಹಾಕಲು ಸಿದ್ದತೆ ನಡೆಸಿದ್ದಾರೆ. 

2009ರಿಂದ ಬಿಜೆಪಿಯದ್ದೇ ಮೇಲುಗೈ : 
2009ರಿಂದ ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಹಿಡಿತ ಸಾಧಿಸಿದೆ. ಬಿಎಸ್ ಯಡಿಯೂರಪ್ಪ ಅವರ ಮಗ ಬಿವೈ ರಾಘವೇಂದ್ರ, 2009ರಲ್ಲಿ ಮೊದಲ ಬಾರಿಗೆ ತಮ್ಮ ಅದೃಷ್ಟ ಪರೀಕ್ಷಿಸಿದ್ದರು. 2018ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಪುನಃ ಬಿವೈ ರಾಘವೇಂದ್ರ ಸ್ಪರ್ಧಿಸಿದ್ದರು.2019ರ ಚುನಾವಣೆಯಲ್ಲಿಯೂ ರಾಘವೇಂದ್ರ  ಜಯ ಭೇರಿ ಬಾರಿಸಿದ್ದರು. ಈ ಬಾರಿ ಕೂಡಾ ಬಿಜೆಪಿಯಿಂದ ರಾಘವೇಂದ್ರ ಕಣಕ್ಕಿಳಿದಿದ್ದರು.   

ಇದನ್ನೂ ಓದಿ : ಚಾಮರಾಜನಗರದಲ್ಲಿ ಕಾಂಗ್ರೆಸ್- ಬಿಜೆಪಿ ಜಿದ್ದಾಜಿದ್ದಿ: ಯಾರೇ ಗೆದ್ದರೂ ಮೊದಲ ಬಾರಿ ಸಂಸತ್ ಗೆ ಪ್ರವೇಶ

ಬಿ.ವೈ ರಾಘವೇಂದ್ರ ಅವರು ಈ ಬಾರಿ ಎದುರಿಸಿದ್ದು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್ ಕುಮಾರ್ ಅವರನ್ನು. ಇದಕ್ಕೂ ಮುನ್ನ ರಾಘವೇಂದ್ರ ಮಧು ಬಂಗಾರಪ್ಪ ಅವರನ್ನು ಎದುರಿಸಿ ಗೆಲುವು ಸಾಧಿಸಿದ್ದಾರೆ. 2019ರಲ್ಲಿ ಬಿವೈ ರಾಘವೇಂದ್ರ 7.29 ಲಕ್ಷ ಮತಗಳನ್ನು ಪಡೆದರೆ, ಮಧು ಬಂಗಾರಪ್ಪ 5.06 ಲಕ್ಷ ಮತಗಳನ್ನು ಪಡೆದು ಸೋಲು ಉಂಡಿದ್ದಾರೆ. ಇನ್ನು 2014ರ ಲೋಕಸಭೆ ಚುನಾವಣೆಯಲ್ಲಿ  ಗೀತಾ ಶಿವರಾಜ್‌ಕುಮಾರ್ ಬಿಎಸ್ ಯಡಿಯೂರಪ್ಪ ಅವರ ವಿರುದ್ದ ಸ್ಪರ್ಧಿಸಿದ್ದಾರೆ. ಆದರೆ  ಅಂದು ಗೀತಾ ಸ್ಪರ್ಧೆಗೆ ಇಳಿದದ್ದು ಜೆಡಿಎಸ್ ಪರ.ಆ ಸಂದರ್ಭದಲ್ಲಿ 2.40 ಲಕ್ಷ ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರು ಗೀತಾ ಶಿವರಾಜ್ ಕುಮಾರ್. 

ಎರಡು ಕುಟುಂಬಗಳ ನಡುವಿನ ಹಣಾಹಣಿ :   
ಈ ಕ್ಷೇತ್ರದಲ್ಲಿ 2009ರಿಂದ ನಡೆದ ಚುನಾವಣೆಗಳಲ್ಲಿ ಎದುರಾಗಿದ್ದು ಎರಡು ಕುಟುಂಬ ಅನ್ನುವುದು ಇಲ್ಲಿ ವಿಶೇಷ.2009ರಲ್ಲಿ ಎಸ್ ಬಂಗಾರಪ್ಪ ಹಾಗೂ ಬಿವೈ ರಾಘವೇಂದ್ರ, 2014ರಲ್ಲಿ ಗೀತಾ ಶಿವರಾಜ್‌ಕುಮಾರ್ ಮತ್ತು ಬಿಎಸ್ ಯಡಿಯೂರಪ್ಪ, 2018ರ ಉಪ ಚುನಾವಣೆ ಹಾಗೂ 2019ರ ಚುನಾವಣೆಗಳಲ್ಲಿ ಬಿವೈ ರಾಘವೇಂದ್ರ ಮತ್ತು ಮಧು ಬಂಗಾರಪ್ಪ ನಡುವೆ ಪೈಪೋಟಿ ಏರ್ಪಟ್ಟಿತ್ತು. ಇದೀಗ ಈ ಬಾರಿ ಅಂದರೆ 2024ರಲ್ಲಿ ಗೀತಾ ಶಿವರಾಜ್‌ಕುಮಾರ್ ಮತ್ತು ಬಿವೈ ರಾಘವೇಂದ್ರ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಆದ್ರೆ ಈ ಹಣಾಹಣಿಯಲ್ಲಿ ಗೀತಾ ಸೋಲುಂಡಿದ್ದು, ರಾಘವೇಂದ್ರ ಗೆಲುವು ದಾಖಲಿಸಿದ್ದಾರೆ.      

ಇದನ್ನೂ ಓದಿ : Mysuru Kodagu Lokasabha Election Result :ಮೈಸೂರು ಕೊಡಗು ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಬಿಜೆಪಿ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News